ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ರಾಯಚೂರಿನ ಲೇಖಕ, ವ್ಯಂಗ್ಯಚಿತ್ರಕಾರ ಈರಣ್ಣ ಬೆಂಗಾಲಿ ಅವರು ಬರೆದ ಅಮರ ಚಿಂತನೆ ಪುಸ್ತಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಿನ ಪ್ರಶಸ್ತಿಿಗೆ ಆಯ್ಕೆೆಯಾಗಿದೆ.
2024ನೇ ಸಾಲಿನ ಪುಸ್ತಕಗಳಿಗೆ ನೀಡಲ್ಪಡುವ ದತ್ತಿಿ ಪ್ರಶಸ್ತಿಿಗಳಲ್ಲಿ ಈರಣ್ಣ ಬೆಂಗಾಲಿ ಅವರು ನಾಡಿನ ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಅವರ ಬದುಕು ಬರಹ ಕುರಿತು ಬರೆದ ಪುಸ್ತಕಕ್ಕೆೆ ಜಿ.ಆರ್.ರೇವಯ್ಯ ದತ್ತಿಿ ಪ್ರಶಸ್ತಿಿ ಲಭಿಸಿದೆ. ಒಟ್ಟು 900 ಕೃತಿಗಳಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ ಬೆಂಗಾಲಿಯವರ ಈ ಪುಸ್ತಕ ಆಯ್ಕೆೆ ಮಾಡಿದೆ. ಪ್ರಶಸ್ತಿಿ ಪ್ರದಾನ ಪರಿಷತ್ತಿಿನ ಸಭಾಂಗಣದಲ್ಲಿ ಇದೇ 12ರಂದು ಜರುಗಲಿದೆ.
ಕಥೆ, ಕವನ, ಕಾದಂಬರಿ, ಗಜಲ್, ಹೈಕು, ವಚನ, ಮಕ್ಕಳ ಕವನ, ಮಕ್ಕಳ ಕತೆ, ಮತ್ತು ವ್ಯಂಗ್ಯಚಿತ್ರದ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿಿರುವ ತಮಗೆ ಸಿಕ್ಕ ಮನ್ನಣೆಯ ಈ ಪ್ರಶಸ್ತಿಿಯು ಲೇಖಕರಿಗೆ ದೊರೆಯುವ ಪ್ರೋೋತ್ಸಾಾಹವಾಗಿದ್ದು, ಕನ್ನಡಿಗರ ಪ್ರಾಾತಿನಿಧಿಕ ಸಂಸ್ಥೆೆಯಾದ ಪರಿಷತ್ತಿಿನಿಂದ ಪ್ರಶಸ್ತಿಿಗೆ ಆಯ್ಕೆೆಯಾದದ್ದು ಸಂತಸ ತಂದಿದೆ ಎಂದು ಈರಣ್ಣ ಬೆಂಗಾಲಿ ಹೇಳಿದ್ದಾಾರೆ.
ಕಸಾಪ ಜಿಲ್ಲಾಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಸಾಹಿತಿ ವೀರಹನುಮಾನ, ಎಚ್.ಎಚ್.ಮ್ಯಾಾದಾರ್, ಮಹಾಂತೇಶ ಮಸ್ಕಿಿ, ಜಿ.ಬಸವರಾಜ ಶಿವಲಿಂಗ, ಮಲ್ಕಪ್ಪ ಪಾಟೀಲ ಸೇರಿ ಅವರ ಒಡನಾಡಿಗಳು, ಗೆಳೆಯರು ಅಭಿನಂದಿಸಿದ್ದಾಾರೆ.
ಬೆಂಗಾಲಿಯ ಅಮರ ಚಿಂತನೆಗೆ ಕೇಂದ್ರ ಕಸಾಪ ದತ್ತಿ ಪ್ರಶಸ್ತಿ

