ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಅಮೇರಿಕಾದ ಜೊತೆ ಕೃಷಿಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದ ಭಾರತರ ರೈತರ ಜೀವನಕ್ಕೆೆ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಆಪಾದಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,ಪ್ರಧಾನ ಮಂತ್ರಿಿ ನರೇಂದ್ರ ಮೋದಿ ಅವರು ಅಮೇರಿಕಾದ ಜೊತೆ ಕೃಷಿಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದ ದೇಶದ ರೈತರಿಗೆ ಬಹುದೊಡ್ಡ ಹಾನಿ ಎಂದು ಉಲ್ಲೇಖಿಸಿದರು. ನಮ್ಮ ದೇಶದ ರೈತರು ಬೆಳೆದ ಬೆಳೆಯಿಂದ 150 ಕೋಟಿ ಜನರಿಗೆ ಆಹಾರ ನೀಡಿ, ಉಳಿದ ಆಹಾರ ಧಾನ್ಯಘಿ, ಕೃಷಿಗೆ ಪೂರಕ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರ್ತು ಮಾಡುತ್ತಿಿದ್ದೇವೆ. ಆದರೆ, ಈ ಒಪ್ಪಂದದಿಂದ ಅಮೇರಿಕಾದಿಂದ ಮಾಂಸ, ಹಾಲು, ಹಾಲಿನ ಉತ್ಪನ್ನಘಿ, ಬೀಜ ಸೇರಿ ಹಲವು ಕೃಷಿ ಪೂರಕ ವಸ್ತುಗಳಿಗೆ ಶೂನ್ಯ ಸುಂಕ ನೀಡಿ ಆಮದು ಮಾಡಿಕೊಳ್ಳುವುದರಿಂದ ನಮ್ಮ ರೈತರ ಬೆಳೆದ ಬೆಳೆ, ಉತ್ಪನ್ನಗಳಿಗೆ ದೊಡ್ಡ ಅಪಾಯಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಪ್ರಧಾನಿಯವರು ಮರು ಪರಿಶೀಲಿಸಬೇಕು ಆ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒತ್ತಾಾಯಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆಯ ಹೆಸರು ಬದಲಾವಣೆ ಮಾಡುವ ಅಗತ್ಯ ಇರಲಿಲ್ಲಘಿ. ಮೂಲ ಉದ್ದೇಶಕ್ಕೆೆ ಧಕ್ಕೆೆ ತಂದಿರುವುದು ಸಲ್ಲದು. ಆದರೆ, ಮನರೇಗಾದಲ್ಲಿಯೇ ಬಿಗಿ ಕ್ರಮಗಳ ತೆಗೆದುಕೊಂಡು ಅದನ್ನು ರೈತರಿಗೂ ಅನ್ವಯಿಸಿ, ಕೃಷಿಗೂ ಅಲ್ಲಿನ ಕೂಲಿಕಾರರ ಬಳಸಿಕೊಳ್ಳಲು ಅವಕಾಶ ಕೊಡಬಹುದಿತ್ತುಘಿ.ಈ ಹಿಂದೆ 100 ದಿನ ಕೂಲಿಯನ್ನೇ ಬಹುತೇಕ ಪಂಚಾಯಿತಿಗಳಲ್ಲಿ ಕೊಟ್ಟಿಿಲ್ಲಘಿ. ಅದನ್ನು ಸರಿಪಡಿಸದೆ 125 ದಿನ ಕೂಲಿ ಎಂದು ಹೇಳಿರುವುದು ಹಾಸ್ಯಾಾಸ್ಪದ ಎಂದರು.
ಸುಳ್ಳು ಹೇಳುವುದರಿಂದ ರೈತರಿಗೆ, ಕೂಲಿಕಾರರಿಗೆ ಅನುಕೂಲ ಆಗದು ಬದಲಿಗೆ ಸಂಕಷ್ಟವೆ ಹೆಚ್ಚುತ್ತದೆ. ಹೀಗಾಗಿ, ಕೇಂದ್ರ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡಲು ಯೋಜನೆಗಳ ರೂಪಿಸಲಿ ಎಂದು ಕೋರಿದರು.
ೆ.12ರ ಸಾರ್ವತ್ರಿಿಕ ಮುಷ್ಕರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ನಮ್ಮ ಜನ ಸಾಮಾನ್ಯರ, ಕಾರ್ಮಿಕರ, ರೈತರ ವಿರುದ್ಧದ ಕಾಯಿದೆಗಳನ್ನು ವಿರೋಧಿಸಬೇಕು. ಇಲ್ಲವಾದರೆ ಜನ ವಿರೋಧಿ ನೀತಿಗಳನ್ನು ಸರ್ಕಾರದವರು ತರುತ್ತಲೆ ಇರುತ್ತಾಾರೆ ಎಂದರು.

