ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ರಾಯಚೂರು- ಆಲಮಟ್ಟಿಿ ರೈಲು ಮಾರ್ಗ ಯೋಜನೆಗಳನ್ನು ಶೀಘ್ರವೇ ಆರಂಭಿಸುವಂತೆ ಮಾಡಿದ ಮನವಿಗೆ ಕೇಂದ್ರ ರೈಲ್ವೆೆ ಸಚಿವ ಅಶ್ವಿಿನಿ ವೈಷ್ಣವ್ ಸಕಾರಾತ್ಮವಾಗಿ ಸ್ಪಂದಿಸಿ ಭರವಸೆ ನೀಡಿದ್ದಾಾರೆ ಎಂದು ಸಂಸದ ಜಿ.ಕುಮಾರ ನಾಯಕ ತಿಳಿಸಿದ್ದಾಾರೆ.
ಇಂದು ದೆಹಲಿಯಲ್ಲಿ ಭೇಟಿಯಾಗಿ ರಾಯಚೂರು-ಯಾದಗಿರಿ ಜಿಲ್ಲೆೆಗಳಿಗೆ ಸಂಬಂಧಿಸಿದ ಪ್ರಮುಖ ರೈಲ್ವೆೆ ಮೂಲಸೌಕರ್ಯ ಹಾಗೂ ಸಂಪರ್ಕ ಸಮಸ್ಯೆೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದುಘಿ.ಬಹುಕಾಲದಿಂದ ನಿರೀಕ್ಷೆಯಲ್ಲಿರುವ ರಾಯಚೂರು-ಆಲಮಟ್ಟಿಿ ರೈಲು ಮಾರ್ಗ ಯೋಜನೆ ವೇಗಗೊಳಿಸುವಂತೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾಾರೆ.
ದಕ್ಷಿಣ ಕೇಂದ್ರ ರೈಲ್ವೆೆ ಹಾಗೂ ನೈಋತ್ಯ ರೈಲ್ವೆೆಯ ಮಹಾಪ್ರಬಂಧಕರೊಂದಿಗೆ ಇತ್ತೀಚೆಗೆ ನಡೆಸಿದ ಸಭೆಗಳ ವಿವರಗಳ ಜೊತೆಗೆ, ಪ್ರದೇಶದಲ್ಲಿ ರೈಲು ಸಂಪರ್ಕ ವಿಸ್ತರಿಸುವ ಕುರಿತು ಸಲ್ಲಿಸಿರುವ ಪ್ರಸ್ತಾಾವನೆಗಳ ಬಗ್ಗೆೆ ಸಂಪೂರ್ಣ ಮಾಹಿತಿ ನೀಡಿದ್ದಾಾಗಿ ಹೇಳಿದರು.
ಇದೇ ವೇಳೆ, ಮೆಹಬೂಬ್ ನಗರ ಲೋಕಸಭಾ ಸಂಸದೆ ಅರುಣಾ ಡಿ.ಕೆ. ಅವರೊಂದಿಗೆ ಸೇರಿ, ಒಂದು ವರ್ಷಕ್ಕಿಿಂತಲೂ ಹೆಚ್ಚು ಕಾಲದಿಂದ ಬಾಕಿ ಇರುವ ರಾಯಚೂರು-ಮೆಹಬೂಬ್ ನಗರ ರೈಲು ಸಂಪರ್ಕ ಯೋಜನೆಗೆ ತಕ್ಷಣ ಅನುಮೋದನೆ ನೀಡುವಂತೆ ಒಟ್ಟಾಾಗಿ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿರುವ ಅವರು ರೈಲ್ವೆೆ ಸಚಿವರು ಈ ಎಲ್ಲಾ ವಿಷಯಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ, ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೈಲ್ವೆೆ ಅಭಿವೃದ್ಧಿಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾಾಗಿ ತಿಳಿಸಿದ್ದಾಾರೆ.
ರೈಲ್ವೆ ಸಚಿವರ ಭೇಟಿಯಾದ ಸಂಸದ ಕುಮಾರನಾಯಕ ರಾಯಚೂರು – ಆಲಮಟ್ಟಿ ರೈಲು ಮಾರ್ಗ ಆರಂಭಕ್ಕೆ ಮನವಿ, ಭರವಸೆ

