ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ರಾಯಚೂರು ಜಿಲ್ಲೆಯ ಪ್ರಥಮ ದರ್ಜೆ ಸಹಾಯಕರು ಮತ್ತು ಕಂದಾಯ ನಿರೀಕ್ಷಕರ ಹುದ್ದೆಗಳ ಜೇಷ್ಠತಾ ಪಟ್ಟಿಿ ಸಮನ್ವಯಿಸಿ, ಶಿರಸ್ತೆೆದಾರ, ಉಪ ತಹಶೀಲ್ದಾಾರ, ವ್ಯವಸ್ಥಾಾಪಕರ ಹುದ್ದೆಗಳಿಗೆ ಪದೋನ್ನತಿ ನೀಡುವಂತೆ ಜಿಲ್ಲಾಾ ಸರ್ಕಾರಿ ನೌಕರರ ಸಂಘ ಮನವಿ ಮಾಡಿತು.
ಇಂದು ನಗರಕ್ಕೆೆ ಆಗಮಿಸಿದ್ದ ಕಲಬುರ್ಗಿ ಪ್ರಾಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರಿಗೆ ನೌಕರರ ಸಂಘದ ಅಧ್ಯಕ್ಷ ಕೃಷ್ಣಾಾ ಶಾವಂತಗೇರಾ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ರಾಯಚೂರು ಜಿಲ್ಲೆಯಲ್ಲಿ ಗ್ರಾಾಮ ಆಡಳಿತ ಅಧಿಕಾರಿಗಳಾಗಿ ಹಾಗೂ ದ್ವಿಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ, ಗ್ರಾಾಮಾಡಳಿತ ಅಧಿಕಾರಿಗಳಿಂದ ಕಂದಾಯ ನಿರೀಕ್ಷಕರಾಗಿ ಹಾಗೂ ದ್ವಿಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ 12 ವರ್ಷಗಳು ಆದರೂ ಯಾವುದೇ ಬಡ್ತಿಿ ನೀಡಿಲ್ಲಘಿ ಎಂದು ಗಮನ ಸೆಳೆದರು.
ಹೀಗಾಗಿ ಕಂದಾಯ ಇಲಾಖೆಯ ವಿವಿಧ ಹುದ್ದೆಗಳಿಗೆ ಬಡ್ತಿಿ ನೀಡಲು ಜೇಷ್ಠತಾ ಪಟ್ಟಿಿ ಪ್ರಕಟಿಸಿ ಶೀಘ್ರದಲ್ಲಿ ಅರ್ಹ ನೌಕರರಿಗೆ ಬಡ್ತಿಿ ನೀಡಲು ಕೋರಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧಕ್ಷ ಕೃಷ್ಣ ಶಾವಂತಗೇರ ರಾಜ್ಯ ಪರಿಷತ್ತಿಿನ ಸದಸ್ಯಹಸನ್ ಉಲ್ ಹಕ್, ಸದಸ್ಯರಾದ ಸೊಹೈಲ್, ಮಹೇಂದ್ರ ಮುಂತಾದವರಿದ್ದರು.
ಪ್ರಾದೇಶಿಕ ಆಯುಕ್ತ ಭೇಟಿ ಮಾಡಿದ ನೌಕರರ ನಿಯೋಗ ಕಂದಾಯ ಇಲಾಖೆಯಲ್ಲಿನ ಜೇಷ್ಠತಾ ಪಟ್ಟಿ ಪ್ರಕಟಿಸಿ ಬಡ್ತಿ ನೀಡಲು ಮನವಿ

