ಸುದ್ದಿಮೂಲ ವಾರ್ತೆ ಸಿಂಧನೂರು, ೆ.11:
ರಾಜ್ಯದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಾಪುರ ವಿರುದ್ದ ಬಿಜೆಪಿ ಆಧಾರ ರಹಿತ ಆರೋಪಕ್ಕೆೆ ಮುಂದಾಗಿದೆ. ಕೂಡಲೇ ಇದನ್ನು ಕೈ ಬಿಡದಿದ್ದರೆ ಮಾದಿಗ ಸಮಾಜದಿಂದ ಬಿಜೆಪಿ ವಿರುದ್ದ ರಾಜ್ಯಾಾದ್ಯಂತ ಹೋರಾಟ ಹಮ್ಮಿಿಕೊಳ್ಳ ಬೇಕಾಗುತ್ತದೆ ಎಂದು ಮಾದಿಗ ಸಮುದಾಯ ಮುಖಂಡ ವೀರೇಶ ಉಪ್ಪಲದೊಡ್ಡಿಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಿಯಲ್ಲಿ ಅವರು ಮಾತನಾಡಿದರು. ಕರ್ನಾಟಕ ಮಾದಿಗ ಮಹಾಸಭಾದ ರಾಜ್ಯಾಾಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಾಪುರ ಅತ್ಯಂತ ಸೌಮ್ಯ ಸ್ವಭಾವ, ಸರಳ ವ್ಯಕ್ತಿಿತ್ವ ನಾಯಕ. ಹಲವಾರು ಬಾರಿ ಸಚಿವರಾಗಿ ಪಾರದರ್ಶಕ ಆಡಳಿತ ನೀಡಿದ್ದಾಾರೆ. ದಲಿತ ಸಮುದಾಯ ನಾಯಕ ಎಂದು ಬಿಜೆಪಿ ಆರೋಪ ಮಾಡುತ್ತಿಿರುವದು ಸರಿಯಲ್ಲ. ನಾವೇನು ಭ್ರಷ್ಟಾಾಚಾರ ಪ್ರತಿಪಾದಿಸುತ್ತಿಿಲ್ಲ. ದಾಖಲೆ, ಸಾಕ್ಷಿಗಳಿದ್ದರೆ ಬಿಡುಗಡೆ ಮಾಡಲಿ ಎಂದರು.
ಕೋಟಿ ಕೋಟಿ ಲೂಟಿ : ಕೇಂದ್ರದ ಬಿಜೆಪಿ ಸರಕಾರ ಬೆಂಗಳೂರಿನಲ್ಲಿ ಕೌಶಲ್ಯಾಾಭಿವೃದ್ದಿ ಇಲಾಖೆಯಿಂದ ತರಬೇತಿ ನೆಪದಲ್ಲಿ 10,194 ಕೋಟಿ ಲೂಟಿ ಮಾಡಿದೆ. 2015-2024ರ ವರೆಗೆ 3.30 ಲಕ್ಷ ಬ್ಯಾಾಚ್ಗಳಿಗೆ ತರಬೇತಿ ನೀಡಿದ್ದಾಾಗಿ ಹಣ ನೀಡಲಾಗಿದೆ. ತರಬೇತಿಯ ಕುರಿತು ಯಾವುದೇ ದಾಖಲೆಗಳಿಲ್ಲ. ಲಾನುಭವಿಗಳ ಪಟ್ಟಿಿಯಿಲ್ಲ. ಈ ಬಗ್ಗೆೆ ಸಿಜೆಐನ ಮಹಾಲೇಖಪಾಲರೇ ವರದಿ ಮಾಡಿದ್ದಾಾರೆ. ಈ ಬಗ್ಗೆೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿವೆ. ಬ್ರಹ್ಮಾಾಂಡ ಭ್ರಷ್ಟಾಾಚಾರ ಮಾಡಿದ ದಾಖಲೆಗಳಿದ್ದರೂ ಬಿಜೆಪಿ ಮುಖಂಡರ ಕಣ್ಣಿಿಗೆ ಕಾಣುತ್ತಿಿಲ್ಲವೇ? ಸದನದಲ್ಲಿ ಮನರೇಗಾ ಕುರಿತು ಚರ್ಚೆ ಮಾಡುವದನ್ನು ಬಿಟ್ಟು, ಸಚಿವ ತಿಮ್ಮಾಾಪುರ ವಿರುದ್ದ ಅಹೋರಾತ್ರಿಿ ಧರಣಿ ನಡೆಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಬಿಜೆಪಿ ಮುಖಂಡರು ಈ ಕೂಡಲೇ ಸಚಿವರ ವಿರುದ್ದ ಆರೋಪ ಮಾಡುವದನ್ನು ನಿಲ್ಲಿಸಬೇಕು. ಹೀಗೆ ಮುಂದುವರೆದರೆ ಮಾದಿಗ ಸಮಾಜದಿಂದ ರಾಜ್ಯಾಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹನುಮೇಶ ಕರ್ನಿ, ಗುರುನಾಥ ವಕೀಲ, ಗುರುರಾಜ ಮುಕ್ಕುಂದಾ, ದುರುಗೇಶ ಬಾಲಿ, ಗಾದಿಲಿಂಗ ಅರಳಹಳ್ಳಿಿ ಹಾಗೂ ಇತರರು ಇದ್ದರು.
ಸಚಿವ ತಿಮ್ಮಾಪುರ ವಿರುದ್ದ ಆರೋಪ ಕೈಬಿಡದಿದ್ದರೆ ಬಿಜೆಪಿ ವಿರುದ್ದ ರಾಜ್ಯಾದ್ಯಂತ ಮಾದಿಗ ಸಮಾಜದಿಂದ ಹೋರಾಟ

