ಸುದ್ದಿಮೂಲ ವಾರ್ತೆ ಗಬ್ಬೂರು, ೆ.12:
ಸಮೀಪದ ಮಲದಕಲ್ ಗ್ರಾಾಮದ
ಶ್ರೀ ನಿಜಾನಂದ ಯೋಗಾಶ್ರಮದಲ್ಲಿ ರವಿವಾರದಂದು ಮಹಾಶಿವರಾತ್ರಿಿ ಜಾಗರಣೆ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 24 ತಾಸುಗಳ ಪರ್ಯಂತ ಅಖಂಡ ಶಿವನಾಮ ಸ್ಮರಣೆಯ ಸಪ್ತಭಜನೆ ಕಾರ್ಯಕ್ರಮ ಆಶ್ರಮದ ಪೀಠಾಧಿಪತಿಗಳಾದ ಶ್ರೀ ಗುರುಬಸವ ರಾಜಗುರುಗಳ ನೇತೃತ್ವದಲ್ಲಿ ನಡೆಯಲಿದೆ.
24ತಾಸುಗಳ ಕಾಲ ನಿರಂತರ ನಡೆಯುವ ಭಜನೆಯಲ್ಲಿ ಪ್ರತಿ ಎರಡು ತಾಸಿಗೊಮ್ಮೆೆ ಪಾಳಿ ಪ್ರಕಾರವಾಗಿ ಭಜನಾಮೇಳಗಳು ಭಾಗಿಯಾಗುತ್ತವೆ. ಈ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಮಲದಕಲ್, ವೆಂಕಟಾಪುರ, ಅಮರಾಪುರ, ಸುಂಕೇಶ್ವರಹಾಳ್, ಬುದ್ದಿನ್ನಿಿ, ಸಲಿಕ್ಯಾಾಪುರ, ಚಿಂತಲಕುಂಟಾ, ಮಾನಸಗಲ್, ರಘುನಾಥನಹಳ್ಳಿಿ, ಸುಲ್ತಾಾನಪುರ, ಶಾವಂತಗೇರಾ, ದೇವದುರ್ಗ, ಸೇರಿದಂತೆ ಇಪ್ಪತ್ತಕ್ಕೂ ಹಳ್ಳಿಿಯ ಭಜನಾತಂಡದವರು ಪಾಲ್ಗೊೊಳ್ಳಲ್ಲಿದ್ದಾಾರೆ.
ಶ್ರೀ ಮಠದ ಶಿಷ್ಯರಾದ ಆಂಜನೇಯ ನಾಯಕ, ಬಾಲುನಾಯಕ ಮಲದಕಲ್, ಬಸವರಾಜ ಪೂಜಾರಿ, ಶಿವರಾಜ ಪೂಜಾರಿ, ರಾಮಯ್ಯ ನಾಯಕ ಬುದ್ದಿನ್ನಿಿ, ವೆಂಕಟೇಶ್ ಪೂಜಾರಿ ದೇವದುರ್ಗ, ಬಾಲಯ್ಯ ಅಮರಾಪುರ, ಬೂದೆಪ್ಪ, ವಿರುಪಾಕ್ಷಿ ರಘುನಾಥನಹಳ್ಳಿಿ, ಇನ್ನಿಿತರರು ತಿಳಿಸಿದ್ದಾಾರೆ.
ಮಹಾಶಿವರಾತ್ರಿ ಜಾಗರಣೆ ನಿಮಿತ್ಯ 24ಗಂಟೆಗಳ ಅಖಂಡ ಶಿವನಾಮದ ಸಪ್ತಭಜನೆ ಕಾರ್ಯಕ್ರಮ

