ಸುದ್ದಿಮೂಲ ವಾರ್ತೆ ಮಾನ್ವಿ, ೆ.12:
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯ ನಾಲ್ಕು ಲೇಬರ್ ಕೋಡ್ ಗಳ ಜಾರಿ, ವಿ.ಬಿ. ಗ್ರಾಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆೆ ಹಾಗೂ ಭೂ ಸ್ವಾಾಧೀನ ಕಾಯ್ದೆೆ ಸೇರಿದಂತೆ ಇನ್ನಿಿತರ ಕಾಯ್ದೆೆಗಳನ್ನು ಹಿಂಪಡೆಯಬೇಕು ಎಂದು ಸಿಐಟಿಯು ತಾಲೂಕಾ ಅಧ್ಯಕ್ಷ ಹೆಚ್.ಶರ್ುದ್ದೀನ್ ಪೋತ್ನಾಾಳ್ ಆಗ್ರಹಿಸಿದರು.
ಗುರುವಾರ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಿಕ ಮುಷ್ಕರ ಬೆಂಬಲಿಸಿ ಮಾನ್ವಿಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿಿದ್ದರು.
ನರೇಂದ್ರ ಮೋದಿ ಸರ್ಕಾರ ಕಾರ್ಮಿಕರಿಗೆ, ರೈತರಿಗೆ ಸೌಲಭ್ಯ ಕಲ್ಪಿಿಸದೇ ತೆರಿಗೆಗಳ ಭಾರ ಹೆಚ್ಚಿಿಸುತ್ತಿಿದೆ. ಕಾರ್ಮಿಕರಿಗೆ ಮೂಲ ಸೌಲಭ್ಯ ನೀಡುವಲ್ಲಿ ವಿಲವಾಗಿ, ಕೇವಲ ಕಾರ್ಪೊರೇಟ್ ಸಂಸ್ಥೆೆಗಳು ಹೇಳಿದಂತೆ ಕುಣಿಯುತ್ತಿಿದೆ. ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ ನೀಡದೇ ಬಂಡವಾಳಗಾರರಿಗೆ ಮಣೆ ಹಾಕಲಾಗುತ್ತಿಿದೆ ಎಂದು ಹೆಚ್.ಶರ್ುದ್ದೀನ್ ಪೋತ್ನಾಾಳ್ ಆಕ್ರೋೋಶ ವ್ಯಕ್ತಪಡಿಸಿದರು.
ಈ ಮುಷ್ಕರದಲ್ಲಿ ಎಐಟಿಯುಸಿ ಜಿಲ್ಲಾ ಸಂಚಾಲಕ ಚನ್ನಬಸವ ಜಾನೇಕಲ್, ಎಐಟಿಯುಸಿ ತಾಲೂಕಾ ಅಧ್ಯಕ್ಷ ಎಂ.ಬಿ.ಸಿದ್ದರಾಮಯ್ಯಸ್ವಾಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಯ್ಯಸ್ವಾಾಮಿ ಚಿಂಚರಕಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರುದ್ರಪ್ಪ ನಾಯಕ, ಕಾರ್ಯದರ್ಶಿ ಆಂಜನೇಯ ಕೋಟೆ, ಗ್ರಾಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಅಂಬಣ್ಣ ನಾಯಕ ಬ್ಯಾಾಗವಾಟ, ಕಾರ್ಯದರ್ಶಿ ಮಹ್ಮದ್ ನೀರಮಾನ್ವಿಿ, ಅಕ್ಷರ ದಾಸೋಹ ಕಾರ್ಮಿಕ ಸಂಘಟನೆ ಅಧ್ಯಕ್ಷೆ ಥೆರೇಸಾ ಪಟ್ಟದಕಲ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಚನ್ನಮ್ಮ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಬಾಯಿ ಪೆರಿಕಲ್, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುಜಾತಾ, ಖಜಾಂಚಿ ಗಂಗೂರೇಖಾ ಗೋಪಾಲ್, ಪದಾಧಿಕಾರಿಗಳಾದ ಹುಲಿಗೆಮ್ಮ, ಸರಸ್ವತಿ, ಲಲಿತಾ ಸಾಲಿ, ಸಿದ್ದಲಿಂಗಯ್ಯ, ಬಡೇಸಾಬ್, ಹನುಮಂತಪ್ಪ, ರಮೇಶ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ತಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಾರ್ಮಿಕ ವಿರೋಧಿ ಕಾಯ್ದೆಗಳ ಹಿಂಪಡೆಯಲು ಹೆಚ್.ಶರ್ುದ್ದೀನ್ ಪೋತ್ನಾಳ್ ಆಗ್ರಹ

