ಸುದ್ದಿಮೂಲ ವಾರ್ತೆ ಕೊಪ್ಪಳ, ೆ.13:
ಕೊಪ್ಪಳದಲ್ಲಿ ಇದೇ ಪ್ರಥಮ ಬಾರಿ ಅದ್ದೂರಿ ಶಿವರಾತ್ರಿಿ ಉತ್ಸವ ಆಯೋಜನೆ ಮಾಡಲಾಗುತ್ತಿಿದೆ. ಕೊಪ್ಪಳ ಅಥ್ಲಟಿಕ್ ಅಸೋಸಿಯೇಷನ್ ನಿಂದ ಶಿವರಾತ್ರಿಿ ಉತ್ಸವ ಆಚರಣೆ ಮಾಡಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಾಳ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಗೋಷ್ಠಿಿಯಲ್ಲಿ ಮಾತನಾಡಿ ಹುಲಿಕೆರಿ ಬಳಿ ಇರುವ ಶ್ರೀ ಶಿವರಾತ್ರೇೇಶ್ವರ ದೇವಸ್ಥಾಾನದ ಆವರಣದಲ್ಲಿ ಈ ವರ್ಷ ಕೊಪ್ಪಳ ಜಿಲ್ಲಾಾ ಅಥ್ಲೆೆಟಿಕ್ಸ್ ಅಸೋಸಿಯೇಷನ್ ಮತ್ತು ಶಿವರಾತ್ರೇೇಶ್ವರ ದೇವಸ್ಥಾಾನ ಸಮಿತಿ ಜಂಟಿಯಾಗಿ ಶಿವರಾತ್ರಿಿ ಉತ್ಸವ 2026 ನ್ನು ವೈಭವದಿಂದ ಆಚರಣೆ ಮಾಡಲಾಗುತ್ತಿಿದೆ.
ಈ ಹಿಂದೆಯೂ ಅತ್ಯುತ್ತಮವಾಗಿ ಶಿವರಾತ್ರಿಿ ಉತ್ಸವ ಆಚರಣೆ ಮಾಡಲಾಗಿದೆ. ಸಾವಿರಾರು ಸಂಖ್ಯೆೆಯಲ್ಲಿ ಭಕ್ತರು ಸೇರುತ್ತಾಾರೆ. ಹೀಗಾಗಿ, ಈ ವರ್ಷ ಇದಕ್ಕೆೆ ಜಿಲ್ಲಾಾ ಅಥ್ಲೆೆಟಿಕ್ಸ್ ಅಸೋಸಿಯೇಷನ್ ಸಹ ಸಾಥ್ ನೀಡುತ್ತಿಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗಿದೆ ಎಂದರು.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಾಮೀಜಿಗಳು ಆಶೀರ್ವಚನ ನೀಡುವರು. ನಂತರ ಗಾಯಕಿ ಶ್ರೀಮತಿ ಇಂದು ನಾಗರಾಜ್ ತಂಡದವರಿಂದ ಸಂಗೀತ ಕಾರ್ಯಕ್ರಮ, ದರ್ಶನ್ ಸರಿಗಮಪ ಕಲಾವಿದರು ಭಾಗವಹಿಸುವರು. ಶ್ರೀರಾಮ ಕಾಸರ್ ಮತ್ತು ನಯನಾ ನಾಗರಾಜ ತಂಡ ಸೇರಿದಂತೆ ಅನೇಕ ತಂಡಗಳು ತಮ್ಮ ಪ್ರದರ್ಶನ ನೀಡಲಿವೆ ಎಂದರು.
ರಾತ್ರಿಿಪೂರ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿರುವುದರಿಂದ ತಡರಾತ್ರಿಿಯಿಂದ ಭಜನಾ ಸ್ಪರ್ಧೆ ನಡೆಯಲಿದೆ ಎಂದರು.
ಕೊಪ್ಪಳ ಜಿಲ್ಲಾಾ ಅಥ್ಲೆೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿಿದ್ದು, ಎಲ್ಲ ಲೆಕ್ಕವೂ ಪಕ್ಕಾಾ ಇದೆ ಎಂದರು.
ಅಥ್ಲೆೆಟಿಕ್ಸ್ ಅಸೋಸಿಯೇಷನ್ ಕೇವಲ ಕ್ರೀೆಡೆಗಾಗಿ ಸೀಮಿತ ಇಲ್ಲ. ಧಾರ್ಮಿಕ ಕಾರ್ಯಕ್ರಮಗಳನ್ನು ಇದರಿಂದ ಆಯೋಜನೆ ಮಾಡುತ್ತಿಿದ್ದೇವೆ ಎಂದರು.
ಪಕ್ಷಾತೀತವಾಗಿ ಇದಕ್ಕೆೆ ಪದಾಧಿಕಾರಿಗಳು ಇದ್ದು, ಯಾರು ಬೇಕಾದರೂ ಪದಾಧಿಕಾರಿಗಳು ಆಗಬಹುದಾಗಿದೆ.
ಇದುವರೆಗೂ ನಡೆದಿರುವ ಕಾರ್ಯಕ್ರಮಗಳು ಮತ್ತು ಅದರ ಖರ್ಚು ವೆಚ್ಚವನ್ನು ಅಚ್ಚುಕಟ್ಟಾಾಗಿಯೇ ಇಟ್ಟಿಿದ್ದು, ಯಾರು ನಮಗೆ ದೇಣಿಗೆಯನ್ನು ನೀಡಿದ್ದಾಾರೆ ಅವರಿಗೆ ಲೆಕ್ಕಪತ್ರದ ಪ್ರತಿಯನ್ನೇ ನೀಡಿದ್ದೇವೆ ಎಂದರು.
ಆದರೆ, ಕೊಟ್ಟಿಿರುವ ಕೆಲ ದಾನಿಗಳು ತಮ್ಮ ಹೆಸರು ಬಾರದಂತೆ ನೋಡಿಕೊಳ್ಳುವಂತೆ ಹೇಳಿದ್ದಾಾರೆ. ಹೀಗಾಗಿ ಸಾರ್ವಜನಿಕವಾಗಿ ಲೆಕ್ಕಪತ್ರವನ್ನು ನೀಡಿಲ್ಲ. ಈಗ ಕೇಳುತ್ತಿಿರುವುದರಿಂದ ಎಲ್ಲರಿಗೂ ಲೆಕ್ಕಪತ್ರದ ಮಾಹಿತಿಯನ್ನು ನೀಡಲಾಗುವುದು ಎಂದರು.
ಶಿವರಾತ್ರಿಿಯ ಸಮಯದಲ್ಲಿ ದೇವರ ಆರಾಧನೆಯನ್ನು ಮಾಡುವ ಮೂಲಕ ಮನಸು ಶುದ್ಧಿಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ಕ್ರೀೆಡೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದರು. ಕ್ರೀೆಡಾಕೂಟವನ್ನು ಜೂನ್ ವೇಳೆಗೆ ಹಮ್ಮಿಿಕೊಳ್ಳಲಾಗುವುದು ಎಂದು ಹೇಳಿದರು.
ಅಥ್ಲೆೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀನಿವಾಸ ಗುಪ್ತಾಾ. ಶಿವರಾತ್ರೇೇಶ್ವರ ದೇವಸ್ಥಾಾನ ಸಮಿತಿ ಅಧ್ಯಕ್ಷ ಅನಿಲ ನಾಲ್ವಡ, ವೀರಣ್ಣ ಸಂಡೂರು, ಚನ್ನಪ್ಪ ಕೋಟ್ಯಾಾಳ ಇದ್ದರು.
ೆ. 15 ರಂದು ಅದ್ದೂರಿ ಶಿವರಾತ್ರಿ ಉತ್ಸವ ರಾಜಶೇಖರ ಹಿಟ್ನಾಳ

