ಸುದ್ದಿಮೂಲ ವಾರ್ತೆ ಕುರುಗೋಡು, ೆ.13:
ಇದೇ ೆ.15 ಮತ್ತು 16 ರಂದು ಜಿಲ್ಲಾಾಡಳಿತ, ಜಿಲ್ಲಾಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಎರಡು ದಿನಗಳ ಕುರುಗೋಡು ಉತ್ಸವ ಆಯೋಜಿಸಿದೆ. ಸಿಂದರ ರಾಜಧಾನಿಯಾಗಿದ್ದ ಕುರುಗೋಡು ಪಟ್ಟಣದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವ ಪರಿಚಯಿಸುವ ನಿಟ್ಟಿಿನಲ್ಲಿ
ಈಗಾಗಲೇ ವಿದ್ಯುತ್ ದೀಪಗಳಿಂದ ಕುರುಗೋಡು ಪಟ್ಟಣದ ಮುಖ್ಯ ರಸ್ತೆೆಗಳ ಅಲಂಕಾರ, ವಿವಿಧೆಡೆ ಸ್ವಚ್ಛತಾ ಕಾರ್ಯ, ಪ್ರಚಾರ ಕಾರ್ಯ ಸೇರಿದಂತೆ ಹಲವು ಕಾರ್ಯಗಳನ್ನು ತಾಲೂಕಾಡಳಿತ ಕೈಗೊಂಡಿದೆ.
ಉತ್ಸವವನ್ನು ಜನೋತ್ಸವವನ್ನಾಾಗಿಸಲು ತಾಲ್ಲೂಕು ಆಡಳಿತದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಉತ್ಸವಕ್ಕೆೆ ಆಹ್ವಾಾನ ನೀಡುತ್ತಿಿದ್ದಾಾರೆ. ಅಷ್ಟೇ ಅಲ್ಲದೇ, ಜನಾಕರ್ಷಣೆಗಾಗಿ ಉತ್ಸವದಲ್ಲಿ ಹಲವು ರೀತಿಯ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಇತಿಹಾಸ : ಕುರುಡುಗಳು ಶೋಧಿಸಲಾಗಿದ್ದು ಮಹಾಭಾರತದ ಕಾಲದಲ್ಲಿ ಕುಂತಳ ರಾಜ್ಯದ ರಾಜಧಾನಿಯಾಗಿದ್ದ ಇಲ್ಲಿ, ಸುಪ್ರಸಿದ್ಧ ಅರಸ ಚಂದ್ರಹಾಸನು ರಾಜ್ಯಭಾರ ಮಾಡಿದ್ದಾಾನೆಂದು ಪ್ರತೀತಿ ಇದೆ.
ನಂತರ ಈ ಪ್ರದೇಶವು ಮೌರ್ಯರು, ಶಾತವಾಹನರು, ಬಾದಾಮಿ ಚಾಲುಕ್ಯರು ಮತ್ತು ಕಲ್ಯಾಾಣದ ಚಾಲುಕ್ಯರ ಆಡಳಿತಕ್ಕೊೊಳಪಟ್ಟಿಿತ್ತು. ಕಲ್ಯಾಾಣದ ಚಾಲುಕ್ಯರ ಸಾಮಾಂತರಾಗಿದ್ದ ಸಿಂದ ವಂಶದ 11 ಅರಸರು ಇಲ್ಲಿ ಕ್ರಿಿ.ಶ 950 ರಿಂದ 1200 ರ ವರೆಗೆ, ಸುಮಾರು 250 ವರ್ಷಗಳ ಕಾಲ ಸಂಪತ್ತು-ಸಮೃದ್ಧಿಿಯಿಂದ ‘‘ಬಲ್ಲಕುಂದೆ 300 ನಾಡನ್ನು’’ ಆಳಿದ್ದಾಾರೆ ಎಂದು ತಿಳಿಯಬಹುದು.
ವಿಜಯನಗರ ಸಾಮ್ರಾಾಜ್ಯದ ಕಾಲದಲ್ಲಿ ನಿರ್ಮಿತವಾದ ದೊಡ್ಡ ಬಸವೇಶ್ವರ ದೇವಾಲಯ ಮತ್ತು ಹಲವು ಬೃಹದಾಕಾರದ ಮೂರ್ತಿ ಶಿಲ್ಪಗಳು ವಿಜಯನಗರದ ಶಿಲ್ಪಕಲೆಯ ಮಾದರಿಯಲ್ಲಿ ವೈಶಿಷ್ಟ ಪೂರ್ಣವಾಗಿ ನಿರ್ಮಿತವಾಗಿವೆ.
ಮುಖ್ಯ ವೇದಿಕೆ ಸಿದ್ಧತೆ : ೆ.16 ರಂದು ನಡೆಯುವ ಕುರುಗೋಡು ಉತ್ಸವದ ಉದ್ಘಾಾಟನಾ ಕಾರ್ಯಕ್ರಮಕ್ಕೆೆ ತಾಲ್ಲೂಕು ಆಡಳಿತವು ಪಟ್ಟಣದ ಕಂಪ್ಲಿಿ ರಸ್ತೆೆಯ ಹೊರವಲಯದ ಖಾದರ್ ಲಿಂಗ ದರ್ಗಾ ಹತ್ತಿಿರ ಸ್ಥಳ ಪರಿಶೀನೆ ನಡೆಸಿದ್ದು, ಕಾರ್ಯಕ್ರಮ ಆಯೋಜನೆಗೆ ಸಿದ್ಧತಾ ಕಾರ್ಯ ಕೈಗೊಂಡಿದೆ.
ತಾಲ್ಲೂಕು ಆಡಳಿತವು ಬೈ-ಸ್ಕೈ ಆಯೋಜನೆ ಮಾಡಿದ್ದು, ಪಟ್ಟಣದ ನಾಡಗೌಡರ ಮರಿಬಸವನಗೌಡ ಸ್ಮಾಾರಕ ಸರ್ಕಾರಿ ಬಾಲಕರ ಪ್ರೌೌಢಶಾಲಾ ಮೈದಾನದಲ್ಲಿ ಸ್ಥಳ ಪರಿಶೀಲನೆ ಮಾಡಿದೆ.
ಈ ವೇಳೆ ಕುರುಗೋಡು ಪುರಸಭೆ ಅಧ್ಯಕ್ಷ ಶೇಕಣ್ಣ, ಕುರುಗೋಡು ತಾಲ್ಲೂಕು ತಹಶೀಲ್ದಾಾರ್ ನರಸಪ್ಪ, ಗ್ರೇೇಡ್-2 ತಹಶೀಲ್ದಾಾರ್ ಮಲ್ಲೇಶಪ್ಪ, ಕುರುಗೋಡು ವೃತ್ತ ಸಿಪಿಐ ವಿಶ್ವನಾಥ್ ಹಿರೇಗೌಡರ್, ಜೆಸ್ಕಾಾಂ ಅಧಿಕಾರಿ ಶೇಕ್ಷಾವಲಿ ಹಾಗೂ ಇತರರು ಹಾಜರಿದ್ದರು.
ನಾಳೆಯಿಂದ ಕುರುಗೋಡು ಉತ್ಸವ : ಸಿದ್ಧತೆ ಜೋರು

