ಸುದ್ದಿಮೂಲ ವಾರ್ತೆ ಕಲಬುರಗಿ, ೆ.13:
ಶ್ರೀ ದತ್ತಾಾತ್ರೇಯನ ಸುಕ್ಷೇತ್ರವಾದ ದೇವಲ ಗಾಣಗಾಪೂರ ಸಮಗ್ರ ಅಭಿವೃದ್ಧಿಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಿ ಕಾರ್ಯಗಳಿಗೆ ಚಾಲನೆ ನೀಡುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದರು.
ಅಜಲಪೂರ ತಾಲೂಕಿನ ದೇವಲ ಗಾಣಗಾಪೂರದ ಶ್ರೀ ದತ್ತಾಾತ್ರೇಯನ ದರ್ಶನ ಪಡೆದುಕೊಂಡ ನಂತರ ದೇವಸ್ಥಾಾನದ ಅಡಿಯಲ್ಲಿ ಬರುವ ಶ್ರೀ ತಂತುಕೇಶ್ವರ ದೇವಸ್ಥಾಾನದ ಅನ್ನದಾಸೋಹ ಭವನಕ್ಕೆೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ದೇವಸ್ಥಾಾನದ ಭಕ್ತರುಗಳಾದ ವಿಜಯವಾಡ ಮೂಲದ ಶ್ರೀನಿವಾಸ ಮತ್ತು ಸುಕುಮಾರಿ ಕೊನೇರು ದಂಪತಿಗಳು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಅನ್ನದಾಸೋಹ ಭವನಕ್ಕೆೆ ನಿರ್ಮಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ. ಹಣ ಎಲ್ಲರ ಬಳಿ ಇದೆ ಆದರೆ ದಾನ ಮಾಡುವ ಮನಸ್ಸು ಬೇಕಲ್ಲವೆ. ಇದಕ್ಕಾಾಗಿ ದಂಪತಿಗೆ ವಿಶೇಷ ಅಭಿನಂದನೆ ಸಲ್ಲಿಸುವೆ ಎಂದರು.
ಗಾಣಗಾಪೂರ ದೇವಸ್ಥಾಾನ ಕ್ಷೇತ್ರದ ಅಭಿವೃದ್ಧಿಿಗೆ ಈಗಾಗಲೆ ಕೇಂದ್ರ ಸರ್ಕಾರಕ್ಕೆೆ ಪ್ರಸಾದ ಯೋಜನೆಯಡಿ 83.52 ಕೋಟಿ ರೂ. ಮೊತ್ತದ ಕ್ರಿಿಯಾ ಯೋಜನೆಯ ಪ್ರಸ್ತಾಾವನೆ ಸಲ್ಲಿಸಲಾಗಿತ್ತಾಾದರು, ಕೇಂದ್ರ ಸರ್ಕಾರ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಇಲ್ಲಿನ ಜಿಲ್ಲಾಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆೆಯ ಶಾಸಕರೊಂದಿಗೆ ಚರ್ಚಿಸಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಸ್ಥಾಾನದ ಅಭಿವೃದ್ಧಿಿಗೆ ತಾವು ಪ್ರಾಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರಸ್ತೆೆ, ಶೌಚಾಲಯ, ಕುಡಿಯುವ ನೀರು, ದಾಸೋಹ ಮನೆ, ಪಾರ್ಕಿಂಗ್, ಸ್ನಾಾನ್ ಘಾಟ್ ಹೀಗೆ ಒಟ್ಟು ಮೂರು ಹಂತದಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಿಪಡಿಸಲು ಈಗಾಗಲೆ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ಇತ್ತೀಚೆಗೆ ಸಚಿವ ಪ್ರಿಿಯಾಂಕ್ ಖರ್ಗೆ ಅವರ ಜೊತೆ ಒಂದು ಸುತ್ತಿಿನ ಸಭೆ ಸಹ ನಡೆದಿದೆ. ಜಿಲ್ಲೆಯ ಸಚಿವರು ಮತ್ತು ಶಾಸಕರೊಂದಿಗೆ ಮತ್ತೊೊಮ್ಮೆೆ ಸಭೆ ಸೇರಿ ಮುಖ್ಯಮಂತ್ರಿಿಗಳ ಬಳಿ ಹೋಗಿ ಇದಕ್ಕಾಾಗಿ ಹೆಚ್ಚಿಿನ ಅನುದಾನ ನೀಡಲು ಕೋರಲಾಗುವುದು ಎಂದರು.
ಇದಕ್ಕು ಮುನ್ನ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ದೇವಸ್ಥಾಾನಕ್ಕೆೆ ವರ್ಷಕ್ಕೆೆ ಒಂದು ಕೋಟಿಗೂ ಹೆಚ್ಚು ಭಕ್ತರು ದರ್ಶನಕ್ಕೆೆ ಬರುತ್ತಾಾರೆ. ಮೂಲಸೌಕರ್ಯ ಇಲ್ಲದಿರುವುದಕ್ಕೆೆ ಭಕ್ತರು ಶಾಪ ಹಾಕುತ್ತಿಿದ್ದಾರೆ. ದೇವಸ್ಥಾಾನ ಅಭಿವೃದ್ಧಿಿ ಕಂಡಿಲ್ಲ. ಸರ್ಕಾರ ವಿಶೇಷ ಕಾಳಜಿ ವಹಿಸಿ ಪ್ರಸಾದ್ ಯೋಜನೆ ಅಡಿಯಲ್ಲಿ ಹೆಚ್ಚಿಿನ ಅನುದಾನ ಒದಗಿಸಿ ದೇವಸ್ಥಾಾನ ಅಭಿವೃದ್ಧಿಿ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾಾರ ಸಂಜೀವಕುಮಾರ ದಾಸರ್, ಸಹಾಯಕ ಆಯುಕ್ತೆೆ ಸಾಹಿತ್ಯ, ಶಿವಕಾಂತಮ್ಮ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ಅನ್ನದಾಸೋಹ ಭವನಕ್ಕೆ ಸಚಿವ ರಾಮಲಿಂಗಾರೆಡ್ಡಿ ಅಡಿಗಲ್ಲು ದೇವಲ ಗಾಣಗಾಪೂರ ಅಭಿವೃದ್ಧಿಗೆ ಬದ್ಧ

