ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ರೂಪಿಸಿರುವ ಪತ್ರಕರ್ತರ ತುರ್ತು ನಿಧಿಯಿಂದ ಹಿರಿಯ ಪತ್ರಕರ್ತ ದಿ.ಸೈಯದ್ ಅಶ್ರ್ ಅವರ ಕುಟುಂಬಕ್ಕೆೆ 1 ಲಕ್ಷ ರೂಪಾಯಿ ಚೆಕ್ ವಿತರಣೆಯನ್ನು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ವಿತರಿಸಿದರು.
ನಗರಕ್ಕೆೆ ಆಗಮಿಸಿದ್ದ ಅವರು ಪತ್ರಿಿಕಾ ಭವನದಲ್ಲಿ ಆಗಮಿಸಿ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಸೈಯದ್ ಅಶ್ರ್ ಅವರ ಕುಟುಂಬದವರಿಗೆ ಪತ್ರಕರ್ತರ ಸಮಕ್ಷಮದಲ್ಲಿ ಚೆಕ್ ವಿತರಿಸಿದರು.
ಈ ವೇಳೆ ಸಲೀಂ ಅಹ್ಮದ್ ಅವರು ಮಾತನಾಡಿ, ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ ವೃತ್ತಿಿಯ ಘನತೆ ಜೊತೆಗೆ ಇಂತಹ ಹೃದಯ ಶ್ರೀಮಂತಿಕೆಯ ಕೆಲಸ ಮಾಡುತ್ತಿಿರುವುದನ್ನು ಶ್ಲಾಾಘಿಸಿದರು.
ಗಿಲ್ಡ್ ತುರ್ತು ನಿಧಿಗೆ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿಿ ಹಾಗೂ ಮಾಧ್ಯಮ ಸಲಹೆಗಾರರೊಂದಿಗೆ ಚರ್ಚೆ ನಡೆಸಲಾಗುವುದು. ಗಿಲ್ಡ್ನ ಬೆಳ್ಳಿಿ ಮಹೋತ್ಸವ ಕಾರ್ಯಕ್ರಮಕ್ಕೂ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಪತ್ರಕರ್ತರ ಹಿತಕ್ಕಾಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಇದಕ್ಕೂ ಮುನ್ನ ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಸೈಯದ್ ಅಶ್ರ್ ಅವರ ಪತ್ರಿಿಕಾ ಸೇವೆಯ ಬಗ್ಗೆೆ ವಿವರಿಸಿದರು. ನಗರದಲ್ಲಿ 200ಕ್ಕು ಹೆಚ್ಚು ಪತ್ರಕರ್ತರು ಕಾರ್ಯನಿರ್ವಹಿಸುತ್ತಿಿದ್ದು, ಅವರಿಗಾಗಿ ತುರ್ತು ನಿಧಿ, ಆರೋಗ್ಯ ವಿಮೆ ಸೇರಿದಂತೆ ವಿವಿಧ ಕಲ್ಯಾಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ನೀತಿ ಆಯೋಗದ ಸದಸ್ಯ ಡಾ.ರಝಾಕ್ ಉಸ್ತಾಾದ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿಿ, ಮುಖಂಡರಾದ ಮಹಮ್ಮದ್ ಶಾಲಂ, ರುದ್ರಪ್ಪ ಅಂಗಡಿ, ಬಷೀರುದ್ದಿನ್, ಅಸ್ಲಂ ಪಾಷಾ, ರುದ್ರಪ್ಪ ಅಂಗಡಿ ಸೇರಿದಂತೆ ನಗರದ ಹಿರಿಯ, ಕಿರಿಯ ಪತ್ರಕರ್ತರಿದ್ದರು.
ಪತ್ರಕರ್ತ ಆಶ್ರ್ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ ಯೋಜನೆ ರೂಪಿಸಿದ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕಾರ್ಯಕ್ಕೆ ಸಲೀಂ ಆಹ್ಮದ್ ಮೆಚ್ಚುಗೆ

