ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.17:
ೆಬ್ರುವರಿ 20 ರಂದು ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮ ಬಿಜೆಪಿ ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ, ಅದು ಕೆಲ ವ್ಯಕ್ತಿಿಗಳ ಖಾಸಗಿ ಕಾರ್ಯಕ್ರಮ ಹಾಗಾಗಿ ಅಂದು ನಡೆಯುವ ಕಾರ್ಯಕ್ರಮ ಅನಧಿಕೃತ ಎಂದು ಹರಪನಹಳ್ಳಿಿ ಮಂಡಲ ಬಿಜೆಪಿ ಅಧ್ಯಕ್ಷ ಯಡಹಳ್ಳಿಿ ಶೇಖರಪ್ಪ ಇಂದು ಪತ್ರಿಿಕಾಗೋಷ್ಠಿಿಯಲ್ಲಿ ತಿಳಿಸಿದರು.
ಪಟ್ಟಣದ ಆಚಾರ್ಯ ಬಡಾವಣೆಯಲ್ಲಿರುವ ಬಿಜೆಪಿ ( ರೆಡ್ಡಿಿ ಬಣ )ಕಾರ್ಯಾಲಯದಲ್ಲಿ ಪಕ್ಷದ ಪದಾಧಿಆಕಾರಿಗಳು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಪತ್ರಿಿಕಾಗೋಷ್ಠಿಿ ನಡೆಸಲಾಯಿತು.ಅಧ್ಯಕ್ಷರಾದ ಎ.ಶೇಖರಪ್ಪ ಮಾತನಾಡಿ ಇತ್ತೀಚಿಗೆ ಕೆಲ ಖಾಸಗಿ ವ್ಯಕ್ತಿಿಗಳು ಪತ್ರಿಿಕಾ ಪ್ರಕಟಣೆ ನೀಡಿ 20ರಂದು ಪಟ್ಟಣದ ತರಳಬಾಳು ಕಲ್ಯಾಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಕರೆ ನೀಡಿದ್ದಾರೆ ಇದು ತಾಲೂಕು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ ಹಾಗಾಗಿ ಇದು ಪಕ್ಷದ ಅಡಿಯಲ್ಲಿ ಅಥವಾ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಪಕ್ಷದ ಚೌಕಟ್ಟಿಿನಲ್ಲಿ ನಡೆಯುವ ಕಾರ್ಯಕ್ರಮವಲ್ಲ. ಇದು ಅವರ ಖಾಸಗಿ ಕಾರ್ಯಕ್ರಮ ಹೀಗಾಗಿ ಯಾವುದೇ ಮುಖಂಡರುಗಳು ಜಿಲ್ಲಾ ಮುಖಂಡರುಗಳು ಬಿಜೆಪಿ ಎಂಎಲ್ಎ ಗಳು ರಾಜ್ಯ ನಾಯಕರು ತಾಲೂಕಿನ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆೆ ಹಾಜರಾಗುವುದಿಲ್ಲ ಎಂದರು.
ಪಕ್ಷದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರು ಮುಖಂಡರುಗಳ ಗಮನಕ್ಕೆೆ ಬಾರದೆ ಪಕ್ಷದ ಸಂಘಟನೆ ಹೆಸರಿನಲ್ಲಿ ಕೆಲ ವ್ಯಕ್ತಿಿಗಳು ಮಾಡುವ ಕಾರ್ಯಕ್ರಮ ಪಕ್ಷದ ಸಂಘಟನೆಗೆ ಬೆಳವಣಿಗೆಗೆ ದಕ್ಕೆೆ ಉಂಟು ಮಾಡುವ ರೀತಿಯಲ್ಲಿದ್ದು ಈಗಾಗಲೇ ಇಂತವರ ವಿರುದ್ಧ ಕ್ರಮಕ್ಕಾಾಗಿ ಜಿಲ್ಲಾಧ್ಯಕ್ಷರ ಗಮನಕ್ಕೆೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವುದು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಇತ್ತೀಚಿಗೆ ನಾಲ್ಕಾಾರು ಮಂದಿ ಸೇರಿಕೊಂಡು ಪತ್ರಿಿಕಾ ಪ್ರಕಟಣೆ ನೀಡಿ ಬಿಜೆಪಿ ಪಕ್ಷದ ಅಡಿಯಲ್ಲಿ ಕಾರ್ಯಕ್ರಮ ಕಾರ್ಯಕ್ರಮ ಹಮ್ಮಿಿಕೊಂಡಿರುವದು ಅದು ಅವರ ವೈಯಕ್ತಿಿಕ ಕಾರ್ಯಕ್ರಮ ಪಕ್ಷದ ಚೌಕಟ್ಟಿಿನ ಕಾರ್ಯಕ್ರಮವಲ್ಲ. ಪಕ್ಷದ ಯಾವುದೇ ಕಾರ್ಯಕ್ರಮವಿರಲಿ ಅದು ಮಂಡಲ ಅಧ್ಯಕ್ಷರ ಅಡಿಯಲ್ಲಿ ಪಕ್ಷದ ಅಧಿಕೃತ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು ಕಾರ್ಯಕ್ರಮಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಪತ್ರಿಿಕಾಗೋಷ್ಠಿಿಯಲ್ಲಿ ಜಿಲ್ಲಾ ಉಪಾಧ್ಯಕ ಮಂಜುನಾಥ್ ಉದಯ್ ಕುಮಾರ್.ಪ್ರಧಾನ ಕಾರ್ಯದರ್ಶಿಗಳಾದ ಪಂಪಾನಾಯ್ಕ್, ಸಿದ್ದೇಶ್, ತಾಲೂಕು ಉಪಾಧ್ಯಕ್ಷರುಗಳಾದ, ಶಿಂಗ್ರಿಿಹಳ್ಳಿಿ ನಾಗರಾಜ್, ಗಂಗಾನಾಯ್ಕ್, ಬಸವನಗೌಡ, ತಾಲೂಕು ಕಾರ್ಯದರ್ಶಿಗಳಾದ ಎಂ.ಮಲ್ಲೇಶ್, ಪ್ರಸನ್ನ,ಕೆಂಚಪ್ಪ, ಮಹಾಂತೇಶ್, ಖಜಾಂಜಿ ಕೆ.ಮಾರುತಿ,ಮಾಧ್ಯಮ ಪ್ರಮುಖ ಗೌರಿಹಳ್ಳಿಿ ಬಸವರಾಜ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

