ಸುದ್ದಿಮೂಲ ವಾರ್ತೆ ಕೊಪ್ಪಳ, ೆ.21:
ನೈಸರ್ಗಿಕವಾಗಿರುವ ಕೆರೆ ಒತ್ತುವರಿ ಮಾಡಿ ದರ್ಗಾಕ್ಕೆೆ ರಸ್ತೆೆ ಮಾಡಿಕೊಳ್ಳಲಾಗುತ್ತಿಿದೆ ಎಂಬ ಆರೋಪ ಕೇಳಿ ಬರುತ್ತಿಿದೆ. ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ಹೋರಾಟಕ್ಕೆೆ ಮಣಿದು ಸಧ್ಯ ರಸ್ತೆೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಪ್ರಕರಣದಿಂದ ಕೊಪ್ಪಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಒಂದು ಕಾಲದಲ್ಲಿ ಕೊಪ್ಪಳ ನಗರಕ್ಕೆೆ ಕುಡಿವ ನೀರು ಒದಗಿಸುವ ಬೃಹತ್ತಾಾದ ಕೆರೆಯಾಗಿತ್ತು. ಸುಮಾರು 81 ಎಕರೆ ವಿಸ್ತಾಾರವಾದ ಹುಲಿಕೇರಿಯು ನೈಸರ್ಗಿಕವಾಗಿ ಸುಂದರವಾದ ಕೆರೆ ಇದೆ. ಈ ಕೆರೆ ದಡ ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹುಲಿಕೇರಿಯ ಬಲದಂಡೆಯಲ್ಲಿರುವ ಶಿವರಾತ್ರೇೇಶ್ವರ ದೇವಸ್ಥಾಾನ ಪಕ್ಕದಲ್ಲಿ ಸುಮಾರು 1000 ಮೀಟರ ರಸ್ತೆೆಯನ್ನು ದರ್ಗಾಕ್ಕೆೆ ಹೋಗಲು ನಿರ್ಮಿಸುತ್ತಿಿದ್ದಾಾರೆ. ಕೆರೆಯನ್ನು ಬರ್ ಝೋನ್ ಹಾಗು ಕೆರೆಯನ್ನು ಒತ್ತುವರಿ ಮಾಡಿ ಕಳೆದ ನಾಲ್ಕು ದಿನಗಳಿಂದ ರಸ್ತೆೆ ನಿರ್ಮಿಸುತ್ತಿಿದ್ದಾಾರೆ. ನಗರಸಭೆಯ ನಿರ್ಲಕ್ಷ್ಯ ದಿಂದಾಗಿ ಕೆರೆ ಒತ್ತುವರಿ ಮಾಡಲಾಗುತ್ತಿಿದೆ. ಒತ್ತುವರಿಯಾಗಿರುವ ಕೆರೆಯ ಜಾಗೆಯನ್ನು ತೆರವುಗೊಳಿಸಬೇಕು.ಒತ್ತುವರಿ ಮಾಡಿರುವವರ ಮೇಲೆ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಮುಖಂಡರು ಇಂದು ಎಂಎಲ್ಸಿಿ ಹೇಮಲತಾ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಅನಧಿಕೃತವಾಗಿ ರಸ್ತೆೆ ನಿರ್ಮಿಸುತ್ತಿಿದ್ದಾಾರೆ ಎಂದು. ಬಿಜೆಪಿ ಮುಖಂಡರು ಕೆರೆಯ ದಂಡೆಯ ಮೇಲೆ ಕುಳಿತು ಪ್ರತಿಭಟನೆ ಮಾಡಿದರು.
ಒತ್ತುವರಿಯ ಬಗ್ಗೆೆ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುತ್ತಾಾರೆ. ಹಾಗಾದರೆ ಒತ್ತುವರಿಗೆ ಯಾರ ಕುಮ್ಮಕ್ಕು ಇದೆ ಎಂಬುವದನ್ನು ಪತ್ತೆೆ ಮಾಡಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಈ ವೇಳೆ ಪ್ರತಿಕ್ರಿಿಯಿಸಿದ ನಗರಸಭೆ ಪೌರಾಯುಕ್ತರು, ರಸ್ತೆೆ ನಿರ್ಮಿಸಲು ಪರವಾನಿಗೆ ಪಡೆದಿಲ್ಲ ಈ ಕಾರಣಕ್ಕಾಾಗಿ ವಾಹನಗಳನ್ನು ಜಪ್ತಿಿ ಮಾಡಲಾಗಿದೆ. ಕೆರೆ ಒತ್ತುವರಿಯಾಗಿರುವ ಬಗ್ಗೆೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಅಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದಿದ್ದಾಾರೆ.
ದರ್ಗಾಕ್ಕೆೆ ರಸ್ತೆೆ ನಿರ್ಮಿಸುವ ವಿಷಯಕ್ಕೆೆ ಈಗ ವಿವಾದ ಉಂಟಾಗಿದ್ದು. ಈ ವಿಷಯದಿಂದ ಕೊಪ್ಪಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಬಿಜೆಪಿ ಹೋರಾಟದಲ್ಲಿ ಎಂಎಲ್ಸಿ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ ಬಸವರಾಜ ಕ್ಯಾಾವಟರ್, ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಾಳ, ಸುನೀಲ ಹೆಸರೂರು. ದೇವರಾಜ ಹಾಲಸಮುದ್ರ, ಮಹೇಶ ಅಂಗಡಿ, ಮಹಾಲಕ್ಷ್ಮಿಿ ಕಂದಾರಿ ಸೇರಿ ಹಲವರು ಇದ್ದರು.
ಹುಲಿಕೇರಿ ಒತ್ತುವರಿ ; ಬಿಜೆಪಿ ಹೋರಾಟ, ಕಾಮಗಾರಿ ಸ್ಥಗಿತ

