ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.23:
ಗ್ರಾಾಮದ ಕೃಷಿ ಪತ್ತಿಿನ ಸಹಕಾರ ಸಂಘದಲ್ಲಿ ಪಿಗ್ಮಿಿ, ಸ್ವಸಹಾಯ ಗುಂಪುಗಳ ಹಣದಲ್ಲಿ ಅವ್ಯವಹಾರ ನೆಡದಿದ್ದು ಉನ್ನತ ಮಟ್ಟದ ತನಿಖೆ ಮಾಡಿ ತಪಸ್ಥಿಿತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರಾಾಂತ ರೈತ ಸಂಘದ ಮುಖಂಡರಾದ ಹನುಮಂತ ಮಡಿವಾಳ, ರಂಗನಾಥ ಬುಂಕಲದೊಡ್ಡಿಿ ಒತ್ತಾಾಯಿಸಿದ್ದಾಾರೆ.
ಸುದ್ದಿಗೋಷ್ಠಿಿ ನಡೆಸಿದ ಅವರು ಕಳೆದ ಒಂದುವರೆ ವರ್ಷದಿಂದ ಆಡಳಿತ ಮಂಡಳಿ ಇಲ್ಲ ಈಗ ಆಡಳಿತ ಅಧಿಕಾರಿಗಳ ನೇತೃತ್ವದಲ್ಲಿ ಸಹಕಾರ ಸಂಘದ ಕಾರ್ಯಗಳು ನಡೆದಿದ್ದು ವ್ಯವಸ್ಥಾಾಪಕ ನಿರ್ದೇಶಕರ ಹುದ್ದೆ ಖಾಲಿ ಇದೆ, ವ್ಯವಸ್ಥಾಾಪಕ ಹುದ್ದೆಗೆಗಾಗಿ ಇದೆ ಸಹಕಾರ ಸಂಘದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಾರ್ಯದರ್ಶಿ ಹುದ್ದೆಗೆ ( ವ್ಯವಸ್ಥಾಾಪಕ ನಿರ್ದೇಶಕ) ಸಹಕಾರ ಇಲಾಖೆ ಅಧಿಕಾರಿಗಳು ಜೊತೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡುವಾಗಲೂ ಯಾವುದೇ ಮಾನದಂಡ ಗಳನ್ನು ಅನುಸರಿಸಿಲ್ಲ ಎಂದು ದೂರಿದರು.
ಸಹಕಾರ ಸಂಘದಲ್ಲಿ ಪಿಗ್ಮಿಿ ಸಂಗ್ರಹ ಮಾಡುವ ನೌಕರನಿಗೆ ವ್ಯವಸ್ಥಾಾಪಕ ನಿರ್ದೇಶಕ ಹುದ್ದೆಗೆ ಆದೇಶ ಮಾಡಿದ್ದು ಗಮನಿಸಿದರೆ ಅವ್ಯವಹಾರಕ್ಕೆೆ ಕುಮ್ಮಕ್ಕು ನೀಡಿದಂತಿದೆ. ಸಿಬ್ಬಂದಿಗಳಿಂದ ಭ್ರಷ್ಟಾಾಚಾರ ನಡೆದಿದ್ದರೂ ಅಧಿಕಾರಿಗಳು ಯಾವ ತನಿಖೆ ಮಾಡಲಾರದೆ ಮೌನ ವಹಿಸಿದ್ದಾಾರೆ. ಇಲಾಖೆಯ ಮೇಲಾಧಿಕಾರಿಗಳ ಕೈವಾಡ ಇದೆ ಎಂದು ಆರೋಪಿಸಿದರು.
ಈ ಸಹಕಾರ ಸಂಘದಲ್ಲಿ ನೆಡದಿರುವ ಭ್ರಷ್ಟಾಾಚಾರವನ್ನು ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಿ ಕ್ರಮ ಜರುಗಿಸಬೇಕು ಮತ್ತು ಸಹಕಾರ ಇಲಾಖೆಯ ಮಾನದಂಡಗಳ ಪ್ರಕಾರ ಸಿಬ್ಬಂದಿ ಗಳನ್ನು ನೇಮಿಸಬೇಕು ಎಂದು ಆಗ್ರಹಿಸಿ ಇಂದಿನಿಂದ ಕೃಷಿ ಪತ್ತಿಿನ ಸಹಕಾರ ಕಾರ್ಯಲಯದ ಮುಂದೆ ನಿರಂತರ ಧರಣಿ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಬಸವರಾಜ ವಂದಲಿ, ಬೋಜಾ (ಹನುಮಂತ) ಕಲಿಮ್, ದುರುಗಪ್ಪ ಹೊರಟ್ಟು ಉಪಸ್ಥಿಿತರಿದ್ದರು.
ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಭ್ರಷ್ಟಾಚಾರದ ತನಿಖೆಗಾಗಿ ಇಂದಿನಿಂದ ಧರಣಿ

