ಸುದ್ದಿಮೂಲ ವಾರ್ತೆ ಬಳಗಾನೂರು, ೆ.24:
ಗ್ರಾಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಯಾವುದೇ ಸಮುದಾಯದ ಪ್ರತಿಭೆಗಳಾಗಲಿ ಅವರನ್ನು ಗೌರವಿಸಿ ಸಾಧನೆಗೈದ ಪ್ರತಿಭೆಗಳ ಹೆಚ್ಚಿಿನ ಬೆಳವಣಿಗೆಗೆ ಸಹಕರಿಸುವಂತೆ ಬೆಂಗಳೂರಿನ ಕರ್ನಾಟಕ ರಾಜ್ಯ ಬೇಡರ ಸಮಿತಿ ಅಧ್ಯಕ್ಷ ಅಂಬಣ್ಣ ನಾಯಕ ಗುಜ್ಜಲ್ ಹೇಳಿದರು.
ಪಟ್ಟಣ ನಾಯಕವಾಡಿಯ ಶ್ರೀದುರ್ಗಾದೇವಿ ದೇವಸ್ಥಾಾನದ ಆವರಣದಲ್ಲಿ 2026ರ ಇಂಡಿಯಾಬುಕ್ ಆ್ ರೆಕಾರ್ಡಗೆ ಆಯ್ಕೆೆಯಾಗಿರುವ ಯುಕೆಜಿಯ ವಿದ್ಯಾಾರ್ಥಿ ಪ್ರೀೀತಮ್ ಸಗರಪ್ಪ ತಳವಾರಗೆ ಹಮ್ಮಿಿಕೊಂಡ ಸನ್ಮಾಾನ ಕಾರ್ಯಕ್ರಮದಲ್ಲಿ ವಿದ್ಯಾಾರ್ಥಿಪ್ರೀೀತಮ್ ತಳವಾರ ಮತ್ತು ಕುಟುಂಬವನ್ನು ಸನ್ಮಾಾನಿಸಿ ಮಾತನಾಡಿದರು.
ಯುಕೆಜಿಯ ವಿದ್ಯಾಾರ್ಥಿ ಪ್ರೀತಮ್ ಸಗರಪ್ಪ ತಳವಾರ 2026 ರ ಇಂಡಿಯಾಬುಕ್ ಆ್ರೆಕಾರ್ಡಗೆ ಆಯ್ಕೆೆಯಾದ ಈ ವಿದ್ಯಾಾರ್ಥಿಯು ಪ್ರಪಂಚದ ವಿವಿಧ 90 ದೇಶಗಳ ರಾಜಧಾನಿ, ಭಾರತ ದೇಶದ ರಾಜ್ಯಗಳ ರಾಜಧಾನಿ, ರಾಷ್ಟ್ರೀಯ ಚಿನ್ನೆೆಗಳು, ನೋಬೇಲ್ ಪ್ರಶಸ್ತಿಿ, ಜ್ಞಾಾನಪೀಠ ಪ್ರಶಸ್ತಿಿಗಳು ಪಡೆದ ಮಹಾನ ಸಾಹಿತಿಗಳ ಹೆಸರು, ವಿಶ್ವದಅದ್ಭುತಗಳ ಹೆಸರು, ಸೌರಗ್ರಹಗಳು, ಖಂಡಗಳು ಉತ್ತರಿಸುವುದರ ಮೂಲಕ ಅಪಾರ ಜ್ಞಾಾನ ಹೊಂದಿರುವ ಪ್ರತಿಭೆಗೆ ಸನ್ಮಾಾನ ಪುರಸ್ಕಾಾರಗಳ ಜತೆಗೆ ಹೆಚ್ಚಿಿನ ಬೆಳವಣಿಗೆಗೆ ಶಿಕ್ಷಣಪ್ರೇೇಮಿಗಳ, ಸಮುದಾಯದವರ, ಜನಪ್ರತಿನಿಧಿಗಳು ಸರಕಾರದ ಗಮನಕ್ಕೆೆ ತರುವುದರ ಮೂಲಕ ಸಾಧನೆಗೈದ ಪ್ರತಿಭೆಗೆ ನೆರವಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಯೋಧ ಆಂಜನೇಯ ನಾಯಕ್, ರಾಜ್ಯಬೇಡರ ಸಮಿತಿಯ ಸದಸ್ಯ, ಮಾಜಿ ಯೋಧ ಆಂಜನೇಯ ನಾಯಕ, ಉಪನ್ಯಾಾಸಕ ಯಂಕೋಬ ನಾಯಕ್ ಬೂತಲದಿನ್ನಿಿ, ಸಿಂಧನೂರು ತಾಲ್ಲೂಕಾ ಬೇಡರ ಸಮಿತಿ ಅಧ್ಯಕ್ಷ ಅಮರೇಶ ನಾಯಕ ವೀರಾಪುರ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಗಚ್ಚಿಿನಮಠದ ಮೃತ್ಯುಂಜಯಸ್ವಾಾಮಿ ವಿದ್ಯಾಾರ್ಥಿ ಪಾಲಕ ಸಗರಪ್ಪ ತಳವಾರ, ತಾಯಿ ರೇಣುಕಾ, ಸಮುದಾಯದ ಮುಖಂಡರಾದ ದುರುಗಪ್ಪ ತಳವಾರ, ಬಸಂತಪ್ಪ ಬೈಲಗುಡ್ಡ, ಬಸವರಾಜ, ಹನುಮೇಶ ನಾಯಕ, ಬಸವಲಿಂಗ, ಮೌನೇಶನಾಯಕ ಮಹಿಳೆಯರು, ಯುವಕರು ಮತ್ತಿಿತರರು ಇದ್ದರು.
ಸಾಧನೆಗೈದ ಪ್ರತಿಭೆಗಳ ಹೆಚ್ಚಿನ ಬೆಳವಣಿಗೆಗೆ ಸಹಕರಿಸಿ – ಅಂಬಣ್ಣ ನಾಯಕ

