ಸುದ್ದಿಮೂಲ ವಾರ್ತೆ ರಾಯಚೂರು, ಜ.21:
ಜಿಲ್ಲೆೆಯ ಜನಪ್ರತಿನಿಧಿಗಳ, ಪತ್ರಕರ್ತರ ಒತ್ತಾಾಸೆಯೊಂದಿಗೆ ಜನ ಸಾಮಾನ್ಯರ ಕನಸಿನಂತೆ ಕಡಿಮೆ ವೆಚ್ಚದಲ್ಲಿ ಆರ್ಥಪೂರ್ಣ ಜಿಲ್ಲಾಾ ಉತ್ಸವಕ್ಕೆೆ ಅಂತಿಮ ಸಿದ್ದತೆಗಳು ನಡೆಯುತ್ತಿಿವೆ ಎಂದು ಜಿಲ್ಲಾಾಧಿಕಾರಿ ಕೆ.ನಿತೀಶ್ ಹೇಳಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಕರ್ತರೊಂದಿಗಿನ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಇಚ್ಛಾಾಶಕ್ತಿಿ ಮತ್ತು ಪತ್ರಕರ್ತರ ಪ್ರಯತ್ನದಿಂದ ಪ್ರಸಕ್ತ ವರ್ಷದಲ್ಲಿ ನಿಗದಿಯಾದ ಉತ್ಸವಕ್ಕೆೆ ಬೇರೆ ಬೇರೆ ಕಡೆಗಳಿಂದಲು ಹಣಕಾಸಿನ ಸಹಾಯ ಸಹಕಾರ ಸಿಗುತ್ತಿಿದೆ. ಈ ಮೂಲಕ ಉತ್ಸವ ಆಗಬೇಕು ಎನ್ನುವ ಸದಾಶಯವು ಎಲ್ಲ ಕಡೆಗಳಿಂದಲೂ ವ್ಯಕ್ತವಾಗುತ್ತಿಿದೆ ಎಂದು ತಿಳಿಸಿದರು.
ಕಡಿಮೆ ಬಜೆಟ್ನಲ್ಲಿ ಸಹ ಅತ್ಯಂತ ವಿಭಿನ್ನ ರೀತಿಯಲ್ಲಿ ಉತ್ಸವದಲ್ಲಿ ನಾನಾ ಕಾರ್ಯಕ್ರಮ ಏರ್ಪಾಡು ಮಾಡಲಾಗುತ್ತಿಿದೆ. ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ಜಿಲ್ಲೆಯ ಎಲ್ಲ ನಾಗರಿಕರಿಂದ ಸಂಘ ಸಂಸ್ಥೆೆಗಳ ಪದಾಧಿಕಾರಿಗಳಿಂದ ಕೇಳಿ ಬಂದ ಎಲ್ಲ ಸಲಹೆಗಳನ್ನು ಪರಿಗಣಿಸಿ ಉತ್ಸವದ ಕಾರ್ಯಕ್ರಮಗಳನ್ನು ಅಂತಿಮಗೊಳಿಸಲಾಗಿದೆ. ಪತ್ರಕರ್ತರ ಕೋರಿಕೆಯಂತೆ ಪತ್ರಕರ್ತರಿಗಾಗಿಯೇ ಪ್ರತ್ಯೇಕ ಮಾಧ್ಯಮಗೋಷ್ಠಿಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಹೊರಗಡೆಯಿಂದ ಬರುವ ಪತ್ರಕರ್ತರಿಗೆ ವಸತಿ ವ್ಯವಸ್ಥೆೆ, ಸಂಚರಿಸಿ ಸುದ್ದಿ ಸಮನ್ವಯಕ್ಕೆೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆೆ ಮಾಡುತ್ತಿಿದ್ದೇವೆ. ಮೂರು ದಿನಗಳ ಕಾಲ ಪತ್ರಕರ್ತರಿಗೆ ಅಗತ್ಯ ವ್ಯವಸ್ಥೆೆ ಮಾಡುತ್ತಿಿದ್ದೇವೆ. ಪ್ರವೇಶ ಪಾಸುಗಳನ್ನು ನೀಡುವುದಾಗಿಯೂ ತಿಳಿಸಿದರು.
ಪತ್ರಕರ್ತರಾದ ಆರ್ ಗುರುನಾಥ, ಕೆ.ಸತ್ಯನಾರಾಯಣ, ಚನ್ನಬಸವ ಬಾಗಲವಾಡ, ಚಂದ್ರಕಾಂತ ಮಸಾನಿ, ಅರವಿಂದ ಕುಲಕರ್ಣಿ, ಖಾನ್ ಸಾಬ್ ಮೋಮಿನ್, ರಾಚಯ್ಯ ಸ್ವಾಾಮಿ, ಸಿದ್ದು ಬಿರಾದಾರ, ಸಿದ್ದಯ್ಯ ಸ್ವಾಾಮಿ,ವಾಗೀಶ್ ಪಾಟೀಲ ಹಾಗೂ ಇನ್ನಿಿತರರು ಉತ್ಸವದ ನಾನಾ ಸಿದ್ದತೆಗಳಿಗೆ ಪೂರಕವಾಗಿ ಮಾತನಾಡಿ ಸಭೆಗೆ ಸಲಹೆಗಳನ್ನು ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷೆೆ ಸಂತೋಷಿ ರಾಣಿ, ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ವಿವಿಧ ಪತ್ರಿಿಕೆಗಳ ಮತ್ತು ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಇದ್ದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪತ್ರಕರ್ತರ ಸಭೆ ಎಲ್ಲರ ಒತ್ತಾಸೆಯಂತೆ ಆರ್ಥಪೂರ್ಣ ಜಿಲ್ಲಾ ಉತ್ಸವಕ್ಕೆ ಅಂತಿಮ ಸಿದ್ದತೆ – ಡಿಸಿ

