ಸುದ್ದಿಮೂಲ ವಾರ್ತೆ ಕವಿತಾಳ, ಜ.21:
ಪಟ್ಟಣದ ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.
ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖಂಡ ತಿಪ್ಪಯ್ಯ ಸ್ವಾಾಮಿ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಿರಲಿಂಗಪ್ಪ ಮಾತನಾಡಿ ವಚನಗಳ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆ ಅಪಾರ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳಬೇಕು, ಸರಕಾರ ಸಮಾಜದ ಅಭಿವೃದ್ದಿಗೆ ಹೆಚ್ಚಿಿನ ಅನುದಾನ ನೀಡುವ ಮೂಲಕ ಸಹಾಯ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಹುಲುಗಪ್ಪ, ರಮೇಶ ನಗನೂರು, ನಾಮ ನಿರ್ದೇಶಿತರಾದ ಅಯ್ಯಪ್ಪ ನೀಲೊಗಲ್, ಮೌನೇಶ ನಾಯಕ, ಮಾಜಿ ಸದಸ್ಯರಾದ ಗಂಗಪ್ಪ ದಿನ್ನಿಿ, ಮೌನೇಶ ಹಿರೇಕುರಬರು, ಮೌನೇಶ ಪೂಜಾರಿ, ಮುಖಂಡರಾದ ಕರಿಯಪ್ಪ ಅಡ್ಡೆೆ, ನಿವೃತ್ತ ಎ ಎಸ್ ಐ ಈರಣ್ಣ, ಮೌನೇಶ ಕೊಡ್ಲಿಿ, ಈರಣ್ಣ ಕೆಲಗೇರಿ, ಹನುಮಂತ ಬುಳ್ಳಾಾಪುರು, ಚಂದಪ್ಪ, ರಫಿ ಒಂಟಿಬಂಡಿ, ಹನುಮಂತ ಕಬ್ಬೆೆರ, ಅಮರೇಶ ಕಬ್ಬೆೆರ, ಶಿವಪ್ಪ ದಿನ್ನಿಿ, ರಮೇಶ ಇರಬಗೆರಿ, ಮೌನೇಶ ಸೈಕಲ್ ಅಂಗಡಿ, ಹನುಮಂತ ಅರಕೇರಿ, ಹುಚ್ಚಪ್ಪ ಬುಳ್ಳಾಾಪುರು, ಸಿಬ್ಬಂದಿ ರಾಘವೇಂದ್ರ ಮುತ್ತಲಿಕ್, ಪ್ರಶಾಂತಕುಮಾರ ಇನ್ನಿಿತರರು ಇದ್ದರು.
ಕವಿತಾಳ : ವಿವಿಧೆಡೆ ಅಂಬಿಗರ ಚೌಡಯ್ಯನವರ ಜಯಂತಿ

