ಸುದ್ದಿಮೂಲ ವಾರ್ತೆ ರಾಯಚೂರು, ನ.03:
ಇಲ್ಲಿನ ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯ ರಾಯಚೂರು, ದೇವದುರ್ಗ, ಮಾನವಿ, ಸಿರವಾರ ಹಾಗೂ ಅರಕೇರಾ ತಾಲ್ಲೂಕಿನಲ್ಲಿ 2025-26ನೇ ಸಾಲಿನ ಪ್ರಧಾನ ಮಂತ್ರಿಿ ಮತ್ಸ್ಯ ಸಂಪದ ಯೋಜನೆಯ ಧರ್ತಿ ಅಭಾ ಜನ ಜಾತಿಯ ಗ್ರಾಾಮ ಉತ್ಕರ್ಷ ಅಭಿಯಾನ (ಡಿಎಜೆಜಿಯುಎ)ದಡಿ ಅರ್ಹರಿಂದ ಅರ್ಜಿ ಆಹ್ವಾಾನಿಸಲಾಗಿದೆ.
ಅಭಿಯಾನದಡಿ ಬುಡಕಟ್ಟು ಸಮುದಾಯದ ಪರಿಶಿಷ್ಟ ಪಂಗಡದ (ಎಸ್ಟಿಿ) ವರ್ಗದವರಿಗೆ ಮಾತ್ರ ಮೀನು ಮಾರಾಟಕ್ಕಾಾಗಿ ಐಸ್ ಬಾಕ್ಸ್ ನೊಂದಿಗೆ ದ್ವಿಿಚಕ್ರ ವಾಹನ ಖರೀದಿ ಮತ್ತು ಜೀವಂತ ಮೀನು ಮಾರಾಟ ಮಳಿಗೆ ಕೇಂದ್ರಗಳನ್ನು ಸ್ಥಾಾಪಿಸಲು ನಿಗದಿತ ಗುರಿಗಳನ್ವಯ ಕೇಂದ್ರ ಸರ್ಕಾರವು ನೀಡಿರುವ ಪಟ್ಟಿಿಯಲ್ಲಿರುವ ಗ್ರಾಾಮಗಳಿಗೆ ಮಾತ್ರ ಸೀಮಿತಗೊಳಿಸಿ ಮೀನುಗಾರಿಕೆಯಲ್ಲಿ ತೊಡಗಿರುವ ಪರಿಶಿಷ್ಟ ಪಂಗಡದ ಆಸಕ್ತರು ಡಿಸೆಂಬರ್ 20ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿಿನ ಮಾಹಿತಿಗಾಗಿ ರಾಯಚೂರಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆೆ: 8050196667ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

