ಸುದ್ದಿಮೂಲ ವಾರ್ತೆ ಮಾನ್ವಿ, ೆ.09:
ನೊಂದವರಿಗೆ, ನಿರ್ಗತಿಕರಿಗೆ ಹಾಗೂ ಅನಾಥರಿಗೆ ಆಶ್ರಮ ಕಟ್ಟಲು ಮುಂದಾಗಿರುವ ನೆರಳು ಅನಾಥಾಶ್ರಮದ ಕಾರ್ಯ ಶ್ಲಾಾಘನೀಯ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಅವರು ರವಿವಾರ ಪಟ್ಟಣದ ನೆರಳು ಅನಾಥಾಶ್ರಮ ಸೇವಾ ಟ್ರಸ್ಟ್ ಆಯೋಜಿಸಿದ್ದ ಆಶ್ರಮದ ಸ್ವಂತ ಕಟ್ಟಡ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಕೆಲವು ಮಕ್ಕಳು ಹೆತ್ತವರಿಲ್ಲದೆ ತಬ್ಬಲಿಯಾಗಿದ್ದಾರೆ. ಇನ್ನೂ ಕೆಲವರು ಹೆತ್ತವರು ಮಕ್ಕಳಿದ್ದೂ ತಬ್ಬಲಿಗಳಾಗಿದ್ದಾರೆ. ನಿರ್ಲಕ್ಷ್ಯಕ್ಕೆೆ ಒಳಗಾದ ಇಂತಹ ವೃದ್ಧರಿಗೆ ನೆರಳಾಗಿ ಆಹಾರ, ಬಟ್ಟೆೆ, ವಸತಿ ಕುಟುಂಬದ ಪ್ರೀೀತಿ ನೀಡುತ್ತಿಿರುವ ಈ ಅನಾಥಾಶ್ರಮದ ಕಾರ್ಯ ನಿಜಕ್ಕೂ ಶ್ಲಾಾಘನೀಯ ಎಂದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಆಶೀರ್ವಚನ ನೀಡಿದರು.
ಪತ್ರಕರ್ತ ಸಿದ್ರಾಾಮಯ್ಯಸ್ವಾಾಮಿ, ಆಶ್ರಮದ ಹಿತೈಷಿಗಳಾದ ಸಾಜೀದ್ ಖಾದ್ರಿಿ, ರಾಯಚೂರಿನ ಲಲಿತಾ ಹಿರಿಯ ನಾಗರಿಕರ ಮನೆ ವ್ಯವಸ್ಥಾಾಪಕ ಮಾರೆಪ್ಪ, ಸರ್ವ ಧರ್ಮ ವೆಲ್ಫೇರ್ ಟ್ರ್ಟ್ ನ ಹನುಮಂತ ಕೋಟೆ, ಸೈಯದ್ ರಹೆಮತ್ ಅಲಿ, ನೆರಳು ಸಂಸ್ಥೆೆಯ ಸಂಸ್ಥಾಾಪಕ ಅಧ್ಯಕ್ಷ ಚೆನ್ನಬಸವಸ್ವಾಾಮಿ ಯದ್ದಲದೊಡ್ಡಿಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ನೆರಳು ಅನಾಥಾಶ್ರಮದ ಮಾರ್ಗದರ್ಶಕರಾದ ಡಿ. ಬಸನಗೌಡ, ಶರಣಪ್ಪಗೌಡ ಮದ್ಲಾಾಪುರ, ಎ. ಕೆ. ಜಾಗಿರದಾರ, ಆದಾಮ್ ಸಾಬ್, ಡಾ.ವಿವೇಕಾನಂದ, ರಾಮು ಹೊಳೆಯಪ್ಪನವರ್, ತ್ರಯಂಬಕೇಶ ಮೇದಾ,
ವಕೀಲ ಯಲ್ಲಪ್ಪ ಬಾದರದಿನ್ನಿಿ, ವರದಿಗಾರ ಶಿವಕುಮಾರ್ ಚಲ್ಮಲ್ ಭಾಗವಹಿಸಿದ್ದರು.
ನೆರಳು ಅನಾಥಾಶ್ರಮದ ಸೇವಾ ಕಾರ್ಯ ಶ್ಲಾಘನೀಯ- ರಮೇಶ ಬಾಬು ಯಾಳಗಿ

