ಸುದ್ದಿಮೂಲ ವಾರ್ತೆ ಬಳ್ಳಾಾರಿ, ಸೆ.29:
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಜನತಾ ದರ್ಶನದಲ್ಲಿ ಪಾಲ್ಗೊೊಂಡಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ತೀವ್ರ ಹೃದಯಾಘಾತದಿಂದ ಸೋಮವಾರ ಮೃತಪಟ್ಟಿಿದ್ದಾರೆ.
ಬಳ್ಳಾಾರಿ ಎಪಿಎಂಸಿ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ ರಾವ್ (52) ಅವರು ಸೋಮವಾರ ಬೆಳಗ್ಗೆೆಯಿಂದ ಕರ್ತವ್ಯಕ್ಕೆೆ ನಿಯೋಜನೆಗೊಂಡಿದ್ದರು. ಕರ್ತವ್ಯದ ಸಂದರ್ಭದಲ್ಲಿ ಏಕಾಏಕಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಾಗ, ತಕ್ಷಣವೇ ಅವರನ್ನು ಬಿಆರ್ ಎಂಸಿಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆೆ ಲ ನೀಡದೆ ಶ್ರೀನಿವಾಸ ರಾವ್ ಅವರು ನಿಧನರಾಗಿದ್ದಾರೆ. ಮೃತರ ಪೋಸ್ಟ್ ಮಾರ್ಟ್ಂ ನಡೆದ ನಂತರ, ಪಾರ್ಥಿವ ಶರೀರವನ್ನು ಕುಟುಂಬಕ್ಕೆೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಡಾ. ಶೋಭಾರಾಣಿ ಅವರು ಆಸ್ಪತ್ರೆೆಗೆ ತಕ್ಷಣವೇ ಭೇಟಿ ನೀಡಿ, ದುಃಖತಪ್ತ ಕುಟುಂಬಕ್ಕೆೆ ಸಾಂತ್ವನ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಶ್ರೀನಿವಾಸ ರಾವ್ ಅವರ ಮನೆಗೆ ಭೇಟಿ ನೀಡಿ, ಮೃತರ ಆತ್ಮಕ್ಕೆೆ ಶಾಂತಿಕೋರಿದ್ದಾರೆ. ಅಲ್ಲದೇ, ಕುಟುಂಬಕ್ಕೆೆ ಧೈರ್ಯ ತುಂಬಿದ್ದಾರೆ.
ಜನತಾದರ್ಶನ : ಕರ್ತವ್ಯ ನಿರತ ಎಎಸ್ಐ ಹೃದಯಾಘಾತದಿಂದ ನಿಧನ
