ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.29:
ದೆಹಲಿಯ ಎಐಸಿಸಿಐನ ಸುಸ್ಥಿಿರ ಕೃಷಿ – 2025ರ ಪ್ರಶಸ್ತಿಿ ಪುರಸ್ಕೃತರಾದ ಮಾತೃಭೂಮಿ ಸ್ಪೈಸಿ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಾಪಕರಾದ ಬ್ರಹ್ಮಯ್ಯನಾಯ್ಡು ತಮ್ಮಿಿನೇನಿ ಮತ್ತು ಸಹ ಸಂಸ್ಥಾಾಪಕರಾದ ಶಿವನಗೌಡ ಅವರನ್ನು ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯು ಅಭಿನಂದಿಸಿ, ಗೌರವಿಸಿದೆ.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಅಧ್ಯಕ್ಷ ಅವ್ವಾಾರು ಮಂಜುನಾಥ್ ಅವರು, ಎಐಸಿಸಿಐ ಗುರುತಿಸಿ – ಬಹುಮಾನ ನೀಡಿರುವುದರಿಂದ ಭವಿಷ್ಯದಲ್ಲಿ ಸುಸ್ಥಿಿರ ಕೃಷಿ, ಪರಿಸರ ಸ್ನೇಹಿ, ಆರೋಗ್ಯಕರ ಕೃಷಿ ಮತ್ತು ಸಾವಯವ ಕೃಷಿ ನಡೆಸಲು ಪ್ರೋೋತ್ಸಾಾಹ ನೀಡಿದಂತೆ ಆಗಲಿದೆ ಎಂದರು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು ಅವರು, ಕೃಷಿಯಲ್ಲಿ ಬಳ್ಳಾಾರಿ ಜಿಲ್ಲೆೆಯಲ್ಲಿ ಸಾಕಷ್ಟು ಖ್ಯಾಾತಿ ಸಾಧಿಸಿದೆ. ಈ ಹಿನ್ನೆೆಲೆಯಲ್ಲಿ ಸಾವಯವ ಕೃಷಿಯಲ್ಲೂ ಬಳ್ಳಾಾರಿ ಜಿಲ್ಲೆೆಯು ಎಐಸಿಸಿಐನಿಂದ ಬಹುಮಾನ ಪಡೆದಿರುವುದು ಶ್ಲಾಾಘನೀಯ ಎಂದರು.
ಸನ್ಮಾಾನಿತರಾದ ಬ್ರಹ್ಮಯ್ಯನಾಯ್ಡು ತಮ್ಮಿಿನೇನಿ ಮತ್ತು ಶಿವನಗೌಡ ಅವರು, ಕೃಷಿಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಸಾಧನೆ ಮಾಡುವ ಉತ್ಸಾಾಹಿಗಳಿಗೆ ಸೂಕ್ತ ಮಾರ್ಗದರ್ಶನ – ಪ್ರೋೋತ್ಸಾಾಹ ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಿಗಲಿದೆ. ಕ್ರಿಿಯಾಶೀಲರು – ಸೃಜನಶೀಲರಿಗೆ ಕೃಷಿ ಕ್ಷೇತ್ರ ಸಾಧನೆಗೆ ಪೂರಕವಾಗಿದೆ ಎಂದರು.
ಸಂಸ್ಥೆೆಯ ಹಿರಿಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ, ಉಪಾಧ್ಯಕ್ಷರುಗಳಾದ ಸೊಂತ ಗಿರಿಧರ್, ಪಿ.ಪಾಲಣ್ಣ, ಜಂಟಿ ಕಾರ್ಯದರ್ಶಿ ವಿ.ರಾಮಚಂದ್ರ, ಖಜಾಂಚಿ ನಾಗಳ್ಳಿಿ ರಮೇಶ್, ನಿಕಟಪೂರ್ವ ಅಧ್ಯಕ್ಷ ಯಶವಂತ ರಾಜ್ ನಾಗಿರೆಡ್ಡಿಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳ ಚೇರ್ಮನ್ ಗಳು, ವಿಶೇಷ ಆಹ್ವಾಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ

