ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.04:
ಹದಿನೈದನೇ ಹಣಕಾಸು ಆಯೋಗದ ಅನುದಾನ ಹಾಗೂ ಉದ್ಯೋೋಗ ಖಾತ್ರಿಿ ಯೋಜನೆಯ ಸಾಮಾಗ್ರಿಿ ವೆಚ್ಚವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿ ಸಕಾಲದಲ್ಲಿ ಸ್ಥಳೀಯ ಸಂಸ್ಥೆೆಗಳಿಗೆ ಚುನಾವಣೆ ನಡೆಸಲು ಆಗ್ರಹಿಸಿ ಕರ್ನಾಟಕ ಗ್ರಾಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಡಿಸೆಂಬರ್ 9 ರ ಮಂಗಳವಾರ ‘ಬೆಳಗಾವಿ ಚಲೋ’ ಹಮ್ಮಿಿಕೊಂಡಿದೆ.
ಬಳ್ಳಾಾರಿ ಜಿಲ್ಲಾಾ ಗ್ರಾಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಾ ಅಧ್ಯಕ್ಷರಾಗಿರುವ ಬಾಣಾಪುರ ನಾಗರಾಜ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿ, ಹದಿನೈದನೇ ಹಣಕಾಸು ಆಯೋಗದ ಅನುದಾನ ಹಾಗೂ ಉದ್ಯೋೋಗ ಖಾತ್ರಿಿ ಯೋಜನೆಯ ಸಾಮಾಗ್ರಿಿ ವೆಚ್ಚವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿ ಸಕಾಲದಲ್ಲಿ ಸ್ಥಳೀಯ ಸಂಸ್ಥೆೆಗಳಿಗೆ ಚುನಾವಣೆ ನಡೆಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಬೆಳಗಾವಿ ಚಲೋ’ ನಡೆದಿದೆ ಎಂದರು.
ಕರ್ನಾಟಕ ರಾಜ್ಯ ಗ್ರಾಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ನೇತೃತ್ವದಲ್ಲಿ ಈ ಚಲೋ ನಡೆದಿದೆ. ಬಳ್ಳಾಾರಿ ಜಿಲ್ಲೆೆಯ ಎಲ್ಲಾಾ ಗ್ರಾಾಮ ಪಂಚಾಯತಿ ಸದಸ್ಯರು ಮತ್ತು ಕುಟುಂಬದ ಸದಸ್ಯರು ಪಾಲ್ಗೊೊಳ್ಳಲಿದ್ದಾಾರೆ ಎಂದು ಅವರು ತಿಳಿಸಿದರು.

