ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.21:
ಬಳ್ಳಾಾರಿ ಜಿಲ್ಲೆೆಯ ಕೈಗಾರಿಕಾ ಅಭಿವೃದ್ಧಿಿಗೆ ಹೊಸ ದಿಕ್ಕು ತೋರಲು ಉದ್ದೇಶಿಸಿರುವ ‘ಅಪಾರಲ್ ಪಾರ್ಕ್’ ಯೋಜನೆಯನ್ನು ಲೋಕಸಭಾ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ ಅವರು ಶೀಘ್ರದಲ್ಲೇ ಉದ್ಘಾಾಟಿಸಲಿದ್ದಾಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾಾರೆ.
ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ. ಪಾಟೀಲ್ ಅವರು, ಬಳ್ಳಾಾರಿಯನ್ನು ಕನ್ನಡ ನಾಡಿನ ಟೆಕ್ಸ್ಟೈಲ್ ಹಬ್ ಆಗಿಸಲಾಗುತ್ತದೆ. ಈ ಪ್ರಾಾಜೆಕ್ಟ್ನ ಮೂಲ ಆಲೋಚನೆ ರಾಹುಲ್ ಗಾಂಧಿ ಅವರ ದೃಷ್ಟಿಿಕೋನದಿಂದ ಮೂಡಿ ಬಂದಿದೆ ಎಂದು ತಿಳಿಸಿದ್ದಾಾರೆ.
ಅಪಾರಲ್ ಪಾರ್ಕ್ಗಾಗಿ 158 ಎಕರೆ ಭೂಮಿಯನ್ನು ಈಗಾಗಲೇ ಸ್ವಾಾಧೀನ ಮಾಡಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ 400 ಎಕರೆ ಭೂಮಿಯನ್ನು ಸ್ವಾಾಧೀನಪಡಿಸಿಕೊಳ್ಳುವ ಪ್ರಕ್ರಿಿಯೆ ಚಾಲನೆ ನಡೆದಿದೆ. ಅಪಾರಲ್ ಪಾರ್ಕ್ ಪ್ರಾಾರಂಭವಾದಲ್ಲಿ ಉದ್ಯೋೋಗಗಳು ಸೃಷ್ಟಿಿಯಾಗಲಿವೆ. ಬಳ್ಳಾಾರಿಯ ಖನಿಜ ಉದ್ಯಮಕ್ಕೆೆ ಪರ್ಯಾಯವಾಗಿ ವಸ್ತ್ರೋೋದ್ಯಮವನ್ನು ಅಭಿವೃದ್ಧಿಿಪಡಿಸಲಾಗುತ್ತದೆ ಎಂದು ವಿವರಿಸಿದ್ದಾಾರೆ..

