ಸುದ್ದಿಮೂಲ ವಾರ್ತೆ ಕಲಬುರಗಿ, ಜ.24:
ನಗರದ ಶರಣಬಸವ ವಿಶ್ವವಿದ್ಯಾಾಲಯದಲ್ಲಿ ನಡೆದ 27ನೇ ಐಎಸ್ಟಿಇ ರಾಜ್ಯ ಮಟ್ಟದ ಪ್ರಾಾಧ್ಯಾಾಪಕರ ಸಮಾವೇಶದಲ್ಲಿ, ಶರಣಬಸವೇಶ್ವರ ವಿದ್ಯಾಾವರ್ಧಕ ಸಂಘಕ್ಕೆೆ ನೀಡಲಾಗಿರುವ ಪ್ರತಿಷ್ಠಿಿತ ಐಎಸ್ಟಿಇ ಬ್ಟ್ೆ ಎಜುಕೇಶನ್ ಸೊಸೈಟಿ ಪ್ರಶಸ್ತಿಿಯನ್ನು ಸಂಘದ ಅಧ್ಯಕ್ಷ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಾಜಿ ಅವರಿಗೆ ಐಎಸ್ಟಿಇ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರದಾನ ಮಾಡಿದರು.
ಪ್ರಶಸ್ತಿಿ ಸ್ವೀಕರಿಸಿ ಮಾತನಾಡಿದ ಡಾ.ಅವ್ವಾಾಜಿ, ಈ ಪ್ರಶಸ್ತಿಿಯನ್ನು ಶರಣಬಸವೇಶ್ವರ ಸಂಸ್ಥಾಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಾಜಿ ಅವರಿಗೆ ಅರ್ಪಿಸುವುದಾಗಿ ಹೇಳಿದರು. ಅವರು ಶಿಕ್ಷಣ ಸಂಸ್ಥೆೆಗಳ ಸರಪಳಿಯನ್ನು ಸ್ಥಾಾಪಿಸುವ ಮೂಲಕ ಈ ಪ್ರದೇಶದ ಜನರ ಶೈಕ್ಷಣಿಕ ಸಬಲೀಕರಣಕ್ಕಾಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಈ ಪ್ರಶಸ್ತಿಿಯು ಪೂಜ್ಯ ಡಾ.ಅಪ್ಪಾಾಜಿಯವರ ಜೀವಮಾನದ ಸಾಧನೆಯನ್ನು ಮತ್ತು ಅವರ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಶಿಕ್ಷಣ ಸಂಸ್ಥೆೆಗಳ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಮರ್ಪಣೆ ಮತ್ತು ನಿಮ್ಮೆೆಲ್ಲರ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಪ್ರಶಸ್ತಿಿ ನನ್ನನ್ನು ಹೆಚ್ಚು ಜವಾಬ್ದಾಾರಿಯುತವಾಗಿಸಿದೆ ಮತ್ತು ಶಿಕ್ಷಣ ಸಂಸ್ಥೆೆಗಳ ಮತ್ತಷ್ಟು ಸುಧಾರಣೆಗೆ ಹಾಗೂ ಈ ಪ್ರದೇಶದ ಜನರಿಗೆ ಹೆಚ್ಚಿಿನ ಶೈಕ್ಷಣಿಕ ಮಾರ್ಗಗಳನ್ನು ಸೃಷ್ಟಿಿಸಲು ಶ್ರಮಿಸುವಂತೆ ಮಾಡಿದೆ ಎಂದರು.
ಐಎಸ್ಟಿಇ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಸುರೇಶ್ ಡಿ.ಎಸ್. ಅವರು ಮಾತನಾಡಿ, ಕಲ್ಯಾಾಣ ಕರ್ನಾಟಕ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಾಗಿ ಪರಿವರ್ತಿಸಲು ಡಾ.ಅಪ್ಪಾಾಜಿ ಅವರು ಮಾಡಿದ ಅವಿಶ್ರಾಾಂತ ಪ್ರಯತ್ನಗಳಿಗಾಗಿ ಅವರಿಗೆ ಗೌರವ ಸಲ್ಲಿಸಿದರು ಮತ್ತು ಡಾ.ಅವ್ವಾಾಜಿಯವರು ಡಾ.ಅಪ್ಪಾಾಜಿಯವರ ಪರಂಪರೆಯನ್ನು ಮುಂದುವರೆಸುತ್ತಿಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಎಸ್ಟಿಇ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರತಾಪ್ಸಿನ್ಹ್ಹ ಕಾಕಾಸಾಹೇಬ ದೇಸಾಯಿ, ಶರಣಬಸವೇಶ್ವರ ವಿದ್ಯಾಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಉಪಕುಲಪತಿ ಪ್ರೊೊ. ಅನಿಲಕುಮಾರ ಬಿಡವೆ, ಪ್ರೊೊ.ವೀರೇಂದ್ರ ವೀರಭದ್ರ ಶೇಟೆ, ಪ್ರೊೊ. ಓರುಗಂಟಿ ಆಂಜನೇಯುಲು, ಡಾ.ಲಕ್ಷ್ಮೀ ಪಾಟೀಲ ಮಾಕಾ ಇದ್ದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ಬ್ಟ್ೆ ಎಜುಕೇಶನ್ ಸೊಸೈಟಿ ಪ್ರಶಸ್ತಿ ಪ್ರದಾನ

