ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.04:
ಭಾರತ ಕಮ್ಯುನಿಸ್ಟ್ ಪಕ್ಷ ಸಂಸ್ಥಾಾಪನೆಗೊಂಡು 100 ವರ್ಷಗಳಾದ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಶತಮಾನೋತ್ಸವ ಜಾಥಾ ಹಮ್ಮಿಿಕೊಳ್ಳಲಾಗಿದ್ದು, ಡಿ.6ರಂದು ಜಾಥಾ ನಗರಕ್ಕೆೆ ಆಗಮಿಸಲಿದೆ. ಅಂದು ಎಪಿಎಂಸಿಯ ಸಮುದಾಯ ಭವನದಲ್ಲಿ ಬೆಳಿಗ್ಗೆೆ 11.30ಕ್ಕೆೆ ಬಹಿರಂಗ ಸಭೆ ಹಮ್ಮಿಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾಾತ್ನಟ್ಟಿಿ ಹಾಗೂ ಎಐಟಿಸಿಯುಸಿ ಜಿಲ್ಲಾಾಧ್ಯಕ್ಷ ಭಾಷುಮಿಯಾ ಅವರು ತಿಳಿಸಿದ್ದಾಾರೆ.
ಭಾರತ ಕಮ್ಯುನಿಸ್ಟ್ ಪಕ್ಷ 1925ರಲ್ಲಿ ಸಂಸ್ಥಾಾಪನೆಗೊಂಡಿದ್ದು, ಇದೇ ಡಿ.26ಕ್ಕೆೆ 100 ವರ್ಷಗಳಾಗಲಿವೆ. ಪಕ್ಷದ ಶತಮಾನದ ಪಯಣದಲ್ಲಿ ಕಾರ್ಮಿಕರು, ರೈತರು, ಮಹಿಳೆಯರು, ಯುವಜನರು, ದಮನಿತ ಸಮುದಾಯಗಳು ಸೇರಿದಂತೆ ಎಲ್ಲ ಜನ ಸಮುದಾಯದ ದುಡಿಯುವ ವರ್ಗದ ಪರ ದನಿ ಎತ್ತುತ್ತ ಅವರ ಹಕ್ಕುಬಾದ್ಯತೆಗಳಿಗಾಗಿ ಪ್ರಜಾಸತ್ತಾಾತ್ಮಕ ಮಾರ್ಗದಲ್ಲಿ ನಿರಂತರ ಹೋರಾಟ ನಡೆಸುತ್ತ ಬಂದಿದೆ. ಸಂವಿಧಾನದ ಆಶಯಗಳಿಗೆ ಕಟಿಬದ್ಧವಾಗಿ, ಪ್ರಜಾತಂತ್ರದ ಮೌಲ್ಯಗಳ ಉಳಿವಿಗಾಗಿ ಪಕ್ಷ ಶ್ರಮಿಸುತ್ತಿಿದೆ. ್ಯಾಸಿಸ್ಟ್ ಪ್ರಭುತ್ವಗಳ ವಿರುದ್ಧ ಜನರ ಆಶೋತ್ತರಗಳನ್ನು ಮುನ್ನೆೆಲೆಗೆ ತರುವಲ್ಲಿ ಪಕ್ಷದ ಪಾತ್ರ ಸ್ಮರಣಾರ್ಹ ಎಂದು ಹೇಳಿದ್ದಾಾರೆ.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ಶತಮಾನೋತ್ಸವ ಜಾಥಾ ಉದ್ಘಾಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಹಂಪನಗೌಡ ಬಾದರ್ಲಿ ಭಾಗವಹಿಸುವರು. ಅತಿಥಿಗಳಾಗಿ ರಾಜ್ಯ ಮಂಡಳಿ ಸದಸ್ಯ ಡಾ.ಜನಾರ್ಧನ್, ಸಹ ಕಾರ್ಯದರ್ಶಿ ಡಾ.ಎಚ್.ಎಂ.ಸಂತೋಷ್, ಎಐಟಿಯುಸಿ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿಿ, ಸಿಪಿಐ(ಎಂಎಲ್) ಮಾಸ್ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಸಿಪಿಐ(ಎಂಎಲ್) ಲಿಬರೇಶನ್ನ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್, ಡಿಎಸ್ಎಸ್ (ಮೂರ್ತಿ ಬಣ) ಜಿಲ್ಲಾಾ ಸಂಚಾಲಕ ಅಶೋಕ ನಂಜಲದಿನ್ನಿಿ, ಡಿಎಸ್ಎಸ್ (ಸಾಗರ ಬಣ) ಜಿಲ್ಲಾಾ ಸಂಚಾಲಕ ಮಂಜುನಾಥ ಗಾಂಧಿನಗರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡರಾದ ಅಮೀನ್ಪಾಷಾ ದಿದ್ದಿಗಿ, ಶರಣಪ್ಪ ಮರಳಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾಾರೆ.

