ಸುದ್ದಿಮೂಲ ವಾರ್ತೆ ರಾಯಚೂರು, ನ.07:
ಕ್ಯಾಾನ್ಸರ್ ರೋಗ ತಡೆಗೆ ಸಂಬಂಧಿಸಿದಂತೆ ರಾಯಚೂರಿನ ರಾಜೀವಗಾಂಧಿ ಸೂಪರ್ ಸ್ಪೆೆಷಾಲಿಟಿ (ಓಪೆಕ್) ಆಸ್ಪತ್ರೆೆಯಲ್ಲಿ ಕೀಮೋಥೇರಪಿ ಡೇ ಕೇರ್ ಚಿಕಿತ್ಸೆೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.
ವಿಶ್ವ ಕ್ಯಾಾನ್ಸರ್ ದಿನಾಚರಣೆಯ ಅಂಗವಾಗಿ ನವೆಂಬರ್ 7ರಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮನುಷ್ಯನಿಗೆ ಕಂಡು ಬರುವ ಖಾಯಿಲೆಗಳಲ್ಲಿ ಭಯ ಹುಟ್ಟಿಿಸುವ ಕಾನ್ಸರ್ ( ಅರ್ಬುದ ಖಾಯಿಲೆ ) ರೋಗವು ಕ್ರಮವಿಲ್ಲದ ಜೀವನ ಶೈಲಿ, ಬೆಳೆಗಳಿಗೆ ಅತಿಯಾದ ರಾಸಾಯನಿಕಗಳ ಬಳಕೆ, ಸೂಕ್ತವಲ್ಲದ ದೈನಂದಿನ ಆಹಾರ ಪದ್ದತಿ, ವೈಯಕ್ತಿಿಕ ಅಶುಚಿತ್ವ, ತಂಬಾಕು ಉತ್ಪನ್ನಗಳ ಬಳಕೆ, ಬೀಡಿ ಸಿಗರೇಟ್ ಬಳಕೆಗಳಿಂದ ಉಂಟಾಗುವದನ್ನು ತಡೆಗಟ್ಟುವಿಕೆಗಾಗಿ ಆರಂಭಿಕ ಪತ್ತೆೆಗಾಗಿ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳಲು ಜನತೆಯು ಮುಂದೆ ಬರಬೇಕು ಎಂದರು.
ಕ್ಯಾಾನ್ಸರ್ನ ವಿವಿಧ ರೂಪಗಳು, ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವಿಕೆ ಬಗ್ಗೆೆ ಜನರಿಗೆ ಮಾಹಿತಿ ನೀಡಲು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಆಯುಷ್ಮಾಾನ್ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ತಪಾಸಣೆ, ಜಾಗೃತಿಯನ್ನು ನೀಡುವ ಜೊತೆಗೆ ಕ್ಯಾಾನ್ಸರ್ ಶಂಕಿತರನ್ನು ಮೇಲ್ಮಟ್ಟದ ಆಸ್ಪತ್ರೆೆಗೆ ಕಳುಹಿಸಿ ಕೊಡಲಾಗುತ್ತಿಿದೆ. ರೋಗದ ಲಕ್ಷಣಗಳನ್ನು ಮೊದಲೇ ಪತ್ತೆೆ ಹಚ್ಚುವುದರಿಂದ ಸೂಕ್ತ ಚಿಕಿತ್ಸೆೆಯ ಮೂಲಕ ರೋಗಿಯನ್ನು ಸಂಪೂರ್ಣ ಗುಣಮುಖರಾಗಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಒಪೆಕ್ ಆಸ್ಪತ್ರೆೆಯಲ್ಲಿ ಕೇಂದ್ರ ಆರಂಭ: ಕರ್ನಾಟಕ ಸರಕಾರದ ಮಾರ್ಗಸೂಚಿಗಳನ್ವಯ ಈಗಾಗಲೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಡಿ ಜಿಲ್ಲಾಡಳಿತ ಮೂಲಕ ರಾಯಚೂರ ನಗರದಲ್ಲಿರುವ ಒಪೆಕ್ ಆಸ್ಪತ್ರೆೆಯಲ್ಲಿ ಡೇ ಕೇರ್ ಕೀಮೊಥೆರಪಿ ಕೇಂದ್ರ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು. ಮುಂದಿನ ದಿನ

