ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.07:
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆೆ ಬಂದಾಗಿನಿಂದಲೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆೆಯ ಆಶಯಕ್ಕೆೆ ವಿರುದ್ಧವಾಗಿ ಆಡಳಿತ ನಡೆಸುತ್ತಿಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾಾತಿ ಸುಂದರೇಶ್ ಆರೋಪಿಸಿದರು.
ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಅಂಗವಾಗಿ ಶನಿವಾರ ಹಮ್ಮಿಿಕೊಂಡಿದ್ದ ಬಹಿರಂಗ ಸಭೆ ಉದ್ಘಾಾಟಿಸಿ ಅವರು ಮಾತನಾಡಿದರು. ಅಸಮಾನ ಸಮಾಜ ನಿರ್ಮಾಣಕ್ಕಾಾಗಿ ಜಾತಿ, ಧರ್ಮ, ದೇವರುಗಳ ಹೆಸರಿನಲ್ಲಿ ಒಡೆದಾಳುವ ನೀತಿಯನ್ನು ಆರ್ಎಸ್ಎಸ್ ಅನುಸರಿಸುತ್ತಿಿದೆ. ಆದರೆ ಸಿಪಿಐ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಕೆಲಸ ಮಾಡುತ್ತಿಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರು ಕಂಡಂತಹ ಸಮತಾ ರಾಜ್ಯ ನಿರ್ಮಾಣದ ಕನಸನ್ನು ನನಸಾಗಿಸಲು ದುಡಿಯುವ ವರ್ಗದವರೆಲ್ಲರೂ ಒಂದಾಗಿ ಹೋರಾಟ ಮಾಡಬೇಕಾದ ಅವಶ್ಯಕತೆಯಿದೆ ಎಂದರು.
ದೇಶದ ಶೇ.60 ರಷ್ಟು ಸಂಪತ್ತು ಕೇವಲ ಒಂದರಷ್ಟು ಜನರ ಕೈಯಲ್ಲಿದೆ. ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕುತಂತ್ರ ನಡೆಯುತ್ತಿಿದೆ. ಶ್ರೀಮಂತರ ಮತ್ತು ಬಡವರ ನಡುವೆ ಬಹುದೊಡ್ಡ ಕಂದಕ ಸೃಷ್ಠಿಿಯಾಗುತ್ತಿಿದೆ. ಇವುಗಳ ವಿರುದ್ಧ ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು ಐಕ್ಯ ಹೋರಾಟ ನಡೆಸಬೇಕು ಎಂದು ಹೇಳಿದರು.
ಸಿಪಿಐಎಂಎಲ್ ಮಾಸ್ಲೈನ್ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮಾತನಾಡಿ, ಭಾರತ ದೇಶಕ್ಕೆೆ ಸ್ವಾಾತಂತ್ರ್ಯ ಸಿಕ್ಕು ಮುಕ್ಕಾಾಲು ಶತಮಾನ ಗತಿಸಿದರೂ ಸಹ ಬಡತನ, ಹಸಿವು, ನಿರುದ್ಯೋೋಗ, ಆರ್ಥಿಕ ಅಸಮಾನತೆ, ಆರೋಗ್ಯ, ಶಿಕ್ಷಣ ತಾರತಮ್ಯ ದೊಡ್ಡ ಪಿಡುಗಾಗಿ ಕಾಡುತ್ತಿಿದೆ. ಆಳುವ ಪ್ರಭುತ್ವಗಳು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಿಸುವ ಕೆಲಸದಲ್ಲಿ ನಿರತವಾಗಿವೆ. ಸಮಾಜದಲ್ಲಿ ಗಲಭೆ, ಅಶಾಂತಿ ಸೃಷ್ಠಿಿಸುವ ಆರ್ಎಸ್ಎಸ್ ಸಂಘಟನೆಯಿಂದ ವಿದ್ಯಾಾರ್ಥಿ-ಯುವಜನರು ದೂರವಿರಬೇಕು ಎಂದರು.
ಸಿಪಿಐ ಅಧ್ಯಕ್ಷ ಬಾಷುಮಿಯಾ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಜಿಲ್ಲಾಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿಿ, ಸಿಪಿಐಎಂ ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು, ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್, ದಲಿತ ಸಂಘರ್ಷ ಸಮಿತಿ (ಮೂರ್ತಿ ಬಣ)ದ ಜಿಲ್ಲಾಾ ಸಂಚಾಲಕ ಅಶೋಕ ನಂಜಲದಿನ್ನಿಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್ಪಾಷಾ ದಿದ್ದಿಗಿ, ಶರಣಪ್ಪ ಮರಳಿ, ಜಮಾಅತೆ ಇಸ್ಲಾಾಮಿ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಹುಸೇನ್ಸಾಬ್, ಇ್ಟಾ ಸಂಘಟನೆಯ ಮುಖಂಡರಾದ ಪ್ರಸನ್ನಕುಮಾರ, ಮೋಹನ್ಕುಮಾರ, ವಿನಯಗೌಡ, ಎಐಟಿಯುಸಿ ಜಿಲ್ಲಾಾ ಮುಖಂಡರಾದ ಸುಲೋಚನಾ, ಶಾಂತಾ ಗೊರೇಬಾಳ ಉಪಸ್ಥಿಿತರಿದ್ದರು.
ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಕಾರ್ಯಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ಬಿಜೆಪಿ ಆಡಳಿತ : ಸ್ವಾತಿ ಸುಂದರೇಶ

