ಸುದ್ದಿಮೂಲ ವಾರ್ತೆ ಬೀದರ್, ಡಿ.20
ಬಹುದಿನಗಳಿಂದ ಸಮಸ್ಯೆೆಯಾಗಿ ಕಾಡುತ್ತಿಿದ್ದ ಬೀದರ್-ಚಿಮ್ಮಕೋಡ್ ಮಾರ್ಗ ಮಧ್ಯೆೆದ ಗಾದಗಿ ಸೇತುವೆ ಮೇಲ್ದರ್ಜೆಗೇರಿಸುವ ಕಾಮಗಾರಿ ಕಡೆಗೂ ಆರಂಭವಾಗಿದೆ.
ಮಳೆಗಾಲದಲ್ಲಿ ಗಂಟೆ ಮಳೆಗೆ ಸೇತುವೆ ಮೇಲಿಂದ ನೀರು ಹರಿದು ಗಂಟೆಗಳ ಕಾಲ ರಸ್ತೆೆ ಬಂದ್ ಆಗಿ ಸಂಚಾರಕ್ಕೆೆ ಭಾರೀ ತಾಪತ್ರಯ ಉಂಟಾಗುತ್ತಿಿತ್ತು. ಇದೇ ರಸ್ತೆೆ ಮೇಲಿಂದ ಚಿಮ್ಮಕೋಡ್, ಚಿಲ್ಲರ್ಗಿ ಹಾಗೂ ನೆರೆಯ ತೆಲಂಗಾಣಕ್ಕೂ ದಿನನಿತ್ಯ ಭಾರೀ ಸಂಖ್ಯೆೆಯಲ್ಲಿ ವಾಹನಗಳ ಓಡಾಟ ಇದೆ. ಕರ್ನಾಟಕ ಸಾರಿಗೆ ಸೇರಿ ತೆಲಂಗಾಣ ರಾಜ್ಯದ ಸಾರಿಗೆ ಬಸ್ಗಳು ಕೂಡ ಓಡಾಟ ನಡೆಸುವ ಸದರಿ ರಸ್ತೆೆ ಮೇಲೆ ಮಳೆಗಾಲದಲ್ಲಿ ಪ್ರಯಾಣಿಸಬೇಕಾದರೆ ರಸ್ತೆೆ ಬಂದ್ ಆಗುವ ಭೀತಿ ಕಾಡುತ್ತಿಿತ್ತು.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಎಡೆಬಿಡದೇ ಮಳೆ ಸುರಿದಿತ್ತು. ವಾರದಲ್ಲಿ ನಾಲ್ಕೈದು ದಿನಗಳ ಕಾಲ ನಿತ್ಯ ಗಂಟೆಗಳ ಕಾಲ ಸೇತುವೆ ಮೇಲಿಂದ ನೀರು ಹರಿದು ಸಂಚಾರಕ್ಕೆೆ ಅಡೆತಡೆ ಉಂಟಾಗುತ್ತಿಿತ್ತು.
ಈ ಬಗ್ಗೆೆ ಸುದ್ದಿಮೂಲದಲ್ಲಿ ಸತತವಾಗಿ ವರದಿ ಪ್ರಕಟಿಸಲಾಗಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೂ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಗಮನಕ್ಕೂ ಸದರಿ ವಿಷಯ ತರಲಾಗಿತ್ತು.
ಇದೀಗ ಲೋಕೋಪಯೋಗಿ ಇಲಾಖೆಯಿಂದ ಗಾದಗಿ ಸೇತುವೆ ಮೇಲ್ದರ್ಜೆಗೇರಿಸಲು ಟೆಂಡರ್ ಕರೆದಿದ್ದು, ಕಾಮಗಾರಿ ಆರಂಭವಾಗಿದೆ. ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಮಾರ್ಚ್ 2026ರೊಳಗೆ ಕಾಮಗಾರಿ ಮುಗಿಯಲಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಭಗವಾನಸಿಂಗ್ ಠಾಕೂರ್ ‘ಸುದ್ದಿಮೂಲ’ಕ್ಕೆೆ ತಿಳಿಸಿದ್ದಾರೆ.
ಗಾದಗಿ ಸೇತುವೆ ಮೇಲ್ದರ್ಜೆಗೇರಿಸುವ ಕಾಮಗಾರಿ ಈಗಷ್ಟೇ ಆರಂಭವಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಲಾಗುವುದು. ಹಳೇ ಸೇತುವೆಗಿಂತ ಎತ್ತರಕ್ಕೆೆ ಮೇಲ್ದರ್ಜೆಗೇರಿಸಲಾಗುತ್ತಿಿದೆ. ಹೆಚ್ಚಿಿನ ಪ್ರಮಾಣದಲ್ಲಿ ಮಳೆ ಸುರಿದರೂ ನೀರು ಸರಾಗವಾಗಿ ಹೊರಹೋಗುವ ವ್ಯವಸ್ಥೆೆ ಮಾಡಲಾಗುತ್ತಿಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ.

