ಸುದ್ದಿಮೂಲ ವಾರ್ತೆ ಬೀದರ್, ೆ.02:
ಔರಾದ್ (ಬಾ) ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ದಲ್ಲಾಳಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೇರಿಕೊಂಡು ಭಾರೀ ಪ್ರಮಾಣದ ಭ್ರಷ್ಟಾಾಚಾರ ನಡೆಸುತ್ತಿಿದ್ದಾರೆ ಎಂದು ಕಲ್ಯಾಾಣ ಕರ್ನಾಟಕ ನಿರ್ಮಾಣ ಸೇನೆಯ ವತಿಯಿಂದ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ.
ಹೊಸ ಪಡಿತರ ಚೀಟಿ ನೀಡಲು ಅರ್ಜಿದಾರರಿಂದ ರೂ.3,000 ರಿಂದ ರೂ.5,000 ವರೆಗೆ ಹಣ ಪಡೆಯಲಾಗುತ್ತಿಿದೆ. ಹಣ ನೀಡುವವರಿಗೆ ಮಾತ್ರ ಪಡಿತರ ಚೀಟಿ ನೀಡಲಾಗುತ್ತಿಿದ್ದು, ಬಡವರು ಹಣ ನೀಡಲು ಅಸಮರ್ಥರಾದರೆ ಅವರ ಅರ್ಜಿಗಳನ್ನು ನೆಪ ಹೇಳಿ ತಿರಸ್ಕರಿಸಲಾಗುತ್ತಿಿದೆ ಎಂದು ಆರೋಪಿಸಲಾಗಿದೆ.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಪಡಿತರ ಚೀಟಿಗಳನ್ನು ಮಂಜೂರು ಮಾಡುತ್ತಿಿದ್ದು, ಕೆಲ ಆನ್ಲೈನ್ ಸೆಂಟರ್ಗಳ ಮಾಲೀಕರ ಸಹಾಯದಿಂದ ಲಂಚ ಸಂಗ್ರಹಿಸಲಾಗುತ್ತಿಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಯಾವುದೇ ನೋಟಿಸ್ ಪ್ರಕಟಿಸದೇ ಹಾಗೂ ಮಾಧ್ಯಮಗಳಲ್ಲಿ ಪ್ರಕಟಣೆ ನೀಡದೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ರೂ.3,000ರಷ್ಟು ಹಣವನ್ನು ತಾಲ್ಲೂಕು ಆಹಾರ ಇಲಾಖೆಗೆ ನೀಡಬೇಕೆಂದು ಲಾನುಭವಿಗಳಿಂದ ಹಣ ವಸೂಲಿಸಲಾಗುತ್ತಿಿದೆ.
ಈ ಮೂಲಕ ತಿಂಗಳಿಗೆ ಸುಮಾರು ರೂ.3 ಲಕ್ಷಕ್ಕೂ ಅಧಿಕ ಮತ್ತು ವರ್ಷಕ್ಕೆೆ ರೂ.36 ಲಕ್ಷಕ್ಕೂ ಅಧಿಕ ಹಣ ಅಕ್ರಮವಾಗಿ ಸಂಗ್ರಹವಾಗುತ್ತಿಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಈಗಾಗಲೇ ಜನವರಿ 20, 23 ಮತ್ತು 28, 2026 ರಂದು ತಹಸೀಲ್ದಾಾರರಿಗೆ ದೂರು ನೀಡಲಾಗಿದ್ದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಘದ ಮುಖಂಡರು ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ, ಉಪ ನಿರ್ದೇಶಕರ ಕಚೇರಿ ಎದುರು ಸಾಂಕೇತಿಕ ಸತ್ಯಾಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಔರಾದ್ ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ

