ಸುದ್ದಿಮೂಲ ವಾರ್ತೆ ರಾಯಚೂರು, ಅ.04:
ಜಿಲ್ಲೆೆಯಲ್ಲಿನ ಸಾಯಿ ಕರ್ಮಚಾರಿಗಳಿಗೆ ವಸತಿ ಮತ್ತು ಪುನರ್ವಸತಿ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ಸವಲತ್ತು ಒದಗಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಾಧಿಕಾರಿ ನಿತೀಶ್ ಕೆ. ಅವರು ಸೂಚನೆ ನೀಡಿದರು.
ಇಂದು ನಗರದ ನೂತನ ಜಿಲ್ಲಾಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆೆ ನಿಗದಿಪಡಿಸಿದ ವೇತನ ಪಾವತಿಸುವುದು ಹಾಗೂ ವಿವಿಧ ಸೌಲಭ್ಯ ದೊರಕಿಸಿಕೊಡುವುದು ಅಧಿಕಾರಿಗಳ ಜವಾಬ್ದಾಾರಿಯಾಗಿದೆ. ಗುತ್ತಿಿಗೆ ಸಾಯಿ ಕರ್ಮಚಾರಿಗಳಿಗೆ ಗುತ್ತಿಿಗೆ ಏಜೆನ್ಸಿಿದಾರರು ಸಮಯಕ್ಕೆೆ ಸರಿಯಾಗಿ ನಿಗದಿಪಡಿಸಿದ ವೇತನ ಸೌಲಭ್ಯ ವಿತರಿಸುವ ಬಗ್ಗೆೆ ಖಚಿತಪಡಿಸಿಕೊಳ್ಳಬೇಕು. ಹಾಗೂ ವೇತನದೊಂದಿಗೆ ಇಎಸ್ಐ, ಪಿಎ್ ಪಾವತಿಸುವ ಬಗ್ಗೆೆ ಪರಿಶೀಲಿಸಿ ನಿಯಮಾನುಸಾರ ಇದ್ದಲ್ಲಿ ಮಾತ್ರವೇ ಗುತ್ತಿಿಗೆದಾರರಿಗೆ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದರು.
ಸಾಯಿ ಕರ್ಮಚಾರಿಗಳ ಪ್ರಮುಖ ಬೇಡಿಕೆಯಾದ ನಗರದ ಸಿಯಾತಲಾಬ್ನಲ್ಲಿ ನಿರ್ಮಾಣವಾಗುತ್ತಿಿರುವ ಸಮುದಾಯ ಭವನ ಆದಷ್ಟು ಬೇಗನೆ ಮುಗಿಸಬೇಕು ಎಂದು ಸಾಯಿ ಕರ್ಮಚಾರಿಗಳು ಮನವಿ ಮಾಡಿದರು. ಭವನ ನಿರ್ಮಾಕ್ಕಾಾಗಿ ಕೆಕೆಆರ್ಡಿಬಿಯ ಅನುದಾನದಲ್ಲಿ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಜಿಲ್ಲಾಾಧಿಕಾರಿಗಳು ತಿಳಿಸಿದರು.
ಶೈಕ್ಷಣಿಕ ಸೌಲಭ್ಯ: ವಾರ್ಷಿಕ ಆದಾಯ ಪ್ರಮಾಣವು 2.50 ಲಕ್ಷ ರೂ.ಗಿಂತ ಕಡಿಮೆ ಇರುವ ಎಸ್.ಸಿ.ಎಸ್.ಪಿ ಮ್ಯಾಾನ್ಯುವೆಲ್ ಸ್ಕ್ಯಾಾವೆಂಜರ್ಸ್ ಕುಟುಂಬಗಳ ಮಕ್ಕಳ ವಿಧ್ಯಾಾಭ್ಯಾಾಸದ ಪ್ರವೇಶ ಶುಲ್ಕ ಭರಿಸಲು ನಗರಸಭೆಯಲ್ಲಿ ಅನುದಾನ ಮೀಸಲಿಡಲು ಕ್ರಮ ವಹಿಸುವುದಾಗಿ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ತಿಳಿಸಿದರು.
ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಪುಟ್ಟಮಾದಯ್ಯ ,ಎಂ., ಐಎಎಸ್ ಪ್ರೊೊಬೆಷನರಿ ಅಧಿಕಾರಿ ಪುರುರಾಜ್ ಸಿಂಗ್, ಜಿಲ್ಲಾಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಜಿಲ್ಲಾಾ ಪಂಚಾಯತ್ ಮುಖ್ಯ ಲೆಕ್ಕಾಾಧಿಕಾರಿ ವಿಜಯಶಂಕರ್, ಸಮಾಜ ಕಲ್ಯಾಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧು, ಸಮಿತಿ ಸದಸ್ಯರಾದ ಮಂಜುನಾಥ, ನೀಲಕಂಠ, ಶಾಂತಪ್ಪ, ಅನಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.