ಸುದ್ದಿಮೂಲ ವಾರ್ತೆ ಕಮಲನಗರ, ೆ.02:
ತಾಲೂಕಿನ ಮದನೂರ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಮದನೂರ ಮತ್ತು ಖತಗಾಂವ ಗ್ರಾಾಮಗಳ ಅರ್ಹ ಲಾನುಭವಿಗಳಿಗೆ 2024-25 ನೇ ಸಾಲಿನ ಪ್ರಧಾನ ಮಂತ್ರಿಿ ಆವಾಸ್ ಯೋಜನೆ ಅಡಿಯಲ್ಲಿ ಆಯ್ಕೆೆಯಾದವರಿಗೆ ಗ್ರಾಾಮ ಪಂಚಾಯತ್ ಅಧ್ಯಕ್ಷೆ ಪೂಜಾ ಗುಂಡಪ್ಪಾಾ ಬೆಲ್ಲೆ ಅವರು ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ಮದನೂರ್ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ವಿತರಿಸಲಾಯಿತು.
ಪ್ರಧಾನ ಮಂತ್ರಿಿ ಆವಾಸ್ ಯೋಜನೆಯಡಿ ಮದನೂರ ಮತ್ತು ಖತಗಾಂವ ಗ್ರಾಾಮಕ್ಕೆೆ 239 ಮನೆಗಳು ಅನುಮೋದನೆ ಗೊಂಡಿದ್ದು ಅರ್ಹ 187 ಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಸಂಸದ ಸಾಗರ ಈಶ್ವರ ಖಂಡ್ರೆೆ ಅವರ ಕಛೇರಿಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿವರಿಸಿದರು.
ಗ್ರಾಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಗುಂಡಪ್ಪಾಾ ಬೆಲ್ಲೆ ಮದನೂರ ಮಾತನಾಡಿ, ಗ್ರಾಾಮದ ಪಂಚಾಯಿತಿ ವ್ಯಾಾಪ್ತಿಿಯ ಮದನೂರ ಮತ್ತು ಖತಗಾಂವ ಗ್ರಾಾಮಗಳು ಗುಡಿಸಲು ಮುಕ್ತ ಗ್ರಾಾಮ ಮಾಡುವ ಗುರಿ ಹೊಂದಲಾಗಿದೆ ಮತ್ತು ಪಾರದರ್ಶಕ ವ್ಯವಸ್ಥೆೆ ಮೂಲಕ ಲಾನುಭವಿಗಳ ಆಯ್ಕೆೆ ನಡೆದಿದ್ದು ಅಲ್ಲದೆ ಸೂಕ್ತ ಸಮಯದಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಗ್ರಾಾಮ ಪಂಚಾಯಿತಿ ಅಭಿವೃದ್ಧಿಿ ಅಧಿಕಾರಿ ಅವರಿಗೆ ಸೂಚಿಸಿದರು.
ಈ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ಲಾನುಭವಿಗಳಿಗೆ ಮೊದಲ ಕಂತಿನ ಹಣ 30,000 ರೂ. ಮನೆ ನಿರ್ಮಾಣ ಮಾಡುವ ಪೂರ್ವದಲ್ಲಿಯೆ ಜಮೆ ಆಗಲಿದೆ. ತಕ್ಷಣವೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದಲ್ಲಿ, ಕಟ್ಟಡ ಕಾಮಗಾರಿ ಪ್ರಗತಿ ಆಧಾರದ ಮೇಲೆ 2ನೇ ಕಂತಿನಲ್ಲಿ 60,000 ಮತ್ತು 3ನೇ ಕಂತಿನಲ್ಲಿ 30,000 ರೂ ಸೇರಿ ಒಟ್ಟು 1,20,000 ರೂ. ಹಣ ಬಿಡುಗಡೆ ಆಗುತ್ತದೆ. ಹಣ ನೇರವಾಗಿ ಆಯ್ದ ಲಾನುಭವಿಗಳ ಖಾತೆಗೆ ಡಿಬಿಟಿ-ನೇರ ವರ್ಗಾವಣೆ ಮುಖಾಂತರ ಜಮೆ ಆಗುತ್ತದೆ. ಹೀಗಾಗಿ ಮಂಜೂರಾತಿ ಬಳಿಕ ಮೊದಲ ಕಂತಿನ ಹಣ ಬ್ಯಾಾಂಕ ಖಾತೆಗೆ ಬಂದ ಕೂಡಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿ ಎಂದು ಗ್ರಾಾಮಸ್ಥರಿಗೆ ಕಿವಿ ಮಾತು ಹೇಳಿದರು.
ಮನೆ ಹಂಚಿಕೆಯಲ್ಲಿ ಹಾಗೂ ಕಂತಿನ ಹಣ ಬಿಡುಗಡೆ ಮಾಡುವುದರಲ್ಲಿ ಯಾವುದೇ ತರಹದ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದೆಂದು ವಿನಂತಿಸಿದರು. ಈ ಯೋಜನೆಯ ಸದುಪಯೋಗ ಪಡೆದು ಮನೆ ಕಟ್ಟಿಿಸಿಕೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಾಮ ಪಂಚಾಯಿತಿ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಹರಬಾಜಿ ಶಿಂಧೆ, ಸದಸ್ಯರಾದ ಇಸ್ಮಾಾಯಿಲ್ ಸೈಯದ್, ಶೋಭಾ ವಿಶ್ವನಾಥ್, ರಾಜಕುರ್ಮಾ ಧರಣೆ, ಗ್ರಾಾಮ ಪಂಚಾಯಿತಿ ಅಭಿವೃದ್ಧಿಿ ಅಧಿಕಾರಿ ರಂಗಾಚಾರಿ ನರೋಜ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿಿತರಿದ್ದರು. ಗೋರಕ್ ನಾಥ್ ಸಾವಳೆ ನಿರೂಪಿಸಿದರು. ಕರ ವಸೂಲಿಗಾರ ರಾಹುಲ್ ಪಿಚರಟೆ ವಂದಿಸಿದರು.
ಮದನೂರು ಪಂಚಾಯತ್ನಿಂದ ವಸತಿ ಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ

