ಸುದ್ದಿಮೂಲ ವಾರ್ತೆ ಯಾದಗಿರಿ, ಜ.01:
ರಸ್ತೆೆ ಸುರಕ್ಷತಾ ನಿಯಮಗಳ ಪಾಲಿಸುವ ಮೂಲಕ ವಾಹನಗಳನ್ನು ಚಲಾಯಿಸಿ ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಾ.ಮರಿಯಪ್ಪ ಹೇಳಿದರು.
ನಗರದ ಪ್ರಾಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಗುರುವಾರ, ಸಾರಿಗೆ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ವತಿಯಿಂದ 37ನೇ ರಾಷ್ಟ್ರೀಯ ರಸ್ತೆೆ ಸುರಕ್ಷತಾ ಜಾಗೃತಿ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಅತಿ ವೇಗದ ಚಾಲನೆ,ನಿರ್ಲಕ್ಷ್ಯದ ಚಾಲನೆ, ಮೊಬೈಲ್ ಬಳಕೆ ಮಾಡುತ್ತ ಚಾಲನೆ ಮಾಡುವುದು ಮತ್ತು ಹೆಲ್ಮೆೆಟ್ ಧರಿಸದೇ ವಾಹನಗಳನ್ನು ನಡೆಸುವವರ ಸಂಖ್ಯೆೆ ಅಧಿಕವಾಗಿದೆ. ಆದ್ದರಿಂದಲೇ ಹೆಚ್ಚಿಿನ ಅಪಘಾತಗಳು ಆಗುತ್ತಿಿವೆ ಎಂದು ಅವರು ಹೇಳಿದರು.
ವಾಹನಗಳ ಸವಾರರು ಒಂದು ಮಾತು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮಗೂ ಕುಟುಂಬವಿದೆ. ತಂದೆ,ತಾಯಿ, ಹೆಂಡತಿ ಮತ್ತು ಮಕ್ಕಳು ಇದ್ದಾರೆ. ಹೊರಗೆ ಹೋದ ನಮ್ಮವರು ಸುರಕ್ಷಿತವಾಗಿ ಮನೆಗೆ ಬಂದು ಮುಟ್ಟಲಿ ಎಂದು ಹಂಬಲಿಸುತ್ತಾಾರೆ. ಕಾರಣ, ನೀವು ಆ ಕುಟುಂಬದ ಆಧಾರಸ್ಥಂಬವಾಗಿರುತ್ತೀರಿ. ಅಡ್ಡಾಾದಿಡ್ಡಿಿ ವಾಹನ ಚಲಾಯಿಸಿ ರಸ್ತೆೆ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಅನಾಥವಾಗುತ್ತದೆ ಎಂದು ನ್ಯಾಾಯಾಧೀಶ ಮರಿಯಪ್ಪ ಬಹುಮಾರ್ಮಿಕವಾಗಿ ಹೇಳಿದರು.
ರಾಜ್ಯದಲ್ಲಿ ಪ್ರತಿವರ್ಷವೂ ಸುಮಾರು 12 ಸಾವಿರ ಜನರು ರಸ್ತೆೆ ಅಪಘಾತದಲ್ಲಿ ಸತ್ತರೆ, ಕೈ- ಕಾಲು, ದೇಹದ ವಿವಿಧ ಅಂಗಗಳನ್ನು ಕಳೆದುಕೊಳ್ಳುವವರ ಲೆಕ್ಕವೇ ಇಲ್ಲ ಎಂದು ಅವರು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಸಂಚಾರಿ ನಿಯಮಗಳ ಉಲ್ಲಂಘಿಸಿ ವಾಹನಗಳನ್ನು ಚಲಾಯಿಸುವವರು ಅಧಿಕವಾಗಿ ಕಾಣಸಿಗುತ್ತಾಾರೆ. ಇದು ತಪ್ಪಿಿಸುವ ಉದ್ದೇಶದಿಂದಲೇ ಈ ಸಪ್ತಾಾಹ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದರು. 18 ವರ್ಷಕ್ಕಿಿಂತ ಕಡಿಮೆ ಇರುವವರು ಸಹ ವಾಹನಗಳನ್ನು ಚಲಾಯಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿಿದ್ದಾರೆಂದರು.
ಪ್ರಾಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ ಕುಮಾರ ಎಸ್ ಎಸ್ ಮಾತನಾಡಿ, ಸಂಚಾರಿ ನಿಮಯಗಳನ್ನು ಕಟ್ಟುನಿಟ್ಟಾಾಗಿ ಪಾಲಿಸುವ ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗುತ್ತಿಿದೆ. ಕಾರಣ, ಸಾರ್ವಜನಿಕರ ಸಹಕಾರ ಇದಕ್ಕೆೆ ಅತಿಮುಖ್ಯವಾಗಿದೆ ಎಂದರು.
ಲೋಕೊಪಯೋಗಿ ಇಲಾಖೆ ಅಧಿಕಾರಿ ಡಿಡಿಪಿಯು, ಅಧಿಕಾರಿ, ಎನ್ ಎಚ್ ಐ ಅಧಿಕಾರಿ, ಪೊಲೀಸ್ ಅಧಿಕಾರಿ, ಆಟೋರಿಕ್ಷಾ ಸಂಘ, ಸೇರಿದಂತೆ ಸಾರಿಗೆ ಇಲಾಖೆ ಅಧೀಕ್ಷಕ ಮೌನೇಶ ಮತ್ತು ಆನಂದ, ಸಿಬ್ಬಂದಿಗಳಾದ ಶಿವಕುಮಾರ ನವಲೆ, ಅವಿನಾಷ್, ಆನಂದ, ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ಯಲ್ಲಪ್ಪ ದೊಡ್ಮನಿ, ಜುರ್ಬೇ ಅಹ್ಮದ್ ಇದ್ದರು.
‘ನಿಮ್ಮ ತಪ್ಪಿನಿಂದಾಗಿ ಕುಟುಂಬ ಅನಾಥ ಮಾಡಬೇಡಿ’

