ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.11:
ರಾಜ್ಯದ ತೊಗರಿ ಬೆಳೆಗಾರರಿಗೆ ತಕ್ಷಣ ಸ್ಪಂದನೆ ನೀಡಿದ ಕೇಂದ್ರ ಸರ್ಕಾರವು ಬೆಂಬಲ ಯೋಜನೆಯಡಿ ರೈತರಿಂದ 9.67 ಲಕ್ಷ ಮೆಟ್ರಿಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿರುವುದಕ್ಕೆೆ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸ್ವಾಾಗತಿಸಿದ್ದಾರೆ.
ರಾಜ್ಯದಲ್ಲಿ ಸಂಕಷ್ಟಕ್ಕೆೆ ಸಿಲುಕಿರುವ ತೊಗರಿ ಬೆಳೆಗಾರರಿಗೆ ಕೂಡಲೇ ನೆರವಾಗುವಂತೆ 2025 – 26 ಕ್ಕೆೆ ತೊಗರಿ ಬೆಳೆಗೆ ಘೋಷಿಸಲಾದ ಎಂಎಸ್ಪಿಿ ಕ್ವಿಿಂಟಾಲ್ ಗೆ ರೂ.8,000 ನಿಗದಿಪಡಿಸಲಾಗಿದೆ. ಈ ದರದಲ್ಲಿ ತೊಗರಿ ಖರೀದಿಗೆ ನಿರ್ಧರಿಸುವಂತೆ ಡಿಸೆಂಬರ್ 10 ರಂದು ಕೇಂದ್ರ ಸರ್ಕಾರವು ರಾಜ್ಯಕ್ಕೆೆ ಆದೇಶ ನೀಡಿರುವುದಕ್ಕೆೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಲ್ಹಾಾದ ಜೋಶಿ ಅವರಿಗೆ ಜಾಧವ್ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಆದೇಶದಿಂದ 2025 _ 26 ನೇ ಸಾಲಿನಲ್ಲಿ 16.80 ಲಕ್ಷ ಹೆರ್ಕ್ಟ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ . ಸುಮಾರು 13 ಲಕ್ಷ ಮೆಟ್ರಿಿಕ್ ಟನ್ ತೊಗರಿ ಉತ್ಪಾಾದನೆಯ ಅಂದಾಜು ಮಾಡಲಾಗಿದ್ದು ಕೇಂದ್ರ ಸರ್ಕಾರದ ಈ ಆದೇಶ ರೈತರಿಗೆ ಹೊಸ ವರ್ಷದ ಆರಂಭದಲ್ಲಿ ನೀಡಿದ ಶುಭ ಸುದ್ದಿ ಎಂದು ಹೇಳಿದರು. ಬೀದರ್ ಕಲಬುರಗಿ ,ರಾಯಚೂರು ,ವಿಜಯಪುರ ,ಬಳ್ಳಾಾರಿ ,ಕೊಪ್ಪಳ, ಬಾಗಲಕೋಟೆ , ಬೆಳಗಾವಿ, ವಿಜಯನಗರ, ಚಿತ್ರದುರ್ಗ, ಕೋಲಾರ ಚಿಕ್ಕಬಳ್ಳಾಾಪುರ ಮತ್ತು ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಕೃಷಿಕರು ಮುಖ್ಯವಾಗಿ ತೊಗರಿ ಬೆಳೆಯುತ್ತಿಿದ್ದು ಇದೀಗ ಬೆಂಬಲ ಬೆಲೆಯ ಖರೀದಿಗೆ ಕೇಂದ್ರ ಸರ್ಕಾರವು ಆದೇಶ ನೀಡಿರುವುದರಿಂದ ರೈತರ ಪಾಲಿಗೆ ವರದಾನವಾಗಿದೆ.
ಕೇಂದ್ರ ಸರ್ಕಾರದ ಆದೇಶದಂತೆ ಖರೀದಿ ಪ್ರಾಾರಂಭದ ದಿನದಿಂದ ಮುಂದಿನ ಮೂರು ತಿಂಗಳುಗಳ ಕಾಲ ಒಟ್ಟು 9.67 ಲಕ್ಷ ಮೆಟ್ರಿಿಕ್ ಟನ್ ತೊಗರಿ ಖರೀದಿಯಾಗಲಿದೆ. ಕೇಂದ್ರ ಸರಕಾರವು ರಾಜ್ಯದ ತೊಗರಿ ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿದೆ ಎಂಬುದಕ್ಕೆೆ ಈ ನೂತನ ಆದೇಶ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆೆಸ್ ಸರ್ಕಾರವು ಕೃಷಿಕರನ್ನು ತೀವ್ರವಾಗಿ ಕಡೆಗಣಿಸುತ್ತಿಿದೆ ಮಾತ್ರವಲ್ಲ ಅತಿವೃಷ್ಟಿಿ ಪರಿಹಾರ ವಿತರಿಸುವಲ್ಲಿ ಸಂಪೂರ್ಣವಾಗಿ ವಿಲವಾಗಿದೆ. ರೈತರ ಬಗ್ಗೆೆ ಮೊಸಳೆ ಕಣ್ಣೀರು ಸುರಿಸುವ ಈ ಸರಕಾರಕ್ಕೆೆ ರಾಜ್ಯದ ರೈತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಸ್ಯೆೆಗಳಿಗೆ ಹಾಗೂ ರೈತರ ನೋವುಗಳಿಗೆ ಸ್ಪಂದಿಸುವ ಬದಲಾಗಿ ಕುರ್ಚಿಕಿತ್ತಾಾಟದ ಕುರಿತು ಹೆಚ್ಚು ಮಹತ್ವ ನೀಡಿ ಸುದ್ದಿ ಆಗುತ್ತಿಿರುವುದು ದುರದೃಷ್ಟಕರ ಎಂದು ಜಾಧವ್ ಟೀಕಿಸಿದ್ದಾರೆ.

