ಸುದ್ದಿಮೂಲ ವಾರ್ತೆ ಸಿಂಧನೂರು, ೆ.11:
ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ ಹಾಗೂ ದಲಿತ ಸಾಹಿತ್ಯ ಪರಿಷತ್ ಯುವ ಘಟಕದಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರೇೇಕ್ಷಕರ ಗಮನ ಸೆಳೆಯಿತು. ಬಾಗಲಕೋಟೆ ಸಂಗಮ ಕಲಾ ತಂಡ ಹಾಗೂ ಸಾಂಸ್ಕೃತಿಕ ಸಂಘದ ಕಲಾವಿದರು ನಾಟಕ ಪ್ರದರ್ಶಿಸಿದರು.
ಡಾ.ಎಚ್.ಟಿ.ಪೋತೆ ಅವರ ರಮಾಬಾಯಿ ಕಾದಂಬರಿ ಆಧರಿಸಿ ಈ ನಾಟಕವನ್ನು ಬಾಗಲಕೋಟೆ ಸಂಗಮ ಕಲಾ ತಂಡ ಹಾಗೂ ಸಾಂಸ್ಕೃತಿಕ ಸಂಘದ ಕಲಾವಿದರು ನಾಟಕ ಪ್ರದರ್ಶಿಸಿದರು. ರಮಾಬಾಯಿ ಪಾತ್ರದಲ್ಲಿ ಅಭಿನಯಿಸಿದ ಮಲ್ಲಿಕಾ ಹುಬ್ಬಳ್ಳಿಿ ಅವರು ಪಾತ್ರಕ್ಕೆೆ ಜೀವ ತುಂಬಿದರು. ಅಂಬೇಡ್ಕರ್ ಅವರು ಅಮೆರಿಕಾದಲ್ಲಿದ್ದಾಾಗ ಅವರ ಮಕ್ಕಳು ಮೃತಪಟ್ಟರೂ ಸಹ ಅವರ ವಿದ್ಯಾಾಭ್ಯಾಾಸಕ್ಕೆೆ ತೊಂದರೆ ಆಗಬಾರದು ಎಂದು ಅವರಿಗೆ ಹೇಳದಂತೆ ತಾವೇ ದುಃಖಿಸಿದ ಪ್ರಸಂಗ, ಅಂಬೇಡ್ಕರ್ ಪಾತ್ರಧಾರಿಯ ತೊಡೆಯ ಮೇಲೆಯೇ ರಮಾಬಾಯಿ ಕೊನೆಯುಸಿರೆಳೆಯುವ ಅವರ ಭಾವುಕ ಸಂಭಾಷಣೆಯ ದೃಶ್ಯ ನೋಡಿ ವಿದ್ಯಾಾರ್ಥಿನಿಯರು ಕಣ್ಣೀರಾದರು.
ಕಲಾತಂಡದ ಮುಖ್ಯಸ್ಥ ಶ್ರೀಕಾಂತ ನವಲಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿ ಗಮನ ಸೆಳೆದರು. ರಾಮ್ಜಿ ಸಕ್ಬಾಾಲ್ ಪಾತ್ರದಲ್ಲಿ ಕುಶಾಲಾ, ಜ್ಯೋೋತಿಬಾ ುಲೆ ಪಾತ್ರದಲ್ಲಿ ಮೋಹನ್ ಕಲಬುರ್ಗಿ, ಮೀರಾಬಾಯಿ ಪಾತ್ರದಲ್ಲಿ ಜ್ಯೋೋತಿ ಧಾರವಾಡ ಅವರು ಕಾಣಿಸಿಕೊಂಡರು.
ದಲಿತ ಸಾಹಿತ್ಯ ಪರಿಷತ್ತಿಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಂಗಕರ್ಮಿ ಲಕ್ಷ್ಮಣ ಮಂಡಲಗೇರಾ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಾಲಯದ ಸ್ಥಾಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಪ್ರೊೊ.ಪಿ.ಕಣ್ಣನ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಾಚಾರ್ಯ ಮಹಾಂತಪ್ಪ ಕೊಡಗಲಿ, ಹಿಂದುಳಿದ ವರ್ಗಗಳ ಕಲ್ಯಾಾಣ ಅಧಿಕಾರಿ ಲಿಂಗಪ್ಪ ಅಂಗಡಿ, ದಲಿತ ಸಾಹಿತ್ಯ ಪರಿಷತ್ತಿಿನ ಗೌರವ ಸಲಹೆಗಾರ ಮಂಜುನಾಥ ಗಾಂಧಿನಗರ, ಗಾಂಧಿನರ ಪಂಚಾಯತ್ ಅಭಿವೃದ್ಧಿಿ ಅಧಿಕಾರಿ ಹನ್ೀ, ದಲಿತ ಸಾಹಿತ್ಯ ಪರಿಷತ್ತಿಿನ ಯುವ ಘಟಕದ ಅಧ್ಯಕ್ಷ ತಿಮ್ಮಪ್ಪ ಕಲಮಂಗಿ, ಸಾಹಿತ್ಯ ಪರಿಷತ್ತಿಿನ ನಿರ್ದೇಶಕರಾದ ಮದಗಪ್ಪ ಭಂಡಾರಿ, ವೀರೇಶ್ ನಾಯಕ ಉಪಸ್ಥಿಿತರಿದ್ದರು.
ದಲಿತ ಸಾಹಿತ್ಯ ಪರಿಷತ್ತಿಿನ ಉಪಾಧ್ಯಕ್ಷ ಡಾ.ಅರುಣ್ ಕುಮಾರ್ ಭೇರ್ಗಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಭೇರ್ಗಿ ನಿರೂಪಿಸಿದರು.
ದಲಿತ ಸಾಹಿತ್ಯ ಪರಿಷತ್ನಿಂದ ನಾಟಕ ಆಯೋಜನೆ ಮಹಿಳಾ ಕಾಲೇಜಿನಲ್ಲಿ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ

