ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.11:
ಮಾನವ ಹಕ್ಕುಗಳನ್ನು ಕಾಪಾಡಲು ಶಿಕ್ಷಣವೇ ಶಕ್ತಿಿಯುತ ಆಯುಧ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎನ್. ಸುರೇಶ್ ಅವರು ತಿಳಿಸಿದ್ದಾಾರೆ.
ಶ್ರೀ ವಾಸವಿ ವಿದ್ಯಾಾಲಯದಲ್ಲಿ ಬುಧವಾರ ನಡೆದ ‘ಮಾನವ ಹಕ್ಕುಗಳ ದಿನ’ದ ಜಾಗೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾಾರ್ಥಿಗಳು ಸಂವಿಧಾನಬದ್ಧವಾದ ತಮ್ಮ ಹಕ್ಕುಗಳ ಬಗ್ಗೆೆ ಜಾಗೃತರಾಗಬೇಕು. ಅಲ್ಲದೇ, ಇತರರ ಹಕ್ಕುಗಳನ್ನೂ ಗೌರವಿಸಿ ಶಾಂತಿ – ನೆಮ್ಮದಿ, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆೆ ಬದ್ಧರಾಗಬೇಕು ಎಂದರು.
ವಿದ್ಯಾಾರ್ಥಿನಿ ಎ.ಸಿ. ಸಿಂಚನಾ ಅವರು ‘ಮಾನವ ಹಕ್ಕುಗಳ ದಿನದ ಮಹತ್ವ’ವನ್ನು ವಿವರಿಸಿ, ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಗೌರವ, ಸ್ವಾಾತಂತ್ರ್ಯ ಮತ್ತು ಸುರಕ್ಷಿತ ಜೀವನ ನೀಡುತ್ತವೆ. ಮೂಲಭೂತ ಹಕ್ಕುಗಳು ಮತ್ತು ಈ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ತಿಳಿಸುತ್ತವೆ ಎಂದರು.
ಕುಮಾರಿ ಹರಿಣಿ ಅವರು ‘ಮಾನವ ಹಕ್ಕುಗಳ ದಿನದ ಮಹತ್ವ’ ಸಾರುವ ನೃತ್ಯ ಪ್ರದರ್ಶಿಸಿ ವಿದ್ಯಾಾರ್ಥಿಗಳ ಮೆಚ್ಚುಗೆ ಪಡೆದರು. ಶಾಲಾ ಮುಖ್ಯೋೋಪಾಧ್ಯಯರಾದ ಯು. ವೀರೇಶ್ ಅವರು ಮಾನವ ಹಕ್ಕುಗಳ ಪ್ರತಿಜ್ಞಾಾ ವಿಧಿಯನ್ನು ಬೋಧಿಸಿದರು.
ಮಾನವ ಹಕ್ಕುಗಳ ರಕ್ಷಣೆಗೆ ಶಿಕ್ಷಣವೇ ಆಯುಧ – ಪಿ.ಎನ್. ಸುರೇಶ್

