ಸುದ್ದಿಮೂಲ ವಾರ್ತೆ ತೆಕ್ಕಲಕೋಟೆ, ೆ.06:
ಸಮೀಪದ ಹೆರಕಲ್ಲು ಗ್ರಾಾಮದ ತುಂಗಭದ್ರಾಾ ನದಿಯ ನಡುಗಡ್ಡೆೆಯಲ್ಲಿ ಇರುವ ಮುಕ್ಕುಂದೆ ಗಡ್ಡೆೆ ಖಾದರ್ ಬಾಷಾ ಖಾದ್ರಿಿ ಅವರ 395ನೇ ವರ್ಷದ ಉರುಸುನಲ್ಲಿ ಪಾಲ್ಗೊೊಳ್ಳಲು ಆಗಮಿಸಿದ್ದ 20 ಭಕ್ತರಿದ್ದ ತೆಪ್ಪ ಮುಳುಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾಾರೆ.
ದಡದ ಸಮೀಪದಲ್ಲೇ ತೆಪ್ಪ ಮುಗುಚಿಬಿದ್ದ ಕಾರಣ ಪ್ರಾಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾಾರೆ. ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾಾರಿ ಜಿಲ್ಲೆೆಗಳಲ್ಲದೆ ನೆರೆಯ ಆಂಧ್ರ ಪ್ರದೇಶದಿಂದಲೂ ಭಕ್ತರು ಉರುಸು ಆಚರಿಸಲು ಇಲ್ಲಿಗೆ ಬರುತ್ತಾಾರೆ. ಸಿರುಗುಪ್ಪ, ಕಂಪ್ಲಿಿ ಹಾಗೂ ತೆಕ್ಕಲಕೋಟೆ ಮಾರ್ಗವಾಗಿ ಉರುಸಿಗೆ ತೆರಳುವ ಭಕ್ತರಿಗೆ ಹೆರಕಲ್ಲು ಗ್ರಾಾಮದ ಬಳಿ ಇರುವ ಹರಿಗೋಲು ಘಾಟ್ ಮಾತ್ರ ಏಕೈಕ ಮಾರ್ಗ. ಅಲ್ಲಿ, ಈ ಘಟನೆ ನಡೆದಿದೆ.
ಬುಧವಾರ ಗಂಧ, ಗುರುವಾರ ಉರುಸು ಹಾಗೂ ಶುಕ್ರವಾರ ಜಿಯಾರತ್ ಯಶಸ್ವಿಿಯಾಗಿ ನಡೆದವು.

