ಸುದ್ದಿಮೂಲ ವಾರ್ತೆ ಅರಕೇರಾ, ಜ.21:
ದೇವದುರ್ಗ ಪ್ರಾಾದೇಶಿಕ ಅರಣ್ಯ ವಲಯ ವ್ಯಾಾಪ್ತಿಿಯ ಕಾರಿಗಳು ಪಟ್ಟಣದಲ್ಲಿ ಅನಧಿಕೃತವಾಗಿ ಮರ ಕತ್ತರಿಸುವ ಕಾರ್ಖಾನೆಗಳ (ಸಾ-ಮಿಲ್) ಮೇಲೆ ಅರಣ್ಯಾಾಧಿಕಾರಿಗಳು ದಾಳಿ ನಡೆಸಿ. ಚಕ್ರ ಹಾಗೂ ವಿದ್ಯುತ್ ಮೋಟಾರ್ಗಳನ್ನು ಜಪ್ತಿಿ ಮಾಡಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾಾರೆ. ವಲಯ ಅರಣ್ಯಾಾಧಿಕಾರಿ ಮುಹಮ್ಮದ್ ಅಲಿ ಉದ್ದೀನ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ಹಿಂದೆ 2024ರಲ್ಲಿ ಇದೇ ಸಾ-ಮಿಲ್ಗಳ ಮೇಲೆ ಅರಣ್ಯ ಇಲಾಖೆಯ ತಂಡ ದಾಳಿ ನಡೆಸಿ, ಅವುಗಳಿಗೆ ಬೀಗ ಹಾಕಿ ಮುಚ್ಚಿಿಸಿ ಮೊಕದ್ದಮೆ ದಾಖಲಿಸಿತ್ತು. ಆದರೆ, ಮಾಲೀಕರು ಅರಣ್ಯ ಇಲಾಖೆಯ ಸೀಲ್ ಹಾಗೂ ಬೀಗ ಮುರಿದು ಕಾನೂನು ಬಾಹಿರವಾಗಿ ಪುನಃ ಮರ ಕತ್ತರಿಸುವ ಕಾರ್ಯ ಆರಂಭಿಸಿದ್ದರು.
ಇಲಾಖೆಯ ಆದೇಶ ಉಲ್ಲಂಘಿಸಿ ಸಾ-ಮಿಲ್ ನಡೆಸುತ್ತಿಿದ್ದ 7 ಜನರ ವಿರುದ್ಧ ಇದೀಗ ಹೊಸದಾಗಿ ಅರಣ್ಯ ಕಾಯ್ದೆೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಮುಂದೆ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೆ, ಯಂತ್ರಗಳನ್ನು ಜಪ್ತಿಿ ಮಾಡುವುದಲ್ಲದೆ, ಜೆಸಿಬಿ ಸಹಾಯದಿಂದ ೌಂಡೇಶನ್ ಸಮೇತ ಸಾ-ಮಿಲ್ಗಳನ್ನು ಕಿತ್ತುಹಾಕಿ ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹನುಮೇಶಯಾದವ್, ಹನುಮಂತ ಪವಾಡಪ್ಪ ಗಸ್ತು ಅರಣ್ಯ ಪಾಲಕರಾದ ಸಗರಪ್ಪ, ಶರಣಬಸವರಾಜ್, ಬಸವರಾಜ್, ಭರಮಗೌಡ, ಈರೇಶ್, ಸಂಗಮ ಮತ್ತಿಿತರರು ಇದ್ದರು.
ಅನಧಿಕೃತ ಸಾ-ಮಿಲ್ಗಳ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

