ಸುದ್ದಿಮೂಲ ವಾರ್ತೆ ಕೆಂಗೇರಿ, ಜ.15:
ಡಾ.ಅಂಬೇಡ್ಕರ್ ತಾಂತ್ರಿಿಕ ಮಹಾವಿದ್ಯಾಾಲಯ ಆವರಣದಲ್ಲಿ ಬುಧವಾರ ಗೌತಮ ಬುದ್ಧನ ಏಕಶಿಲಾ ಮೂರ್ತಿ ಅನಾವರಣಗೊಂಡಿತು.
ಬುದ್ಧ ಬೋಧನೆಗಳ ಪಠಣದೊಂದಿಗೆ ಥಾಯ್ ಲ್ಯಾಾಂಡ್ ಮೂಲದ ಬೌದ್ಧ ಭಿಕ್ಷು ಅಜಾನ್ ಜಯಸಾ ರೋ ಮಹಾತೇರ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೂರಾರು ಬೌದ್ಧ ಭಿಕ್ಷುಗಳು ಸಂಭ್ರಮಕ್ಕೆೆ ಸಾಕ್ಷಿಯಾದರು.
ಇದೇ ವೇಳೆ ಮಾತನಾಡಿದ ಅಜಾನ್ ಜಯಸಾ ರೋ ಮಹಾತೇರ ಅವರು, ಸ್ಥಾಾಪಿತ ಸಂಪ್ರದಾಯ ಹಾಗೂ ಆಚರಣೆಗಳನ್ನು ಪಾಲನೆ ಮಾಡುವ ಧರ್ಮಗಳ ನಡುವೆ ನೈಜ ಕರ್ಮಸಿದ್ದಾಂತ ಪ್ರತಿಪಾದನೆಗೆ ಒತ್ತು ನೀಡಿದ ಬೌದ್ಧ ಧರ್ಮ, ಜಾಗತಿಕ ಮತವಾಗಿ ರೂಪುಗೊಂಡಿದೆ ಎಂದು ಹೇಳಿದರು.
ನರಮೇಧ ನಡೆಸಿ, ಹಿಂಸೆಯಿಂದ, ಹೇರಿಕೆಯಿಂದ ಮತವನ್ನು ಸದೃಢಗೊಳಿಸಲು, ವಿಸ್ತರಿಸಲು ಸಾಧ್ಯವಿಲ್ಲ. ಅಂತಹ ನಡೆ ದೀರ್ಘ ಕಾಲದವರೆಗೆ ಲ ನೀಡುವುದಿಲ್ಲ. ಶಾಂತಿ ಹಾಗೂ ಮಾನವೀಯ ಮೌಲ್ಯ ಗುಣಗಳು ಎಲ್ಲಾ ವರ್ಗದವರನ್ನು ಆಕರ್ಷಸುತ್ತದೆ ಎಂದರು. ಸತ್ಕರ್ಮಗಳು ಸತ್ಫಲಗಳನ್ನೇ ನೀಡುತ್ತದೆ. ನಮ್ಮ ಭವಿಷ್ಯಕ್ಕೆೆ ನಾವೇ ಜವಾಬ್ದಾಾರರು ಎಂದು ತಿಳಿಸಿದರು.
ಬೌದ್ಧ ಧರ್ಮವು ದೈವದ ಕಲ್ಪನೆಯನ್ನು ಪುಷ್ಟೀಕರಿಸುವುದಿಲ್ಲ. ದೇವರ ಬಳಿಯ ಕೋರಿಕೆ ಹಾಗೂ ಬೇಡಿಕೆ ತಿರಸ್ಕಾಾರವಾದರೆ ನೋವು ಸೃಷ್ಟಿಿಯಾಗಿ ದೇಹ ಹಾಗೂ ಮನಸ್ಸು ಬಾಧಿತವಾಗುವ ಸಂಭವವಿದೆ ಎಂದರು. ನಿರೀಕ್ಷೆ ರಹಿತ ಕೊಡುಗೆಗಳು ನಮ್ಮ ಸಮಾಜ ಹಾಗೂ ನೆರೆ ಹೊರೆಯವರಲ್ಲಿ ಸಹಿಷ್ಣುತೆ ಹಾಗೂ ಸಹ ಬಾಳ್ವೆೆಯನ್ನು ತರುತ್ತದೆ ಎಂದರು.
ಪಿವಿಪಿ ಟ್ರಸ್ಟ್ ಕಾರ್ಯದರ್ಶಿ ಡಾ.ಎಂ.ಮಹದೇವ್ ಮಾತನಾಡಿ, 5 ವರ್ಷಗಳ ಸತತ ಪರಿಶ್ರಮದ ಲವಾಗಿ ಬುದ್ಧ ಪ್ರತಿಮೆ ಅನಾವರಣಗೊಂಡಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಇದೇ ವೇಳೆ ಪ್ರತಿಮೆ ರಚನೆಯ ರೂವಾರಿಗಳಾದ ರಾಮು ಎಸ್ ನಾಯಕ್ ಹಾಗೂ ಡಾ. ಚಂದ್ರಶೇಖರ ಅವರನ್ನು ಸನ್ಮಾಾನಿಸಲಾಯಿತು.
ಪಿವಿಪಿ ಟ್ರ್ಟ್ ಅಧ್ಯಕ್ಷ ಎಸ್.ಮರಿಸ್ವಾಾಮಿ, ಕಾರ್ಯದರ್ಶಿ ಡಾ.ಎಂ.ಮಹದೇವ್, ಪಿವಿಪಿ ಟ್ರಸ್ಟಿಿ ಮತ್ತು ಶಾಸಕ ಎ.ಆರ್.ಕೃಷ್ಣಮೂರ್ತಿ, ಟ್ರಸ್ಟಿಿ ಶಿವಮಲ್ಲು ಮತ್ತಿಿತರರು ಇದ್ದರು.
ಗೌತಮ ಬುದ್ಧನ ಏಕಶಿಲಾ ಮೂರ್ತಿ ಅನಾವರಣ

