ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆಯನ್ನು ಕೇಂದ್ರ ಸರ್ಕಾರ ಆತುರವಾಗಿ ಬದಲಾಯಿಸಿದೆ. ಇದನ್ನು ಕಾಂಗ್ರೆೆಸ್ ಯಾವುದೇ ಕಾರಣಕ್ಕೂ ಒಪ್ಪುುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ತಿಪ್ಪಣ್ಣ ಕಮಕನೂರ ಹೇಳಿದರು.
ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಚರ್ಚೆ ವೇಳೆ ಮಾತನಾಡಿದ ಕಮಕನೂರು ಅವರು ಮನರೇಗಾದಲ್ಲಿ ಗ್ರಾಾಮ ಪಂಚಾಯಿತಿ ಮಟ್ಟದಲ್ಲಿ ನಿರ್ಣಯ ಮಾಡಿ ಕೆಲಸ ಒದಗಿಸಲಾಗುತ್ತಿಿತ್ತು. ಆದರೆ ಈಗ ಈ ಹಕ್ಕನ್ನು ಕೇಂದ್ರ ಸರ್ಕಾರ ಕಸಿದು ದೆಹಲಿಯಿಂದಲೇ ಯೋಜನೆಯನ್ನು ನಿರ್ವಹಿಸಲಿದ್ದಾರೆ. ಇದು ಗ್ರಾಾಮ ಪಂಚಾಯಿತಿಗಳ ಸ್ವಾಾಯತ್ತತೆಯನ್ನು ನಾಶಪಡಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ನರೇಗಾ ಯೋಜನೆ ಕೇವಲ ಕಾರ್ಯಕ್ರಮವಲ್ಲ ಹಸಿವಿನ ವಿರುದ್ಧ ಕೈಗೊಂಡ ಪ್ರತಿಜ್ಞೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಮ್ ಜಿ ಕಾಯ್ದೆೆಯಲ್ಲಿ ಕೂಲಿ ಹಕ್ಕಲ್ಲ. ಕೂಲಿಯನ್ನು ಕೊಡಬಹುದು ಅಥವಾ ನಿರಾಕರಿಸಬಹುದು. ಇದಕ್ಕೆೆ ರಾಜ್ಯ ಸರ್ಕಾರ ಶೇ. 40ರಷ್ಟು ಹಣವನ್ನು ಭರಿಸಬೇಕು. ಅಲ್ಲದೆ ಕೇಂದ್ರ ಸರ್ಕಾರ ಶೇ.60ರಷ್ಟು ಹಣವನ್ನು ನೀಡುವ ಬಗ್ಗೆೆ ಯಾವುದೇ ಖಾತ್ರಿಿ ಇಲ್ಲ ಎಂದು ಅವರು ಹೇಳಿದರು.
ನರೇಗಾದಲ್ಲಿ ಕಾರ್ಮಿಕರು ಯಾವಾಗ ಬೇಕಾದರೂ ಕೆಲಸವನ್ನು ಕೇಳುವ ಹಕ್ಕು ಇತ್ತು. ಈಗ ಹೊಸ ಕಾಯ್ದೆೆಯಲ್ಲಿ ಆ ಹಕ್ಕು ಇಲ್ಲ. ಕೇಂದ್ರ ಸರ್ಕಾರ ನೀಡಿದಾಗ ಕಾರ್ಮಿಕರು ಕೆಲಸ ಮಾಡಬೇಕು. ಇದರಿಂದ ಕೃಷಿ ಚಟುವಟಿಕೆಗಳಲ್ಲಿ ಸಮಸ್ಯೆೆ ಎದುರಾಗಲಿದೆ ಎಂದು ಅವರು ಕಾಯ್ದೆೆಯನ್ನು ವಿರೋಧಿಸಿದರು.
ವಲಸೆ ಹೆಚ್ಚಳ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಮ್ ಜಿ ಕಾಯ್ದೆೆಯಿಂದ ಗ್ರಾಾಮೀಣ ಪ್ರದೇಶದಲ್ಲಿ ನಿಗದಿತ ಕೆಲಸ ದೊರೆಯದೆ ಕಾರ್ಮಿಕರು ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಬರುವುದು ಹೆಚ್ಚಳವಾಗಲಿದೆ. ಆದರೆ ನರೇಗಾ ಯೋಜನೆಯನ್ನು ವಲಸೆ ತಡೆಯುವುದನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿತ್ತು. ಈಗ ವಲಸೆ ಮತ್ತಷ್ಟು ಹೆಚ್ಚಲಿದ್ದು ನಗರ ಹಾಗೂ ಪಟ್ಟಣಗಳ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಾಗಲಿದೆ ಎಂದು ಅವರು ಆಕ್ರೋೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕಮಕನೂರ ವಿರೋಧ ರಾಮ್ ಜಿ ಕಾಯ್ದೆೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಹೆಚ್ಚಳವಾಗಲಿದೆ

