ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ನೂತನ ಅನುಭವ ಮಂಟಪದ ಕಾಮಗಾರಿಯು ಪ್ರಗತಿಯಲ್ಲಿದ್ದು, ಈವರೆಗೆ 375 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಹೇಳಿದರು.
ವಿಧಾನ ಪರಿಷತ್ನಲ್ಲಿ ಸದಸ್ಯ ಡಾ. ಎಂ. ಜಿ. ಮುಳೆ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಪರುಷಕಟ್ಟೆೆ ಸೇರಿದಂತೆ ನೂತನ ಅನುಭವ ಮಂಟಪ ನಿರ್ಮಾಣ ಯೋಜನೆಯ ಪರಿಷ್ಕೃತ ಮೊತ್ತ 742 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದ್ದು, ಇಲ್ಲಿಯವರಗೆ ನೂತನ ಅನುಭವ ಮಂಟಪದ ಕಾಮಗಾರಿಗೆ ರೂ.375 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನಿಡಿದರು.
ಶರಣರ ವಚನಗಳನ್ನು ಸಂಗ್ರಹಣೆ ಮಾಡುವ ಕೆಲಸ ಪೂರ್ಣಗೊಳಿಸಲಾಗಿದ್ದು, ಅವುಗಳನ್ನು ಧ್ವನಿ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ನೂತನ ಅನುಭವ ಮಂಟಪದ ಒಳಾಂಗಣದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಬಸವಕಲ್ಯಾಾಣ ಅಭಿವೃದ್ಧಿಿ ಮಂಡಳಿಯ ವತಿಯಿಂದ ಶರಣ ಶರಣೆಯರ ಒಟ್ಟು 29 ಸ್ಮಾಾರಕ/ತಾಣಗಳನ್ನು ಅಭಿವೃದ್ಧಿಿಗೊಳಿಸಿ ಸಂರಕ್ಷಣೆ ಮಾಡಲಾಗುತ್ತಿಿದೆ. ಈ ನಿಟ್ಟಿಿನಲ್ಲಿ 2005 ರಿಂದ ಇಲ್ಲಿಯವರೆಗೆ ಸುಮಾರು 17 ಸ್ಮಾಾರಕಗಳ ಅಭಿವೃದ್ಧಿಿ ಕೆಲಸಗಳನ್ನು ಕೈಗೆತ್ತಿಿಕೊಂಡು ಪೂರ್ಣಗೊಳಿಸಲಾಗಿರುತ್ತದೆ ಹಾಗೂ ಉಳಿದ ಸ್ಮಾಾರಕಗಳನ್ನು ಅನುದಾನದ ಲಭ್ಯತೆಯಂತೆ ಹಂತ-ಹಂತವಾಗಿ ಅಭಿವೃದ್ಧಿಿ ಪಡಿಸಲು ಕ್ರಮವಹಿಸಲಾಗುತ್ತಿಿದೆ.
ಬಸವಕಲ್ಯಾಾಣ ಅಭಿವೃದ್ಧಿಿ ಮಂಡಳಿ ಅಧಿನಿಯಮ 2005 ರನ್ವಯ ಬೀರ್ದ ಜಿಲ್ಲೆಯ ಬಸವಕಲ್ಯಾಾಣ ಪಟ್ಟಣದಲ್ಲಿನ ಮತ್ತು ಅದರ ಸುತ್ತಮುತ್ತಲಿನ ಪರಂಪರೆಯ ತಾಣಗಳನ್ನು ಅಂತರಾಷ್ಟ್ರೀಯ ಯಾತ್ರಾಾ ಸ್ಥಳವಾಗಿ ಸಾಂಸ್ಕೃತಿಕ ಮತ್ತು ಪ್ರವಾಸ ಕೇಂದ್ರವಾಗಿ ಅಭಿವೃದ್ಧಿಿಗೊಳಿಸಲು ಮತ್ತು ಅದನ್ನು ನಿರ್ವಹಿಸಲು ಸ್ಥಾಾಪಿತವಾದ ಮಂಡಳಿಯಾಗಿರುತ್ತದೆ.
ಬಸವಕಲ್ಯಾಾಣ ಅಭಿವೃದ್ಧಿಿ ಮಂಡಳಿ ವ್ಯಾಾಪ್ತಿಿಯಲ್ಲಿ ಒಳಪಡುವ ಚಾಲುಕ್ಯರ ಹಳೆಯ ಕೋಟೆಯಲ್ಲಿ ಕೋಟೆಯ ಇತಿಹಾಸವನ್ನು ಧ್ವನಿ-ಬೆಳಕು ಮತ್ತು ಲೇಸರ್ ಶೋ ಮೂಲಕ ಜನರಿಗೆ ತಿಳಿಸಲಾಗುತ್ತಿಿದೆ ಹಾಗೂ ಬಸವ ವನದ ಉದ್ಯಾಾನವನಕ್ಕೆೆ ತಡೆಗೋಡೆಯನ್ನು ನಿರ್ಮಿಸಲಾಗಿರುತ್ತದೆ. ಬಸವಕಲ್ಯಾಾಣ ಅಭಿವೃದ್ಧಿಿ ಮಂಡಳಿಗೆ 2025-26 ಸಾಲಿನ ಆಯವಯ್ಯದಲ್ಲಿನ ಅನುದಾನದಲ್ಲಿ ಬಸವ ತತ್ವ ಪ್ರಸಾರ ಹಾಗೂ ಸ್ಮಾಾರಕಗಳ ಅಭಿವೃದ್ಧಿಿ ಕೆಲಸ ಕಾರ್ಯಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿಿದೆ ಎಂದು ತಿಳಿಸಿದರು.

