ಸುದ್ದಿಮೂಲ ವಾರ್ತೆ ಮೈಸೂರು, ಅ.12:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಲಕಿ ಕೊಲೆ ಸೇರಿದಂತೆ ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಳವಾಗುತ್ತಿಿರುವ ಹಿನ್ನೆೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚರಗೊಂಡಿದೆ.
ಪೊಲೀಸ್ ರೌಡಿ ಪ್ರತಿಬಂಧಕ ದಳದಿಂದ ಮೈಸೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದೆ.
ಮೈಸೂರಿನ ಉದ್ಯಾಾನವನಗಳು, ಬಾರ್, ವೈನ್ ಸ್ಟೋೋರ್ಗಳು, ಟೀ ಅಂಗಡಿಗಳು, ಹೊಟೇಲ್ಗಳು, ಬೀದಿ ಬದಿ ಅಂಗಡಿಗಳು ಸೇರಿ ಎಲ್ಲಾಾ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಕಟ್ಟೆೆಚ್ಚರ ವಹಿಸಿದ್ದಾಾರೆ.
ಕಾರ್ಯಾಚರಣೆಯ ವೇಳೆ, ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುತ್ತಿಿದೆ. ಅವರ ವಿರುದ್ದ ಸಿಒಟಿಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿಿದೆ ಇದರೊಂದಿಗೆ ಐಎಂವಿ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತಿಿದೆ.
405 ಮಂದಿಯನ್ನು ವಶಕ್ಕೆೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. 204 ಮಂದಿ ವಿರುದ್ಧ ಸಿಒಟಿಪಿಒ ಪ್ರಕರಣ ದಾಖಲಾಗಿದೆ. ಜಾಮೀನು ಸಹಿತ ಪ್ರಕರಣ ಹಾಗೂ ಕೆಪಿ ಕಾಯ್ದೆೆಯಡಿ – 487 ಪ್ರಕರಣಗಳು ದಾಖಲಾಗಿದೆ. ಹೆಲ್ಮೆೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್ ಪ್ಲೇಟ್, ವೀಲಿಂಗ್ ಪ್ರಕರಣದಡಿ 33 ಮಂದಿ ವಿರುದ್ಧ ಪ್ರಕರಣ ದಾಖಲಿಸಿ 59 ವಾಹನಗಳು ವಶಕ್ಕೆೆ ಪಡೆಯಲಾಗಿದೆ.
ಮೈಸೂರಿನ ದೊಡ್ಡಕೆರೆ ಮೈದಾನ, ದಸರಾ ವಸ್ತು ಪ್ರದರ್ಶನದ ಪಾರ್ಕಿಂಗ್ ಸ್ಥಳ, ಜ್ವಾಲಾಮುಖಿ ಪಾರ್ಕಿಂಗ್ ಸ್ಥಳ, ಮಕ್ಕಳ ಉದ್ಯಾಾನವನ, ಆರ್ಎಂಸಿ ಬಸ್ ನಿಲ್ದಾಾಣ ಮುಂತಾದ ಸ್ಥಳಗಳಲ್ಲಿ ನಿರಂತರ ಪೊಲೀಸ್ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತೆೆ ಸೀಮಾ ಲಾರ್ಟ್ಕ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿಿದೆ.
ಡಿಸಿಪಿಗಳಾದ ಬಿಂದು ಮಣಿ, ಸುಂದರ್ ರಾಜ್ ನೇತೃತ್ವದಲ್ಲಿ ನಡೆಸಲಾಗುತ್ತಿಿರುವ ಕಾರ್ಯಾಚರಣೆ ಯಲ್ಲಿ ಎಸಿಪಿಗಳು, ಇನ್ಸಪೆಕ್ಟರ್ಗಳು, ಸಬ್ ಇನ್ಸ ಪೆಕ್ಟರ್ಗಳು, ಎಎಸ್ಐಗಳು, ಹೆಡ್ ಕಾನ್ಸ್ಟೇಬಲ್ ಗಳು, ಕಾನ್ಸ್ಟೇಬಲ್ಗಳು, ಮಹಿಳಾ ಸಿಬ್ಬಂದಿ ಸೇರಿ ಎಲ್ಲಾಾ ವಿಭಾಗದ ಪೊಲೀಸರು ಭಾಗಿಯಾಗಿದ್ದಾಾರೆ.
ಈ ಕಾರ್ಯಾಚರಣೆ ನಿರಂತರವಾಗಿ ನಡೆಸಲಾಗು ವುದು. ಇದಕ್ಕೆೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ವಾಗಿದ್ದು. ತಮ್ಮ ಸುತ್ತಮುತ್ತ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿಿದ್ದರೆ ಅಥವಾ ಅನುಮಾ ನಾಸ್ಪದ ಬೆಳವಣಿಗೆಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮ ಲಾಟ್ಕರ್ ಅವರು ಮನವಿ ಮಾಡಿದ್ದಾಾರೆ.
ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುವುದು, ಮೈಸೂರು ನಗರದಲ್ಲಿ ಶಾಂತಿ ಕಾಪಾಡಲು ಹಾಗೂ ಕಾನೂನು ಸುವ್ಯವಸ್ಥೆೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸಿ ಎಂದು ತಿಳಿಸಿದ್ದಾಾರೆ.