ಸುದ್ದಿಮೂಲ ವಾರ್ತೆ ಕಲಬುರಗಿ, ನ.20:
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲಗೆ ಸುಪ್ರೀೀಂಕೋರ್ಟ್ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮಗಳ ಮದುವೆ ಸಮಾರಂಭದ ಧಾರ್ಮಿಕ ವಿಧಿಗಳನ್ನು ಡಿ.4ರೊಳಗೆ ಪೂರೈಸಬೇಕಿದ್ದು, ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಆರ್.ಡಿ.ಪಾಟೀಲ ಸುಪ್ರೀೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಾಯಮೂರ್ತಿ ಕೆ.ವಿನೋದ ಚಂದ್ರನ ಅವರ ಏಕ ಸದಸ್ಯ ನ್ಯಾಾಯಪೀಠವು, ಪ್ರಕರಣದಲ್ಲಿ ಈಗಾಗಲೇ ದೋಷಾರೋಪಣೆ ಪಟ್ಟಿಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ದೊಡ್ಡ ಸಂಖ್ಯೆೆಯಲ್ಲಿ ಸಾಕ್ಷಿದಾರರಿರುವ ಕಾರಣ ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ಹಿಡಿಯುವ ಸಾಧ್ಯಗಳಿವೆ. ಹೀಗಾಗಿ ಅರ್ಜಿದಾರರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಲು ಒಲವು ತೋರುತ್ತದೆ ಎಂದು ಅಭಿಪ್ರಾಾಯ ಪಟ್ಟಿಿದ್ದಾರೆ.
ಜಾಮೀನು ಅವಧಿ ಮುಗಿದ ಬೆನ್ನಲ್ಲೇ ಅರ್ಜಿದಾರರು ವಿಚಾರಣಾ ನ್ಯಾಾಯಾಲಯಕ್ಕೆೆ ಹಾಜರಾಗಬೇಕು ಎಂದೂ ಸುಪ್ರೀೀಂಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದೆ.

