ಸುದ್ದಿಮೂಲ ವಾರ್ತೆ ಭಾಲ್ಕಿ, ಜ.05:
ಪಟ್ಟಣದಲ್ಲಿ 2026ರ ಏಪ್ರಿಿಲ್ ತಿಂಗಳಿನಲ್ಲಿ ನಡೆಯಲಿರುವ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭಕ್ಕೆೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾಾನಿಸಲಾಗಿದೆ.
ಧರ್ಮಸ್ಥಳಕ್ಕೆೆ ಸೋಮವಾರ ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಭೇಟಿ ನೀಡಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿ ಪೂಜ್ಯರ ಅಮೃತ ಮಹೋತ್ಸವ ಸಮಾರಂಭಕ್ಕೆೆ ಆಹ್ವಾಾನ ನೀಡಿದರು.
ಪೂಜ್ಯರು 75ನೇ ವಸಂತಕ್ಕೆೆ ಕಾಲಿರಿಸಿದ್ದು ಅವರ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಭಕ್ತ ವಲಯ ನಿರ್ಧಾರ ಕೈಗೊಂಡಿದೆ.
ಹಾಗಾಗಿ ತಾವುಗಳು ಕೂಡ ಈ ಒಂದು ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿ ಭಕ್ತರಿಗೆ ದರುಶನ ಭಾಗ್ಯ ಕಲ್ಪಿಿಸಬೇಕು ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುರತ್ಕಲ್ ಎನ್ಐಟಿ ಕಂಪ್ಯೂೂಟರ್ ವಿಭಾಗದ ಪ್ರಾಾಧ್ಯಾಾಪಕ ವಿಜಯಕುಮಾರ ಘೋದೆ, ಚನ್ನಬಸವೇಶ್ವರ ಗುರುಕುಲದ ಹಳೆಯ ವಿದ್ಯಾಾರ್ಥಿ ಆಶಿಶ್ ಬಸವರಾಜ ಮೊಳಕೀರೆ ಹಾಜರಿದ್ದರು.
ಪಟ್ಟದ್ದೇವರ ಅಮೃತ ಮಹೋತ್ಸವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ಆಹ್ವಾನ

