ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.05:
ನೂತನ ಎಸ್ಪಿಿಯಾಗಿ ಅಧಿಕಾರ ಸ್ವೀಕರಿಸಿದ್ದ ಕೆಲ ತಾಸುಗಳಲ್ಲೇ ಕರ್ತವ್ಯಲೋಪದ ಕಾರಣ ಸೇವೆಯಿಂದ ಅಮಾನತು ಆಗಿರುವ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಅವರ ತಂದೆ ಉದಯ್ ಶಂಕರ್ ನೆಜ್ಜೂರ್ ಅವರು – ೇಸ್ಬುಕ್ನಲ್ಲಿ ತಮ್ಮ ಪುತ್ರನ ‘ಆತ್ಮಹತ್ಯೆೆ ಸುಳ್ಳು’ಗೆ ಸ್ಪಷ್ಟನೆ ನೀಡಿದ್ದಾಾರೆ.
ಆತ್ಮೀಯರೇ,
ಬಳ್ಳಾರಿಯಲ್ಲಿ ಜನವರಿ 1ರ ಸಂಜೆ ನಡೆದ ಗಲಾಟೆ ನಿಭಾಯಿಸುವಲ್ಲಿ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರು ವಿಲವಾಗಿದ್ದಾಾರೆ ಅಂತಾ ಬಳ್ಳಾಾರಿಗೆ 24 ಗಂಟೆಗಳ ಹಿಂದಷ್ಟೇ ನೇಮಕವಾಗಿದ್ದ ಎಸ್ಪಿ ಪವನ್ ನೆಜ್ಜೂರ್ ಅವರನ್ನ ಸಸ್ಪೆೆಂಡ್ ಮಾಡಲಾಗಿದೆ. ಸೇವೆಯಿಂದ ಸಸ್ಪೆೆಂಡ್ ಆಗಿದ್ದಕ್ಕಾಾಗಿಯೇ ‘ಪವನ್ ಆತ್ಮಹತ್ಯೆೆಗೆ ಯತ್ನಿಿಸಿದ್ದಾಾನೆ’ ಎನ್ನುವುದು ಶುದ್ಧ ಸುಳ್ಳು. ಊಹಾಪೋಹ. ಯಾವುದೇ ಕಾರಣಕ್ಕೂ ನನ್ನ ಪುತ್ರ ಪವನ್ ಆತ್ಮಹತ್ಯೆೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾಾರೆ.
‘ನನ್ನ ಮಗ 2016ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಪವನ್ನ ತಂದೆಯಾಗಿ ಕೆಲ ವಿಷಯಗಳನ್ನು ತಮ್ಮ ಗಮನಕ್ಕೆೆ ತರಬಯಸುತ್ತೇನೆ. ಐಪಿಎಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ್ ನೆಜ್ಜೂರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ, ಬದ್ಧತೆ ಹಾಗೂ ಕಾನೂನು ಪಾಲನೆಗೆ ಖ್ಯಾಾತಿ ಪಡೆದಿದ್ದಾಾನೆ. ಕರ್ತವ್ಯ ನಿಷ್ಠೆೆಗೆ ಹೆಸರಾಗಿದ್ದಾಾನೆ. ಆದರೆ ಬಳ್ಳಾಾರಿಯಲ್ಲಿ ನಡೆದ ಗಲಭೆಯ ಘಟನೆ ನಂತರ ನನ್ನ ಪುತ್ರನ ಬಗ್ಗೆೆ ಸುಳ್ಳು ವದಂತಿಗಳನ್ನು ಹರಡಿಸುತ್ತಿಿರುವುದು ಬೇಸರ ಮೂಡಿಸಿದೆ’.
ಬಳ್ಳಾಾರಿ ಜಿಲ್ಲೆೆಯಲ್ಲಿ ನಡೆದ ಗಲಭೆ ಪ್ರಕರಣದ ಸಂದರ್ಭದಲ್ಲಿ ನನ್ನ ಪುತ್ರ ಪವನ್ ನೆಜ್ಜೂರು ತಮ್ಮ ಜವಾಬ್ದಾಾರಿ ಮರೆತಿಲ್ಲ. ಜನವರಿ 1ರಂದು ಎಸ್ಪಿಿಯಾಗಿ ಡಾ. ಶೋಭಾರಾಣಿ ವಿ.ಜೆ. ಅವರಿಂದ ಅಧಿಕಾರ ಸ್ವೀಕರಿಸಿ, ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಪೋಲೀಸರು ಹಮ್ಮಿಿಕೊಂಡಿದ್ದ ಬೀಳ್ಕೊೊಡುಗೆ ಸ್ವೀಕರಿಸಿ, ನಂತರ ನಡೆದ ಈ ಅಹಿತಕರ ಘಟನೆಯ ಸ್ಥಳಕ್ಕೆೆ ತಕ್ಷಣವೇ ಧಾವಿಸಿ ಪರಿಸ್ಥಿಿತಿ ನಿಭಾಯಿಸಿದ್ದಾಾರೆ. ಈ ವಿಷಯ ಇಲಾಖೆಯ ಎಲ್ಲರಿಗೂ ಗೊತ್ತು’.
ಗೃಹ ಇಲಾಖೆಯಲ್ಲಿ ಶಿಸ್ತಿಿನ ಸಿಪಾಯಿ, ದಕ್ಷ ಅಧಿಕಾರಿ ಆಗಿರುವ ನನ್ನ ಮಗ ಬಳ್ಳಾಾರಿ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆಯ ಘಟನೆ ಅನಿರೀಕ್ಷಿತ. ಆದಾಗ್ಯೂ ಕಾನೂನು ಸುವ್ಯವಸ್ಥೆೆಯ ಪಾಲನೆಗೆ ಸಂಪೂರ್ಣವಾಗಿ ಶ್ರಮಿಸಿ ಬೆಳಗಿನ ಜಾವವೂ ಮೃತರ ಅಂತ್ಯಕ್ರಿಿಯೆ ಸಂದರ್ಭ ಬಂದೋಬಸ್ತ್ ವ್ಯವಸ್ಥೆೆ ಮಾಡಿಯೂ ಅಮಾನತಿಗೆ ಒಳಪಟ್ಟಿಿದ್ದು, ಆತನಿಗೆ ಸಹಜವಾಗಿ ಬೇಸರ ಮೂಡಿಸಿ ಆಘಾತಕ್ಕೆೆ ಒಳಗಾಗಿದ್ದು ನಿಜ. ಆದರೆ, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆೆಯ ಪ್ರಯತ್ನ ಮಾಡಿಲ್ಲ. ಆತ್ಮಹತ್ಯೆೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿಿತಿ ಹೊಂದಿಲ್ಲ’.
‘ಈ ವಿಷಯವಾಗಿ ಕಪೋಲಕಲ್ಪಿಿತ ವಿಷಯಗಳು ಚರ್ಚೆ ಆಗುತ್ತಿಿರುವುದು ನಮಗೆ ಬೇಸರ ಹಾಗೂ ಮಗನ ಮರ್ಯಾದೆ, ಭವಿಷ್ಯದ ಬಗ್ಗೆೆ ಅತ್ಯಂತ ಆತಂಕ ಮೂಡಿಸಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಪುತ್ರ ಪವನ್ ನೆಜ್ಜೂರ್ ಆಘಾತಕ್ಕೆೆ ಒಳಗಾಗಿದ್ದಾಾನೆ. ಅಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಅದೂ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ, ಅಲ್ಲದೆ ದಕ್ಷತೆಯಿಂದ ಪ್ರಾಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಾಗಲೂ ಅನುಭವಿಸಬೇಕಾದ ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾಾರೆ.
‘ಅದೇನಿದ್ದರೂ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸಿದ್ದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನನ್ನ ಪುತ್ರನ ಬಗ್ಗೆೆ ಅನಗತ್ಯ ಹಾಗೂ ಸುಳ್ಳು ವದಂತಿಗಳನ್ನು ಹರಡಿಸದಂತೆ ಮತ್ತು ಆಘಾತಕ್ಕೆೆ ಒಳಗಾಗಿರುವ ಪವನ್ ನೆಜ್ಜೂರು ಅವರಿಗೆ ಕೊಂಚ ವಿಶ್ರಾಾಂತಿಯ ಅಗತ್ಯ ಇದೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆೆ ತರಬಯಸುತ್ತಾಾ, ಓರ್ವ ದಕ್ಷ ಅಧಿಕಾರಿಯ ತಂದೆಯಾಗಿ ನಿಮ್ಮೆಲ್ಲರಲ್ಲಿ ಮನವಿಸುವುದರ ಜೊತೆಗೆ ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರುಪರಿಶೀಲಿಸಿ ಎಂದು ಕೋರಿದ್ದಾಾರೆ.
ಪ್ರಶಾಂತ ನೆಜ್ಜೂರ್ ಅವರ ತಂದೆ ಉದಯ ನೆಜ್ಜೂರ್ ಅವರು ಸರ್ಕಾರಕ್ಕೆೆ ಮಾಡಿರುವ ಮನವಿಯಲ್ಲಿ ಯಾವುದೇ ತಪ್ಪಿಲ್ಲ. ಅಷ್ಟೇ ಅಲ್ಲ, ನಾಡಿನ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ. ಅಲ್ಲದೇ, ಸರ್ಕಾರ ಆದಷ್ಟು ಶೀಘ್ರದಲ್ಲಿ ಈ ಅಧಿಕಾರಿಗೆ ಯಾವುದಾದರೂ ಹುದ್ದೆೆಗೆ ನೇಮಕ ಮಾಡಬೇಕು ಎನ್ನುವುದು ಜನರ ಆಶಯವಾಗಿದೆ.

