ಸುದ್ದಿಮೂಲ ವಾರ್ತೆ ಬೆಂಗಳೂರು, ನ.23:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಾಮಿ ಅವರ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಬದುಕುತ್ತಿಿರುವ ಗಂಜಿ ಗಿರಾಕಿ ಎಂದು ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಜೆಡಿಎಸ್ ತಿರುಗೇಟು ನೀಡಿದೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ನಿಮ್ಮ(ಡಿ.ಕೆ.ಶಿವಕುಮಾರ್) ಧಮ್ಕಿಿಗೆ ಇಲ್ಲಿ ಯಾರೂ ಜಗ್ಗುವುದಿಲ್ಲ. ನಿಮ್ಮ ಹಳೇ ಚಾಳಿಗೆ, ರೌಡಿಸಂಗೆ ಯಾರೂ ಬೆದರಲ್ಲ ಎಂದು ಮೂದಲಿಸಿದೆ.
ಮಾಧ್ಯಮದವರು ಕೇಳುವ ಪ್ರಶ್ನೆೆಗಳಿಗೆ ಮೂರ್ಖರಂತೆ ಉತ್ತರ ಕೊಡುವ ನಿಮಗೆ ಅವರ ಪೂರ್ವಾಪರ ತಿಳಿದುಕೊಳ್ಳದೆ ಮಾತನಾಡುವ ಚಟ. ಕುಮಾರಸ್ವಾಾಮಿ ಅವರ ವಿಚಾರದಲ್ಲಿ ನೀವು ನಾಲಿಗೆ ಜಾರುತ್ತಿಿರುವುದು ಇದೇ ಮೊದಲಲ್ಲ. ತೀರಾ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆೆ ಜತೆ ಕುಮಾರಸ್ವಾಾಮಿಯವರ ಬಗ್ಗೆೆ ನಾಲಿಗೆ ಜಾರಿ ಪೆದ್ದರಾಗಿದ್ದೀರಿ ಎಂದು ವಾಗ್ದಾಾಳಿ ನಡೆಸಿದೆ.
ಅಧಿಕಾರದ ಲಾಲಸೆಗೆ ಯಾರು ಏನು ಹೇಳಿದ್ದಾರೆ, ಇಲ್ಲವೋ ಎಂಬುದನ್ನು ತಿಳಿಯದೇ ಅವಿವೇಕಿಯಂತೆ ವರ್ತಿಸುತ್ತಿಿದ್ದೀರಿ. ನಿಮ್ಮ ಶೈಲಿಯಲ್ಲಿ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಲು ನಮಗೆ ಬರುವುದಿಲ್ಲ ಎಂಬ ಭಂಡತನವೇ ನಿಮಗೆ. ನಿಮ್ಮ ಮಾತು, ಪದ ಬಳಕೆ ನೋಡಿದರೆ ನಿಮ್ಮ ಮಾನಸಿಕ ಸ್ವಾಾಸ್ಥ್ಯ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಬಗ್ಗೆೆ ಕರ್ನಾಟಕದ ಜನರು ಭೀತಿಗೊಂಡಿರುವುದಕ್ಕೆೆ ಇದೂ ಒಂದು ಕಾರಣ ಎಂದು ಆರೋಪಿಸಿದೆ.
ಬ್ಲಾಾಕ್ ಮೇಲ್ ಗಿರಾಕಿ, ಮತಿಗೇಡಿ ಡಿಕೆಶಿ, ಮೊದಲು ಎಚ್ .ಡಿ. ಕುಮಾರಸ್ವಾಾಮಿ ಅವರು ನಿಮ ಬಗ್ಗೆೆ ಆ ಹೇಳಿಕೆ ನೀಡಿದ್ದಾರೆಯೇ ಅದನ್ನು ಸಾಬೀತುಪಡಿಸಿ. ನೀವು ಮಾನನಷ್ಟ ಮೊಕದ್ದಮೆ ಹೂಡುವುದು ನಂತರದ ಮಾತು. ಅದಕ್ಕೂ ಮೊದಲು ಮಾನವೂ ಇರಬೇಕು, ಮತಿಯೂ ಇರಬೇಕು. ಇವೆರಡೂ ನಿಮಗೆ ಇದ್ದಿದ್ದರೆ ನಾಲಿಗೆಯಿಂದ ಇಂಥ ಅಣಿಮುತ್ತು ಉದುರುತ್ತಿಿರಲಿಲ್ಲ ಎಂದು ಜೆಡಿಎಸ್ ಜರಿದಿದೆ.
ಮಾತೆತ್ತಿಿದ್ದರೆ ಶ್ಲೋೋಕ ,ಇನ್ನೊೊಂದು ಹೇಳುವುದಲ್ಲ, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಿಯ ಬಿಡು ನಾಲಿಗೆ. ಮೊದಲು ದಾಸರು ಹೇಳಿರುವ ಈ ಸರಳ ಪದವನ್ನು ಓದಿ ಅರ್ಥ ಮಾಡಿಕೊಳ್ಳಿಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

