ಸುದ್ದಿಮೂಲ ವಾರ್ತೆ ಭಾಲ್ಕಿಿ, ಅ.03:
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಾಣ ರಾಜ್ಯ ಕಟ್ಟಿಿದ್ದರು ಎಂದು ಬಸವಕಲ್ಯಾಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ವಿಜಯದಶಮಿ(ದಸರಾ) ನಿಮಿತ್ತ ಆಯೋಜಿಸಿದ್ದ ಮರಣವೇ ಮಹಾನವಮಿ ಮತ್ತು ಕಲ್ಯಾಾಣ ಕ್ರಾಾಂತಿ ವಿಜಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರ ಕ್ರಾಾಂತಿಯಲ್ಲಿ ಅನೇಕ ಮಹಾಶರಣರು ಭಾಗಿಯಾಗಿದ್ದರು. ಅದರಲ್ಲಿ ಶರಣ ಹರಳಯ್ಯ ಮತ್ತು ಶರಣ ಮಧುವಯ್ಯನವರು ಬಸವಸ್ಥಾಾಪಿತ ಸಮತಾ ರಾಜ್ಯ ನಿರ್ಮಾಣಕ್ಕಾಾಗಿ ಬಲಿದಾನ ನೀಡಿದರು.
ಲಿಂಗಾಯತ ಧರ್ಮ ಸಾವಿರಾರು ಶರಣರ ತ್ಯಾಾಗ ಮತ್ತು ಬಲಿದಾನದ ಮೇಲೆ ನಿಂತಿದೆ. ವಿಶೇಷವಾಗಿ ಹರಳಯ್ಯ ಮತ್ತು ಮಧುವಯ್ಯನವರು ಸಮತಾ ತತ್ವಕ್ಕಾಾಗಿ ಎಳೆಹೂಟಿ ಶಿಕ್ಷೆ ಅನುಭವಿಸಿದರು.
ಆ ದಿನ ಮಹಾನವಮಿ ಅದಕ್ಕೆೆ ಶರಣರು ಮರಣವೇ ಮಹಾನವಮಿ ಎಂದು ಹೇಳಿದರು. ಶರಣರಿಗೆ ಶಿಕ್ಷೆಯಾಗಿದ್ದರೂ ಅವರು ಶರಣತತ್ವಕ್ಕಾಾಗಿ ತಮ್ಮ ಬಲಿದಾನ ನೀಡಿದ್ದಾರೆಂದು ಅದು ನಮಗೆ ಸೋಲಲ್ಲ ಗೆಲವು ಎಂದು ತಿಳಿದು ಕಲ್ಯಾಾಣ ಕ್ರಾಾಂತಿ ವಿಜಯೋತ್ಸವ ಆಚರಿಸುತ್ತ ಬಂದಿದ್ದೇವೆ.
ಶರಣರ ತ್ಯಾಾಗ ಬಲಿದಾನ ಜಗತ್ತಿಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆೆಲ್ಲರದ್ದಾಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ, ಮಾಜಿ ಶಾಸಕ ಪ್ರಕಾಶ ಖಂಡ್ರೆೆ, ಹರಳಯ್ಯ ಸಮಾಜದ ಅಧ್ಯಕ್ಷರು, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪಾರ್ವತಿ ಧೂಮ್ಮನಸೂರೆ ಸೇರಿದಂತೆ ಹಲವರು ಇದ್ದರು.
ರಾಜು ಜುಬರೆ ವಚನ ಗಾಯನ ನಡೆಸಿಕೊಟ್ಟರು. ಶಂಭುಲಿಂಗ ಕಾಮಣ್ಣ ಸ್ವಾಾಗತಿಸಿದರು. ನವಲಿಂಗ ಪಾಟೀಲ್ ನಿರೂಪಿಸಿದರು.
ಬಾಕ್ಸ್
ಪಲ್ಲಕ್ಕಿಿ ಮೆರವಣಿಗೆ
ಪಟ್ಟಣದಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಾಣ ಕ್ರಾಾಂತಿ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿಿ ಮೆರವಣಿಗೆ ವೈಭವದಿಂದ ನೆರವೇರಿತು. ಹಿರೇಮಠ ಸಂಸ್ಥಾಾನದಿಂದ ಆರಂಭಗೊಂಡ ಪಲ್ಲಕ್ಕಿಿ ಮೆರವಣಿಗೆ ಪ್ರಮುಖ ಬೀದಿ, ರಸ್ತೆೆ ಮೂಲಕ ಸಂಚರಿಸಿ ಚನ್ನಬಸವಾಶ್ರಮ ಪರಿಸರದಲ್ಲಿ ಸಮಾವೇಶಗೊಂಡಿತು.
ಅ.5ಕ್ಕೆೆ ಬಸವ ಸಂಸ್ಕೃತಿ ಸಮಾರೋಪ
ಅ.5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಜರುಗಲಿದೆ ಜಿಲ್ಲೆಯ ಬಸವ ಭಕ್ತರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕು ಎಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವತಿಯಿಂದ ಕಳೆದ ಸೆ.1ರಿಂದ 30ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಗಿಬಂದ ಬಸವ ಸಂಸ್ಕೃತಿ ಅಭಿಯಾನ ಅತ್ಯಂತ ಯಶಸ್ವಿಿ ಕಂಡಿದೆ ಎಂದು ತಿಳಿಸಿದರು.
ಕಲ್ಯಾಾಣ ಕ್ರಾಾಂತಿ ವಿಜಯೋತ್ಸವ ಶರಣರ ತ್ಯಾಾಗ ಬಲಿದಾನ ಮರಿಯದಿರಿ
