ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.07:
ಬೆಳೆಹಾನಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯದ ರೈತರು ವ್ಯಾಾಪಕ ಶ್ಲಾಾಘನೆ ವ್ಯಕ್ತಪಡಿಸಿದ್ದಾರೆ, ಆದಾಗ್ಯೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಹೆಚ್ಚುಕಮ್ಮಿಿ ಆಗಿದೆ ಎಂಬ ದೂರುಗಳಿವೆ. ಇವನ್ನೆೆಲ್ಲ ಗಮನಿಸಲಾಗಿದ್ದು ಬೆಳಗಾವಿ ಸದನದಲ್ಲಿ ಪ್ರಸ್ತಾಾಪಿಸಿ ರೈತರಿಗೆ ಹೆಚ್ಚಿಿನ ಪರಿಹಾರ ದೊರಕಿಸಲು ಯತ್ನಿಿಸಲಾಗುತ್ತದೆ ಎಂದು ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ರಾಜ್ಯದ 14.24 ಲಕ್ಷ ಲಾನುಭವಿಗಳಿಗೆ ಒಟ್ಟು 1,033.60 ಕೋಟಿ ಇನ್ ಪುಟ್ ಸಬ್ಸಿಿಡಿ ಮೊತ್ತ ರೈತರ ಖಾತೆಗೆ ವರ್ಗಾವಣೆ ಆರಂಭಿಸಿದೆ, ಈಗಾಗಲೇ 2 ಕಂತುಗಳಲ್ಲಿ ಹಣ ರೈತರ ಖಾತೆಗೆ ತಲುಪಿದೆ. ಕೆಲವು ಖಾತೆಗಳು ಲಿಂಕ್ ಆಗದ್ದಕ್ಕೆೆ ಹಣ ವರ್ಗಾವಣೆಯಾಗಿಲ್ಲ. ಆ ಸಮಸ್ಯೆೆ ಕೂಡಾ ಪರಿಹರಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿಿದೆ.
ಈ ಮಧ್ಯೆೆ ಸಮೀಕ್ಷೆಯಲ್ಲಿನ ಕೆಲವು ದೋಷಗಳು, ಹಣ ವಿತರಣೆಯಲ್ಲಿನ ಹೆಚ್ಚು ಕಮ್ಮಿಿ ಇವೆಲ್ಲವೂ ಚರ್ಚೆಯಲ್ಲಿವೆ. ಪತ್ರಿಿಕೆ ವರದಿಗಳನ್ನೂ ಗಮನಿಸಲಾಗಿದೆ. ಇವನ್ನೆೆಲ್ಲ ಬೆಳಗಾವಿ ಸದನದಲ್ಲಿ ಸರ್ಕಾರದ ಗಮನಕ್ಕೆೆ, ಸಿಎಂ ಹಾಗೂ ಕೃಷಿ ಸಚಿವರ ಗಮನಕ್ಕೆೆ ತಂದು ರೈತರಿಗೆ ಪರಿಹಾರ ಕೈ ತಲುಪುವಂತೆ ಮಾಡಲಾಗುತ್ತದೆ ಎಂದು ಜಡಾ. ಅಜಯ್ ಸಿಂಗ್ ಭರವಸೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಒಟ್ಟು 3.24 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಅದರಲ್ಲಿ ಪಾವತಿಗೆ ಪರಿಗಣಿಸಲಾಗಿರುವ ವಿಸ್ತೀರ್ಣ 2,91,381.52 ಹೆಕ್ಟರ್ ಇದ್ದು ಒಟ್ಟು 3.23 ಲಕ್ಷ ಲಾನುಭವಿ ರೈತರಿಗೆ ರೂ 25,097.21 ಲಕ್ಷ ಪಾವತಿ ಪ್ರಕ್ರಿಿಯೆಯಲ್ಲಿದೆ.
ರಾಜ್ಯದ 14.24 ಲಕ್ಷ ಲಾನುಭವಿಗಳಿಗೆ ಇನ್ ಪುಟ್ ಸಬ್ಸಿಿಡಿ ರೂ 1,033.60 ಕೋಟಿ ರೈತರ ಖಾತೆಗೆ ವರ್ಗಾವಣೆಗೆ ಕ್ರಮವಹಿಸಲಾಗಿದ್ದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಪರಿಹಾರದ ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಮೂಲಕ ಪರಿಹಾರ ಹಂಚಿಕೆಗೆ ಚಾಲನೆ ನೀಡಿದ್ದಾರೆ
ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗದಲ್ಲಿ ಅತಿವೃಷ್ಟಿಿಯಿಂದ ರೈತರ ಬದುಕು ದುಸ್ಥರವಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿಿ ಗಳಿಗೆ ಪರಿಸ್ಥಿಿತಿಯ ಗಂಭೀರತೆಯ ಬಗ್ಗೆೆ ಗಮನಕ್ಕೆೆ ತರಲಾಗಿತ್ತು, ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿಿಗಳು ಕಲಬುರಗಿಯಲ್ಲಿ ಪರಿಹಾರ ಘೋಷಣೆ ಮಾಡಿದ್ದರು. ಎನ್ಡಿಿಆರ್ಎ್ ನಿಯಮಗಳಲ್ಲಿರುವ ಮೊತ್ತದೊಂದಿಗೆ ಹೆಚ್ಚುವರಿ ಪರಿಹಾರ ಮೊತ್ತ ಘೋಷಿಸಲಾಗಿತ್ತು.
ವೈಮಾನಿಕ ಸಮೀಕ್ಷೆಯ ವೇಳೆ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದ ಸಿಎಂ ರೈತರ ಕಷ್ಟ ನಷ್ಟಗಳನ್ನು ಅವಲೋಕಿಸಿದ್ದರು. ಅಂತೆಯೇ ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚಿಿನ ಪರಿಹಾರ ದೊರಕಿದೆ. ರೈತರು ಕಾಂಗ್ರೆೆಸ್ ಸರ್ಕಾರದ ರೈತ ಪರ ಧೋರಣೆಯನ್ನು ಮನಗಾಣಬೇಕು. ಪರಿಹಾರ ವಿತರಣೆಯಲ್ಲಿನ ದೋಷಗಳನ್ನು, ತಾಂತ್ರಿಿಕ ನ್ಯೂನತೆಗಳನ್ನು ಶೀಘ್ರ ಸರಿಪಡಿಸಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಬೆಳೆಹಾನಿ ಪರಿಹಾರಕ್ಕೆ ಕ್ರಮ ; ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್

