ಸುದ್ದಿಮೂಲ ವಾರ್ತೆ ರಾಯಚೂರು, ಅ.02:
ಅಕಾಲಿಕ ಮಳೆ, ನದಿ ಪ್ರವಾಹದ ಹಿನ್ನೆೆಲೆಯಲ್ಲಿ ರಾಯಚೂರು ಗ್ರಾಾಮೀಣ ಕ್ಷೇತ್ರದ ವಿವಿಧ ಗ್ರಾಾಮಗಳಲ್ಲಿ ಶಾಸಕ ಬಸನಗೌಡ ದದ್ದಲ್ ಇಡೀ ದಿನ ಪ್ರವಾಸ ಮಾಡಿ ಹಾನಿ ಬಗ್ಗೆೆ ಪರಿಶೀಲಿಸಿದರು.
ಬುಧವಾರ ಬೆಳಿಗ್ಗೆೆ ಚಿಕ್ಕಸೂಗುರು, ದೇವಸಗೂರು, ಚಂದ್ರಬಂಡಾ ಜಿಲ್ಲಾ ಪಂಚಾಯತ್ ವ್ಯಾಾಪ್ತಿಿಯ ನಾನಾ ಪ್ರದೇಶಗಳಲ್ಲಿ ಸಂಚರಿಸಿ ಹತ್ತಿಿ, ಭತ್ತ ಮತ್ತಿಿತರ ಬೆಳೆಗಳ ಹಾನಿ ಖುದ್ದು ಪರಿಶೀಲಿಸಿದರು.
ಜಮೀನಿನೊಳಗೆ ಕಾಲಿಡಲು ಆಗದಷ್ಟು ಹತ್ತಿಿ ಬೆಳೆ ಗಿಡಗಳು ದೊಡ್ಡದಾಗಿ ಬೆಳೆದಿದ್ದವು. ಆದರೆ, ಅತಿಯಾದ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಹತ್ತಿಿ ಬೆಳೆ ಕೈಗೆ ಸಿಗದಂತಾಗಿದೆ. ಹತ್ತಿಿ ಗಿಡ ಕೆಂಪಾಗುತ್ತಿಿವೆ, ಲ ಉದುರುತ್ತಿಿವೆ . ತೊಗರಿ ಇತರ ಬೆಳೆಗೂ ಹಾನಿಯಾಗಿದೆ ಸಮರ್ಪಕ ಪರಿಹಾರ ಕೊಡಿಸಬೇಕು ಎಂದು ರೈತರು ಮನವಿ ಮಾಡಿದರು.
ಸರ್ಕಾರಕ್ಕೆೆ ವರದಿ: ರಾಯಚೂರು ಗ್ರಾಾಮೀಣ ಕ್ಷೇತ್ರದಲ್ಲಿ ಬಹುತೇಕ ರೈತರು ಹತ್ತಿಿ ಬೆಳೆ ಬೆಳೆದಿದ್ದಾರೆ. ಒಂದು ಬಾರಿಯಾದರು ಹತ್ತಿಿ ಬಿಡಿಸದೇ ಇರುವಂತಹ ಸಂದರ್ಭದಲ್ಲಿ ಮಳೆ ಸುರಿದು ಕೃಷ್ಣಾಾ ಹಾಗೂ ತುಂಗಭದ್ರಾಾ ನದಿಗಳು ಉಕ್ಕಿಿ ಹರಿದು, ಹಳ್ಳ ಕೊಳ್ಳಗಳ ತುಂಬಿ ಜಮೀನಿಗೆ ನೀರು ನುಗ್ಗಿಿ ಸಲಿಗೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನು ಒಡೆಯದೇ ಇರುವ ಕಾಯಿಗಳು ಸಹ ಕೊಳೆತಿವೆ. ಇರುವ ಕಾಯಿಗಳು ಉದುರುತ್ತಿಿವೆ. ತಹಶಿಲ್ದಾಾರರು, ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಾಮ ಸಹಾಯಕರು ಸೇರಿದಂತೆ ಬೇರೆ ಬೇರೆ ಅಧಿಕಾರಿಗಳು ನಿರಂತರ ಕಾಲ ಅತಿವೃಷ್ಟಿಿಯಿಂದಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆೆ ವರದಿ ಕಳುಹಿಸುತ್ತಿಿದ್ದೇವೆ ಎಂದು ಶಾಸಕರು ರೈತರಿಗೆ ತಿಳಿಸಿದರು.
ಅಂದಾಜು 6 ಸಾವಿರ ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ಬೆಳೆ ಹಾನಿಯ ಪ್ರಮಾಣದ ಬಗ್ಗೆೆ ವರದಿ ಮಾಡುತ್ತಿಿದ್ದಾರೆ. ಹಾನಿಗೊಳಗಾದ ಪ್ರದೇಶದ ಪ್ರಮಾಣ ಇನ್ನು ಹೆಚ್ಚಾಾಗಲಿದೆ ಎಂದು ಶಾಸಕರು ತಿಳಿಸಿದ್ದಾಾರೆ.
ಮಾರ್ಗಸೂಚಿ ಪ್ರಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿಿ ಸಿದ್ಧರಾಮಯ್ಯ ಅವರು ಕಲಬುರಗಿ ಜಿಲ್ಲೆಯ ಮಾದರಿಯಲ್ಲಿಯೇ ಜಿಲ್ಲೆೆಯ ರೈತರಿಗೂ ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರೋೋತ್ಸಾಾಹ ಧನ ಕೊಡುವ ಬಗ್ಗೆೆ ಸರ್ಕಾರದಿಂದ ಆದೇಶವಾಗಲಿದೆ. ರೈತರು ಧೈರ್ಯದಿಂದ ಇರಬೇಕು ಎಂದು ಶಾಸಕರು ರೈತರಿಗೆ ಧೈರ್ಯ ತುಂಬಿದರು.
ಅಧಿಕಾರಿಗಳಿಗೆ ಸೂಚನೆ : ತಹಶೀಲ್ದಾಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ರಾಯಚೂರು ತಾಲೂಕು ಮಟ್ಟದ ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರು ರೈತರ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಸಮೀಕ್ಷೆ ಅಚ್ಚುಕಟ್ಟಾಾಗಿ ನಡೆಯಬೇಕು. ಹಾನಿಗೊಳಗಾದ ಎಲ್ಲ ರೈತರಿಗೂ ನ್ಯಾಾಯ ಸಿಗಬೇಕು. ಎಲ್ಲ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಬೇಕು. ನಮ್ಮಲ್ಲಿ ಸಮೀಕ್ಷೆ ನಡೆಸಲು ಯಾರು ಬಂದಿಲ್ಲ ಎಂದು ಯಾವ ರೈತರು ದೂರು ನೀಡದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಕೇಂದ್ರ ಸ್ಥಾಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿಿನ ಸೂಚನೆ ನೀಡಿದರು.
ಅತಿಯಾದ ಮಳೆಯ ಜೊತೆಗೆ ರೋಗಬಾಧೆಯಿಂದಲೂ ಹತ್ತಿಿ ಬೆಳೆಗೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿಗಳು ಇದೇ ವೇಳೆ ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾಾರ ಸುರೇಶ ವರ್ಮಾ, ಕೃಷಿ ಅಧಿಕಾರಿ ದೀಪಾ, ತೋಟಗಾರಿಕಾ ಅಧಿಕಾರಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ವಿವಿಧ ಗ್ರಾಾಮಸ್ಥರು ಮತ್ತು ಇನ್ನಿಿತರರು ಇದ್ದರು.