ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.01:
ಮಾಜಿ ಶಾಸಕ ಹಾಗೂ ಮಾಜಿ ಸಚಿವ ಕೆ.ಶಿವನಗೌಡ ನಾಯಕ ರಾಜ್ಯದ ಯುವಜನರ ಹಾಗೂ ವಿದ್ಯಾಾರ್ಥಿಗಳ ಸಮಸ್ಯೆೆಗಳ ಈಡೇರಿಸುವವಂತೆ ಮುಖ್ಯಮಂತ್ರಿಿ ಸಿದ್ಧರಾಮಯ್ಯ ಅವರಿಗೆ ಒತ್ತಾಾಯ ಮಾಡಿದ್ದಾರೆ.
ಬಿಸಿಎಂ ವಸತಿನಿಲಯಗಳ ಅರ್ಜಿ ಹಾಗೂ ಸೀಟುಗಳ ಕೊರತೆಯಿಂದ ವಿದ್ಯಾಾರ್ಥಿಗಳು ಅನುಭವಿಸುತ್ತಿಿರುವ ಸಂಕಷ್ಟದ ವಿಷಯವು ಮಾಧ್ಯಮಗಳ ಮೂಲಕ ತಮಗೆ ತಿಳಿದು ಬಂದಿದೆ ಎಂದು ನಾನು ಭಾವಿಸಿರುವೆ.
ನಿಮ್ಮ ಐದು ಗ್ಯಾಾರೆಂಟಿಗಳ ಜೊತೆಗೆ, ನಾಡಿನ ಭವಿಷ್ಯವಾಗಿರುವ ವಿದ್ಯಾಾರ್ಥಿಗಳ ಹಿತಕ್ಕಾಾಗಿ-ಅವರ ಭವ್ಯ ಬದುಕಿಗೆ ಬೆಳಕಾಗುವಂತೆ, ಬಡತನದ ಬೇಗೆಯಲ್ಲಿ ಬೇಯುತ್ತಿಿರುವ ವಿದ್ಯಾಾರ್ಥಿಗಳಿಗೆ ನಿಮ್ಮ ಭರವಸೆಯ ಮತ್ತೊೊಂದು ಗ್ಯಾಾರೆಂಟಿಯ ಅಗತ್ಯವಿದೆ..!
ತಾವು ಈ ಚಳಿಗಾಲದ ಅಧಿವೇಶನದಲ್ಲೇ ಬೇಡಿಕೆಗೆ ಅನುಗುಣವಾಗಿ, ರಾಜ್ಯದಾದ್ಯಂತ ಜಿಲ್ಲಾವಾರು ಹೆಚ್ಚುವರಿ ಒಂದು ಸಾವಿರ (1000) ಎಸ್ಸಿ-ಎಸ್ಟಿ ಮತ್ತು ಬಿಸಿಎಂ ವಸತಿ ನಿಲಯಗಳನ್ನು ಸ್ಥಾಾಪನೆಯನ್ನು ಘೋಷಿಸಿ – ನೊಂದವರ, ಬಡವರ ಮತ್ತು ಹಿಂದುಳಿದ ವಿದ್ಯಾಾರ್ಥಿಗಳ ಅಭಿವೃದ್ದಿ ಪರ ನಾಯಕನೆಂದು ನಾಡಿಗೆ ಮತ್ತೊೊಮ್ಮೆೆ ನಿರೂಪಿಸಬೇಕೆಂದು ಕೆ.ಶಿವನಗೌಡ ನಾಯಕ ಅವರು ಪತ್ರ ಬರೆದು ಕೋರಿದ್ದಾಾರೆ.
ಮನೆಯಲ್ಲೇ ತುತ್ತಿಿನ ಅನ್ನಕ್ಕೂ ಕೊರತೆಯಿರುವ ಅನೇಕ ಮಕ್ಕಳು ಶಿಕ್ಷಣಕ್ಕಾಾಗಿ ವಸತಿ ನಿಲಯಗಳನ್ನು ಆಶ್ರಯ ತಾಣವೆಂದು ನಂಬಿಕೊಂಡಿದ್ದಾರೆ. ಈ ಸತ್ಯವನ್ನು ತಾವು ಮತ್ತೊೊಮ್ಮೆೆ ಮನನ ಮಾಡಿಕೊಂಡು, ವಿದ್ಯಾಾರ್ಥಿಗಳ ಭವಿಷ್ಯಕ್ಕಾಾಗಿ ಧೈರ್ಯದ ನಿರ್ಧಾರ ಕೈಗೊಳ್ಳಬೇಕಾಗಿ ಬಡ ಮಕ್ಕಳ ಪಾಲಕರ ಪರ ಮನವಿ ಪತ್ರ ಸಲ್ಲಿಸಿ ಒತ್ತಾಾಯಿಸಿದ್ದಾಾರೆ.
ಮಾಜಿ ಸಚಿವ ಕೆ.ಶಿ.ನಾ. ಅವರಿಂದ ಸಿಎಂಗೆ ಪತ್ರ ವಿದ್ಯಾರ್ಥಿ, ಯುವಜನರ ಬೇಡಿಕೆ ಈಡೇರಿಸಲು ಒತ್ತಾಯ

