ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ಸ್ಥಳೀಯ ಪಿಎಲ್ಡಿ ಬ್ಯಾಾಂಕ್ ಅಧ್ಯಕ್ಷರಾಗಿ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷರಾಗಿ ಸಿದ್ದನಗೌಡ ಮಾಟೂರು ಅವರು ಸತತ ಮೂರನೇ ಅವಧಿಗೆ ಅವಿರೋಧ ಆಯ್ಕೆೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾಾರೆ.
ಪಿಎಲ್ಡಿ ಬ್ಯಾಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾಾರ್ ಅರುಣ ಹೆಚ್.ದೇಸಾಯಿ ಚುನಾವಣಾ ಪ್ರಕ್ರಿಿಯೆ ನಡೆಸಿದರು. ಅಧ್ಯಕ್ಷ ಸ್ಥಾಾನಕ್ಕೆೆ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ಸಿದ್ದನಗೌಡ ಮಾಟೂರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವರ ಅವಿರೋಧ ಆಯ್ಕೆೆ ಘೋಷಿಸಿದರು.
ದಾಖಲೆ:
ಪಿಎಲ್ಡಿ ಬ್ಯಾಾಂಕಿನ 63 ವರ್ಷಗಳ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮೂರನೇ ಅವಧಿಗೆ ಸತತ ಅಧ್ಯಕ್ಷ ಸ್ಥಾಾನಕ್ಕೆೆ ಅವಿರೋಧವಾಗಿಯೇ ಆಯ್ಕೆೆಯಾದ ಮೊದಲಿಗರು ಎನ್ನುವ ಕೀರ್ತಿಗೂ ಎಂ.ದೊಡ್ಡಬಸವರಾಜ ಪಾತ್ರರಾದರು. ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು, ರೈತರು ಹಾಗೂ ಎಲ್ಲ ನಿರ್ದೇಶಕರು, ಹಿರಿಯರ ಸಹಕಾರದೊಂದಿಗೆ ಬ್ಯಾಾಂಕ್ ಮುನ್ನಡೆಸಿಕೊಂಡು ಹೋಗುವ ಜವಾಬ್ದಾಾರಿ ನನಗೆ ವಹಿಸಿದ್ದು, ಈ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿಿನ ಸೌಲಭ್ಯ ಕಲ್ಪಿಿಸಲಾಗುವುದು. ಮುಖ್ಯವಾಗಿ ಅವಕಾಶ ವಂಚಿತರಿಗೆ ಹೆಚ್ಚಿಿನ ಆದ್ಯತೆ ನೀಡಲಾಗುವುದು. 2026 ರಿಂದ 2031 ರವರೆಗೆ ಆಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ಅವಿರೋಧ ಆಯ್ಕೆೆ:
ಪಿಎಲ್ಡಿ ಬ್ಯಾಾಂಕಿನ ಎಲ್ಲ ನಿರ್ದೇಶಕರೂ ಕೂಡ ಅವಿರೋಧವಾಗಿಯೇ ಆಯ್ಕೆೆಯಾಗಿದ್ದಾಾರೆ. ಸಾಲಗುಂದಾ ಕ್ಷೇತ್ರದಿಂದ ಕೆ.ಕರಿಲಿಂಗಪ್ಪ, ಗುಡದೂರು ಕ್ಷೇತ್ರದಿಂದ ರಮೇಶ ಅಮರಪ್ಪ, ಮಾಡಸಿರವಾರದಿಂದ ರಾಮಣ್ಣ ಗಿಣಿವಾರ, ಜವಳಗೇರಾದ ರೇವಣಸಿದ್ದಪ್ಪ, ಬಳಗಾನೂರು ಕ್ಷೇತ್ರದಿಂದ ಲಿಂಗಪ್ಪ, ಕುನ್ನಟಗಿಯ ವೆಂಕಣ್ಣ ತಿಪ್ಪನಹಟ್ಟಿಿ, ಹುಡಾದಿಂದ ರಮೇಶ ಮುಕ್ಕುಂದಾ, ವಲ್ಕಂದಿನ್ನಿಿ ಕ್ಷೇತ್ರದಿಂದ ಹನುಮಂತಮ್ಮ ಮಣ್ಣಿಿಕೇರಿ ಕ್ಯಾಾಂಪ್, ಗೋರೆಬಾಳದಿಂದ ಶಿವಪ್ಪ ಸಾಸಲಮರಿ, ತುರುವಿಹಾಳದಿಂದ ಲಲಿತಮ್ಮ ಉಮಲೂಟಿ, ಜಾಲಿಹಾಳದಿಂದ ಹೇಮಾವತಿ ಭೀಮರಾಜ ಕ್ಯಾಾಂಪ್, ಕೆ.ಬಸಾಪರ ಕ್ಷೇತ್ರದ ಈರಣ್ಣ ಅವರೂ ಕೂಡ ನಿರ್ದೇಶಕರಾಗಿ ಅವಿರೋಧ ಆಯ್ಕೆೆಗೊಂಡರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಭೀಮಣ್ಣ, ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಸಿದ್ರಾಾಮೇಶ ಮನ್ನಾಾಪುರ, ಸಿಂಧನೂರು ವಿವಿಧೋದ್ದೇಶ ಕೃಷಿ ಪತ್ತಿಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಸಹಾಯಕ ಚುನಾವಣಾಧಿಕಾರಿ ಕಿರಣಕುಮಾರ್, ಪಿಎಲ್ಡಿ ಬ್ಯಾಾಂಕ್ ಮ್ಯಾಾನೇಜರ್ ಮಲ್ಲಯ್ಯ ಸೇರಿದಂತೆ ಹಲವರು ಉಪಸ್ಥಿಿತರಿದ್ದರು.
ಪಿಕಾರ್ಡ್ ಬ್ಯಾಾಂಕ್ ಚುನಾವಣೆ ಸತತ ಮೂರನೇ ಬಾರಿಗೆ ಅಧ್ಯಕ್ಷರಾದ ಎಂ.ದೊಡ್ಡಬಸವರಾಜ

